ರಾಮಮಂದಿರದೊಂದಿಗೆ ಶಿವಾಲಯವೂ ನಿರ್ಮಾಣವಾಗಲಿ
ರಂಭಾಪುರಿ ಜಗದ್ಗುರು ಡಾ| ಪ್ರಸನ್ನ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ವಿಶ್ವ ಹಿಂದೂ ಪರಿಷತ್ ಸದಸ್ಯರಿಗೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನಿ ಧಿಯ ಚೆಕ್ ಹಸ್ತಾಂತರಿಸಿದರು
Team Udayavani, Jan 31, 2021, 4:44 PM IST
ಬಾಳೆಹೊನ್ನೂರು: ಅಯೋಧ್ಯೆಯಲ್ಲಿ·ನಿರ್ಮಾಣವಾಗುತ್ತಿರುವ ಶ್ರೀರಾಮ·ಮಂದಿರದ ಆವರಣದಲ್ಲಿ ಶ್ರೀರಾಮ·ಪೂಜಿಸಿದ ಶಿವಲಿಂಗವನ್ನು ಪ್ರತಿಷ್ಠಾಪಿಸಿ·ಶಿವಾಲಯ ನಿರ್ಮಾಣ ಮಾಡಬೇಕು·ಎಂದು ರಂಭಾಪುರಿ ಜಗದ್ಗುರು ಡಾ|·ವೀರಸೋಮೇಶ್ವರ ಶಿವಾಚಾರ್ಯ
ಸ್ವಾಮೀಜಿ ಹೇಳಿದ್ದಾರೆ.
ರಂಭಾಪುರಿ ಪೀಠದಲ್ಲಿ ಶನಿವಾರ·ವಿಶ್ವ ಹಿಂದೂ ಪರಿಷತ್ ಸದಸ್ಯರಿಗೆ·ಶ್ರೀರಾಮ ಮಂದಿರ ನಿರ್ಮಾಣಕ್ಕೆ·ದೇಣಿಗೆ ನಿಧಿ ಯ ಚೆಕ್ ಹಸ್ತಾಂತರಿಸಿದ·ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ·ಅವರು, ಆಯೋಧ್ಯೆಯಲ್ಲಿ ಶ್ರೀರಾಮ·ಮಂದಿರ ನಿರ್ಮಾಣಗೊಳ್ಳುತ್ತಿರುವುದು
ಸಮಸ್ತ ಹಿಂದೂ ಬಾಂಧವರ ಬಹುದಿನಗಳ·ಕನಸು ನನಸಾದ ಸಂದರ್ಭವಾಗಿದೆ .
·ಶ್ರೀರಾಮನ ಆದರ್ಶ ಗುಣಗಳು ನಾಡಿನ·ಜನಮನದಲ್ಲಿ ಬೆಳೆದು ಬರಬೇಕು·ಎಂಬುದು ನಮ್ಮ ಸದಾಶಯವಾಗಿದ್ದು,·ರಾಮಮಂದಿರ ನಿರ್ಮಾಣಕ್ಕಾಗಿ ನಾಡಿನ·ನಾನಾ ಭಾಗಗಳಿಂದ ಎಲ್ಲ ವರ್ಗ,ಸಮುದಾಯಗಳ ಜನರು ಸಹಕರಿಸಿ·ಉದಾತ್ತವಾದ ಕೊಡುಗೆ ನೀಡುತ್ತಿರುವುದು·ಸಂತಸದ ವಿಷಯವಾಗಿದೆ. ಈ·ಹಿಂದೆ ಅಯೋಧ್ಯೆಯ ಶ್ರೀರಾಮ·ಮಂದಿರದ ಆವರಣದಲ್ಲಿ ಶ್ರೀರಾಮ·ಪೂಜಿಸಿದ ಶಿವಲಿಂಗವೂ ಸಹ·ದೊರೆತಿರುವುದು ಐತಿಹಾಸಿಕ ಮತ್ತು·ಪೌರಾಣಿಕ ಘಟನೆಗೆ ಒತ್ತು ನೀಡಿದೆ.·ಜಗತ್ತಿನಲ್ಲಿ ಶಿವನೇ ಸರ್ವಸ್ವ. ಶಿವನಿಲ್ಲದೇ·ಜಗತ್ತಿಲ್ಲ. ಜಗತ್ತಿನ ಬಹುಸಂಖ್ಯಾತ·ಜನರು ಶಿವನ ಆರಾಧಕರಾಗಿದ್ದಾರೆ.·ಎಲ್ಲ ಜೀವ ಜಂತುಗಳಿಗೂ·ಶಿವನೇ ಮೂಲವಾಗಿದ್ದಾನೆ. ಶ್ರೀರಾಮನೂ·ಸಹ ರಾಮಾಯಣ ಕಾಲದಲ್ಲಿ ಇದನ್ನು·ಅರಿತು ಶಿವನನ್ನು ಆರಾ ಧಿಸಿ, ಪೂಜಿಸಿ·ಒಲಿಸಿಕೊಂಡ ವ್ಯಕ್ತಿಯಾಗಿದ್ದಾನೆ. ಶಿವ·ಜಗತ್ತಿನ ಎಲ್ಲ ಜೀವಿಗಳ ಆತ್ಮವಾಗಿದ್ದಾನೆ.
ಈ ಹಿನ್ನೆಲೆಯಲ್ಲಿ ಮಂದಿರ ನಿರ್ಮಾಣದ·ಸಮಿತಿಯ ಸದಸ್ಯರು ಈ ಹಿಂದೆ ದೊರತಿರುವ ಶ್ರೀರಾಮಚಂದ್ರ·ಪೂಜೆ ಮಾಡಿದ ಶಿವಲಿಂಗವನ್ನು
ರಾಮಮಂದಿರದ ಆವರಣದಲ್ಲಿಯೇ·ಸುಂದರವಾದ ದೇವಾಲಯ ನಿರ್ಮಾಣ·ಮಾಡಿ ಪ್ರತಿಷ್ಠಾಪನೆ ಮಾಡಿದರೆ·ಶ್ರೀರಾಮ ಶಿವನನ್ನು ಪೂಜೆ ಮಾಡಿದ್ದ·ಸಾರ್ಥಕವಾಗಲಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ·ಕಾರ್ಯದರ್ಶಿ ಆರ್.ಡಿ. ಮಹೇಂದ್ರ,·ಬಿ. ಜಗದೀಶ್ಚಂದ್ರ, ಶ್ರೀಪೀಠದ ಬನದ ಹುಣಿ ಲೆಕ್ಕಾ ಧಿಕಾರಿ ಸಂಕಪ್ಪ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Chikkamagaluru; ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು…: ಸಿಎಂ ಸಿದ್ದರಾಮಯ್ಯ