ಎಂ.ಸಿ.ಭೋಗಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ

20 ವರ್ಷಗಳ ಸೇವೆಗೆ ಮನ್ನಣೆ ,ಫೆಬ್ರವರಿ ಮೊದಲ ವಾರ ಚಾಮರಾಜನಗರದಲ್ಲಿ ಪ್ರಶಸ್ತಿ ಪ್ರದಾನ

Team Udayavani, Jan 6, 2021, 5:09 PM IST

ಎಂ.ಸಿ.ಭೋಗಪ್ಪಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಚಿಕ್ಕಮಗಳೂರು: ರಾಜ್ಯೋತ್ಸವ ಮೂರು ಪ್ರಶಸ್ತಿಗಳನ್ನುಮುಡಿಗೇರಿಸಿಕೊಂಡ ಕಾಫಿನಾಡುಈಗ ಮತ್ತೂಂದು ಪ್ರಶಸ್ತಿಯನ್ನುತನ್ನ ಮುಡಿಗೇರಿಸಿಕೊಂಡಿದೆ. 2020-21ನೇ ಸಾಲಿಗೆ ಕೊಡಮಾಡುವ ಜಾನಪದ ಅಕಾಡೆಮಿಪ್ರಶಸ್ತಿಗೆ ಜಿಲ್ಲೆಯ ಅಜ್ಜಂಪುರ ತಾಲೂಕುಚೌಳಿ ಹಿರಿಯೂರು ಗ್ರಾಮದ ಚೌಡಿಕೆಪದ ಕಲಾವಿದ ಎಂ.ಸಿ.ಭೋಗಪ್ಪ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಗೋಗತಿ ಅವರು ಆರು ಮಂದಿಮಹಿಳೆಯರು ಸೇರಿದಂತೆ 31 ವಿವಿಧಜಿಲ್ಲೆಯ ಕಲಾವಿದರು ಹಾಗೂ ಜಾನಪದತಜ್ಞರನ್ನು ಆಯ್ಕೆ ಮಾಡಿದ್ದು, ಅವರಲ್ಲಿಜಿಲ್ಲೆಯ ಚೌಡಿಕೆ ಪದ ಕಲಾವಿದ ಎಂ.ಸಿ.ಭೋಗಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.ಎಂ.ಸಿ. ಭೋಗಪ್ಪ ಅವರ 20 ವರ್ಷಗಳಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, 2021ರ ಫೆಬ್ರವರಿ ತಿಂಗಳಮೊದಲ ವಾರದಲ್ಲಿ ಚಾಮರಾಜನಗರಜಿಲ್ಲೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಎಂ.ಸಿ. ಭೋಗಪ್ಪ ಅವರು ಅಜ್ಜಂಪುರತಾಲೂಕು ಚೌಳಿಹಿರಿಯೂರು ಗ್ರಾಮದ ಮೂಡಬಾಗಿಲುಚನ್ನಪ್ಪ ಮತ್ತು ಲಕ್ಕಮ್ಮ ದಂಪತಿಗಳ ಮೂವರು ಮಕ್ಕಳಲ್ಲಿ ಎರಡನೇಮಗನಾಗಿ 1952 ಅ.8ರಂದು ಜನಿಸಿದರು.

ತನ್ನ ಆರನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಅವರು ತಾಯಿಯಆಶ್ರಯದಲ್ಲಿ ಬೆಳೆದರು. ಗ್ರಾಮದಭೋಗನಂಜುಂಡೇಶ್ವರ ಭಜನಾಮಂಡಳಿಯಲ್ಲಿ ಜಾನಪದ ಹಾಡುಗಾರಿಕೆಕಲಿತೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಚೌಳಿಹಿರಿಯೂರು ಗ್ರಾಮದ ವನಬೋಗಿಹಳ್ಳಿ ದೇವಣ್ಣ ಮತ್ತುಮೆಣಸಿನಕಾಯಿ ಹೊಸಳ್ಳಿಯ ಸಿದ್ರಾಮಣ್ಣಅವರು ಆಗ ಸಾಂಸ್ಕೃತಿಕ ಕಾರ್ಯಕ್ರಮಗಳನ್ನುನೀಡುತ್ತಿದ್ದರು. ಗ್ರಾಮದ ಹಿರಿಯರಾದ ಚೇರ್ಮೇನ್‌ ಸಿದ್ಧಪ್ಪ ಅವರು ಬೇರೆ ಊರಿನಿಂದ ನಮ್ಮೂರಿಗೆ ಬಂದು ಕಾರ್ಯಕ್ರಮ ನೀಡುತ್ತಾರೆ. ಆ ವೇಳೆ ಚೆನ್ನಾಗಿ ಹಾಡು ಹೇಳುವ ನೀವು ಏಕೆ ಹಾಡುಗಾರಿಕೆ ಯನ್ನು ಕಲಿತು ಕಾರ್ಯಕ್ರಮ ನೀಡಬಾರದೆಂದು ಬೆನ್ನು ತಟ್ಟಿ ಹುರಿದುಂಬಿಸಿದ್ದರು ಎಂದರು.

ಅವರು ಮಾತನ್ನು ಮನಸ್ಸಿಗೆ ತಗೆದುಕೊಂಡ ಭೋಗಪ್ಪ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸುತ್ತ ಇರುವ ಹಾಸ್ಯಪಾತ್ರಗಳನ್ನು ಮಾಡುತ್ತಾ ಜನರನ್ನು ನಗೆಗಡಲಿನಲ್ಲಿ ತೇಲಿಸುತ್ತಿದ್ದರು. ಮದುವೆಯ ಸೋಬಾನೆ ಪದ, ತೊಟ್ಟಿಲುಶಾಸ್ತ್ರ, ಹೆಣ್ಣುಮಕ್ಕಳು ತವರಿಗೆ ಹೋಗುವ ಹಾಡುಗಳನ್ನು ನಿರರ್ಗಳವಾಗಿ ಹಾಡುತ್ತಿದ್ದೆ. ವರ್ಷಗಟ್ಟಲೆ ಹಾಡುಗಳನ್ನುಅಬ್ಯಾಸ ಮಾಡುತ್ತಿದ್ದೆ ಎನ್ನುತ್ತಾರೆ ಭೋಗಪ್ಪ. ದಿನ ಕಳೆದಂತೆ ನನ್ನ ಹಾಡುಗಳುಸುತ್ತಮುತ್ತಲ ಗ್ರಾಮಗಳಲ್ಲಿ ಪ್ರಸಿದ್ಧಿ ಪಡೆದುಕೊಂಡಿತು. ಗೌರಿ- ಗಣೇಶ ಹಬ್ಬದಲ್ಲಿ

21 ದಿನ ಕಾರ್ಯಕ್ರಮ ನೀಡುತ್ತಿದ್ದೆ. ಚಿತ್ರದುರ್ಗ, ಹಾಸನ, ಚನ್ನರಾಯಪಟ್ಟಣ,ಬಾಣಾವರ ಸೇರಿದಂತೆ ತರೀಕೆರೆ ಸುತ್ತಮುತ್ತಲ ಹಳ್ಳಿಗಳಲ್ಲಿ ನನ್ನ ಚೌಡಿಕೆಪದ ಕೇಳಲುಸುತ್ತಮುತ್ತಲ ಗ್ರಾಮಸ್ಥರು ಕಾರ್ಯಕ್ರಮಆಯೋಜಿಸುತ್ತಿದ್ದರು ಎಂದು ಆ ದಿನಗಳನ್ನು ನೆನೆದರು.

ಚೌಡಿಕೆಪದ ಕಾರ್ಯಕ್ರಮದ ಜೊತೆ ಜೊತೆಗೆ ಕೃಷಿಯಲ್ಲೂ ತೊಡಗಿಸಿಕೊಳ್ಳುತ್ತಿದ್ದೆ.ಈ ನಡುವೆ ಜೀವನ ನಿರ್ವಹಣೆಗಾಗಿ ಬೆಂಗಳೂರಿಗೆ ತೆರಳಿ ಕಾರ್ಖಾನೆಯೊಂದರಲ್ಲಿಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಪಡೆಯುತ್ತಿದ್ದಅಲ್ಪಸ್ವಲ್ಪ ಹಣದಲ್ಲೇ ತನ್ನ ಇಬ್ಬರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದೆ ಎಂದರು.

ಚೌಡಿಕೆಪದ ಒಂದು ಕಾರ್ಯಕ್ರಮಕ್ಕೆ ಆ ದಿನಗಳಲ್ಲಿ 25ರೂ. ನೀಡುತ್ತಿದ್ದೆ. ಹೆಚ್ಚುಎಂದರೆ 2 ಸಾವಿರ ರೂ. ಪಡೆಯುತ್ತಿದ್ದೆ.ಈಗ ಕೆಲವು ಕಲಾವಿದರು 5ರಿಂದ 10 ಸಾವಿರ ರೂ. ಪಡೆದುಕೊಳ್ಳುತ್ತಾರೆ ಎಂದುಅವರು ಬೆಳೆದು ಬಂದ ದಾರಿಯನ್ನುನೆನೆದುಕೊಂಡರು. ನನ್ನ ಕಲಾಸೇವೆಯನ್ನುಗುರುತಿಸಿ ಜಾನಪದ ಅಕಾಡೆಮಿ ಪ್ರಶಸ್ತಿನೀಡಿ ಸನ್ಮಾನಿಸುತ್ತಿರುವುದು ನನಗೆ ತುಂಬಾ ಸಂತೋಷ ತಂದಿದೆ ಎಂದರು.

ಆಧುನಿಕ ಕಾಲದಲ್ಲಿ ಜಾನಪದಕಲೆ ಮರೆಯಾಗುತ್ತಿದೆ. 50, 60ಸಾವಿರ ರೂ. ನೀಡಿ ಆರ್ಕೆಸ್ಟ್ರಾ ನಡೆಸಿದರೆಜನರು ಸೇರುತ್ತಾರೆ. ಜಾನಪದ ಕಾರ್ಯಕ್ರಮವನ್ನು ಅಸಡ್ಡೆಯಿಂದನೋಡುತ್ತಾರೆ. ಹರ್ಷದ ಕೂಳಿಗೆ ವರ್ಷದಕೂಳು ಕಳೆದುಕೊಂಡಂತಾಗಿದೆ ನಮ್ಮಇಂದಿನ ಪೀಳಿಗೆ. -ಎಂ.ಸಿ. ಭೋಗಪ್ಪ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು.

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್‌ಡಿಡಿ

9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್‌ಡಿಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.