ಚಿಕ್ಕಮಗಳೂರು: ಹೃದಯಾಘಾತದಿಂದ ಕರ್ತವ್ಯ ನಿರತ ಎಎಸ್.ಐ ಸಾವು
Team Udayavani, Nov 17, 2019, 8:09 PM IST
ಚಿಕ್ಕಮಗಳೂರು : ಹೃದಯಾಘಾತದಿಂದ ಕರ್ತವ್ಯ ನಿರತ ಎಎಸ್.ಐ ಸಾವಪ್ಪಿರುವ ಘಟನೆ ಭಾನುವಾರ ನಡೆದಿದೆ.
ತಾಲ್ಲೂಕಿನ ಇನಾಂ ದತ್ರಾತ್ರೇಯ ಬಾಬಾಬುಡನ್ ಗಿರಿ ದರ್ಗಾದಲ್ಲಿ ಕರ್ತವ್ಯದಲ್ಲಿರುವ ವೇಳೆಯೇ ಎ.ಎಸ್.ಐ ಜಗದೀಶ್ (58) ಸಾವಪ್ಪಿದ್ದಾರೆ.
ಅತಿಯಾದ ಚಳಿ, ಮಂಜಿನ ನಡುವೆ ಗಿರಿಶ್ರೇಣಿಯಲ್ಲಿ ಬಿ.ಬಿ ಕಳೆದ ಒಂದು ವಾರದಿಂದ ಅವರು ಕರ್ತವ್ಯ ನಿರ್ವಹಿಸಿತ್ತಿದ್ದರು ಎಂದು ಹೇಳಲಾಗುತ್ತಿದೆ.
ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಜಗದೀಶ್ ಎ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇಲಾಖೆಯ ನಿಯಮದಂತೆ ಈ ವಾರ ಅವರಿಗೆ ಐ.ಡಿ. ಪೀಠದಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು.