ಮಳೆಯ ಅಬ್ಬರಕ್ಕೆ ಅತಂತ್ರಗೊಂಡ ಕಾಫಿ ಬೆಳೆಗಾರ
Team Udayavani, Oct 17, 2021, 6:28 PM IST
ಕೊಟ್ಟಿಗೆಹಾರ: ಕಳೆದ ಕೆಲದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.
ಬಣಕಲ್, ಕೊಟ್ಟಿಗೆಹಾರ, ಫಲ್ಗುಣಿ, ಹೊರಟ್ಟಿ, ಬಾಳೂರು, ತರುವೆ, ಅತ್ತಿಗೆರೆ, ಬಿನ್ನಡಿ,ತ್ರಿಪುರ, ಗುತ್ತಿ ಸೇರಿದಂತೆ ವಿವಿದೆಡೆ ಧಾರಾಕಾರ ಮಳೆಯಾಗಿದ್ದು ಬಿಡುವು ನೀಡದೇ ಸುರಿಯುತ್ತಿರುವ ಮಳೆಯಿಂದಾಗಿ ಗಿಡದಲ್ಲಿ ಹಣ್ಣಾಗಿ ನಿಂತ ಕಾಫಿಯನ್ನು ಕುಯ್ಲು ಮಾಡಲು ಸಾಧ್ಯವಾಗದಂತಾಗಿದೆ.
ಈಗಾಗಲೇ ಕುಯ್ಲು ಮಾಡಿದ ಕಾಫಿಯನ್ನು ಮಳೆಯಿಂದಾಗಿ ಒಣಗಿಸಲು ಸಾಧ್ಯವಾಗದೇ ಕಣದಲ್ಲಿ ರಾಶಿ ಮಾಡಿದ ಕಾಫಿ ಕೊಳೆಯತೊಡಗಿದೆ. ಗಿಡದಲ್ಲಿ ಹಣ್ಣಾದ ಕಾಫಿಯನ್ನು ಕುಯ್ಯದೇ ಬಿಟ್ಟರೇ ಕಾಫಿ ಉದುರತೊಡಗುತ್ತದೆೆ. ಕಾಫಿ ಕುಯ್ಲು ಮಾಡಿದರೆ ಒಣಗಿಸಲಾಗದೇ ಕಾಫಿ ಕೊಳೆಯತೊಡಗುತ್ತದೆ. ಮಳೆಯಿಂದಾಗಿ ಕಾಫಿ ಬೆಳೆಗಾರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕಾಫಿ ಬೆಳೆಗಾರ ರಘು ಹೊರಟ್ಟಿ ಅವರು, ಮಳೆಯಿಂದಾಗಿ ಕಾಫಿ ಬೆಳೆಗಾರರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ವರ್ಷ ಪೂರ್ತಿ ದುಡಿದ ಫಸಲು ಕೈ ಸೇರುವ ವೇಳೆಗೆ ಮರಿ ಸುರಿದು ಕಾಫಿ ಕೊಳೆಯತೊಡಗುತ್ತಿದೆ. ಕಾಫಿ ಬೆಳೆಗಾರರ ಬದುಕು ಕೂಡ ಕೊಳೆಯತೊಡಗಿದೆ. ಈ ಬಗ್ಗೆ ಸಂಬಅಧಪಟ್ಟ ಜನಪ್ರತಿನಿಧಿಗಳು ಬೆಳೆ ಪರಿಹಾರ ನೀಡಲು ಮುಂದಾಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
MUST WATCH
ಹೊಸ ಸೇರ್ಪಡೆ
ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್
Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ