ಸಂತರು-ಶರಣರ ಆದರ್ಶ ಪಾಲಿಸಿ
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಚ್.ಎಂ.ನಾಗರಾಜ್ ಅಭಿಮತ
Team Udayavani, Feb 21, 2020, 6:18 PM IST
ಚಿಕ್ಕಮಗಳೂರು: ಸಂತರು, ಶರಣರು ತಮ್ಮ ಬದುಕಿನ ಅವಧಿಯಲ್ಲಿ ಮುಂದಿನ ಪೀಳಿಗೆಯವರಿಗೆ ಬದುಕಲು ಸಹಾಯವಾಗುವಂತ ಸಾಹಿತ್ಯ, ತತ್ವಾದರ್ಶಗಳನ್ನು ನೀಡಿದ್ದಾರೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಚ್. ಎಂ.ನಾಗರಾಜ್ ಹೇಳಿದರು.
ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸಂತ ಕವಿ ಸರ್ವಜ್ಞ, ಛತ್ರಪತಿ ಶಿವಾಜಿ ಹಾಗೂ ಕಾಯಕ ಶರಣರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ಬಸವಣ್ಣನವರ ಅನುಸರಣೆಯಲ್ಲಿ ಸಾಗಿದ ಶರಣರ ತತ್ವ-ಆದರ್ಶಗಳು ಪ್ರತಿಯೊಬ್ಬರಿಗೂ ಮಾದರಿ. ಅವರ ಆದರ್ಶಗಳನ್ನು ಪಾಲನೆ ಮಾಡುವುದರಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ. ನಿರ್ಭಾವುಕ ಕಠಿಣ ವಚನಗಳಿಂದ ಸಮಾಜಕ್ಕೆ ಬೆಳಕಾದವರು ಸರ್ವಜ್ಞ ಕವಿ, ಹೋರಾಟದಿಂದ ಸ್ಫೂರ್ತಿಯಾದವರು ಶಿವಾಜಿ ಮಹಾರಾಜರು ಎಂದು ಹೇಳಿದರು.
ಸಂತರ, ಶರಣರು ಹಾಗೂ ದಾರ್ಶನಿಕರ ಜಯಂತಿಗಳು ಜನರ ಮನಸ್ಸಿನಲ್ಲಿರುವ ಋಣಾತ್ಮಕ ಭಾವನೆಯನ್ನು ಹೋಗಲಾಡಿಸಿ ಉತ್ತಮ ಪ್ರಜ್ಞಾವಂತರನ್ನಾಗಿಸುತ್ತವೆ ಎಂದರು. ಕಾಯಕ ಶರಣರ ಕುರಿತು ಉಪನ್ಯಾಸ ನೀಡಿದ ಸಾಹಿತಿ ತಿಪ್ಪೇರುದ್ರಪ್ಪ, 12ನೇ ಶತಮಾನ ವಿಶ್ವಗುರು ಬಸವಣ್ಣನ ಮುಖಂಡತ್ವದಲ್ಲಿ ವಿಚಾರ ಕ್ರಾಂತಿ, ಧಾರ್ಮಿಕ ಕ್ರಾಂತಿ, ಸಾಮಾಜಿಕ ಕ್ರಾಂತಿ ಮತ್ತು ಭಾಷಾ ಕ್ರಾಂತಿಗೆ ನಾಂದಿ ಹಾಡಿತು. ಅಂದಿನ ಶತಮಾನದಲ್ಲಿ ರಾಜಸತ್ತೆಯನ್ನು ಪ್ರಜಾಸತ್ತೆಯೆಡೆಗೆ ಹೊರಳಿಸಿ ಅನುಭವ ಮಂಟಪ ಸ್ಥಾಪನೆ ಮಾಡಿ ಎಲ್ಲಾ ವರ್ಗದ ಜನರು ಪಾಲ್ಗೊಳ್ಳುವಂತೆ ಮಾಡಿ ವಾಕ್ ಸ್ವಾತಂತ್ರ್ಯಕ್ಕೆ ಒತ್ತು ನೀಡಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ತಂದರು ಎಂದರು.
ಕೆಳಸ್ತರದ ವಚನಕಾರರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಊರಿಲಿಂಗಪೆದ್ದಿ ಯಂತಹವರನ್ನು ಮುನ್ನೆಲೆಗೆ ತಂದು ಅವರಿಗೆ ಅನುಭವ ಮಂಟಪದಲ್ಲಿ ಅಗ್ರಸ್ಥಾನ ಕಲ್ಪಿಸಿದವರು ಎಂದರು.
ಶ್ರಮ ಸಂಸ್ಕೃತಿ ಎಂದರೆ ದುಡಿದು ತಿನ್ನಬೇಕು. ಶ್ರಮವಿಲ್ಲದ ಸಂಪಾದನೆ ಪಾತಕವಿದ್ದಂತೆ. ದಾಸೋಹ ಕಾಯಕ ಮಹತ್ವವಾದುದು. ಅತಿಯಾದ ಸಂಗ್ರಹಣೆ ಒಳ್ಳೆಯದಲ್ಲ. ಜಾತಿ ಪದ್ಧತಿ ಅಳಿಸಿ ನೀತಿವಂತರಾಗಬೇಕೆಂದು ತಿಳಿಸಿದರು. ಸಾಹಿತಿ ಬೆಳವಾಡಿ ಮಂಜುನಾಥ್ ಸರ್ವಜ್ಞರ ಕುರಿತು ಉಪನ್ಯಾಸ ನೀಡಿ, ಭಾರತದಲ್ಲಿ ಇಂದಿಗೂ ಜಾತಿವ್ಯವಸ್ಥೆ, ಮೇಲು-ಕೀಳು ಎಂಬ ಭಾವನೆ ಅಸ್ಥಿತ್ವದಲ್ಲಿರುವುದು ದುರಂತ ಸಂಗತಿ. ಪ್ರಕೃತಿ ಮಾತೆಯಲ್ಲಿ ಇಲ್ಲದ ಜಾತಿ ವ್ಯವಸ್ಥೆ, ಅಸಮಾನತೆ, ಭಾವನೆ ಇಂದಿನ ಜನತೆಯಲ್ಲಿದೆ. 12ನೇ ಶತಮಾನದಲ್ಲಿ ಅನೇಕ ಶಿವಶರಣರು ಜಾತಿ ವ್ಯವಸ್ಥೆ ವಿರುದ್ಧ ಜಾಗೃತಿ ಮೂಡಿಸಿ ಸಮಾಜ ಸುಧಾರಣೆಗೆ ಮುಂದಾಗಿದ್ದರು ಎಂದು ಹೇಳಿದರು.
ಸರ್ವಜ್ಞರು ಸಮಾಜದಲ್ಲಿ ಕಂಡಂತಹ ಅಂಕು ಡೊಂಕುಗಳು, ಆಗು ಹೋಗುಗಳನ್ನು ತ್ರಿಪದಿ ಸಾಹಿತ್ಯದ ಮೂಲಕ ತಿದ್ದುವ ಕೆಲಸ ಮಾಡಿದರು. ತಿರುವಳ್ಳುವರ್, ವೇಮನರ ಸಾಲಿನಲ್ಲಿ ಸರ್ವಜ್ಞ ಕವಿ ಶ್ರೇಷ್ಠರು ನಾಡಿನಾದ್ಯಂತ ಸಂಚರಿಸಿ ಸಮಾಜದ ಗರಿಷ್ಠ-ಕನಿಷ್ಠ, ಜಾತಿ ವ್ಯವಸ್ಥೆ, ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಸುಧಾರಣೆಗೆ ಮುಂದಾದವರು. ಅವರು ಪ್ರತಿಯೊಬ್ಬರ ಬದುಕಿಗೂ ಸೂರ್ತಿಯಾಗಿದ್ದಾರೆ ಎಂದರು.
ಕಳಸಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಡಾ| ಸತ್ಯ ನಾರಾಯಣ್ ಛತ್ರಪತಿ ಶಿವಾಜಿ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಡಾ| ಸಿ. ರಮೇಶ್, ದಲಿತ ಮುಖಂಡ ಕೆ.ಟಿ. ರಾಧಾಕೃಷ್ಣ, ಮರಾಠ ಸಮಾಜದ ಜಿಲ್ಲಾಧ್ಯಕ್ಷ ಗಣೇಶ್ ರಾವ್, ಕುಂಬಾರ ಸಮಾಜದ ಮುಖಂಡ ಏಕಾಂತ್ ರಾಮ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ