ಕಣ್ಮನ ಸೆಳೆಯುವ ಗೊಂಬೆಹಬ್ಬ
ಶರನ್ನವರಾತ್ರಿ ಆಚರಣೆ ಸಂದರ್ಭ ಕಂಡುಬರುವ ಪರಂಪರೆ
Team Udayavani, Oct 25, 2020, 7:11 PM IST
ಚಿಕ್ಕಮಗಳೂರು: ಶರನ್ನವರಾತ್ರಿ ನಾಡಿನ ಬಹುದೊಡ್ಡ ಆಚರಣೆ. ನವರಾತ್ರಿಸಮಯದಲ್ಲಿ ಕರ್ನಾಟಕದಲ್ಲಿ ಗೊಂಬೆಹಬ್ಬಸಂಪ್ರದಾಯ. ದೇವಿಯೊಂದಿಗಿನ ಆತ್ಮೀಯತೆಯ ಬಿಂಬ. ಮೈಸೂರಿನಲ್ಲಿ ಗೊಂಬೆ ಜೋಡಣೆ ಮನೆ-ಮನೆಯ ಆಚರಣೆ.
ಕರುನಾಡಿನ ವಿವಿಧೆಡೆ ಮನೆ- ಮಂದಿರಗಳಲ್ಲಿ ನವರಾತ್ರಿಯ ಸಂದರ್ಭದಲ್ಲಿ ಗೊಂಬೆಯನ್ನು ಕೂರಿಸುವ ಪರಿಪಾಠವಿದೆ.ಚಿಕ್ಕಮಗಳೂರಿನಲ್ಲಿ ಪೀಠೊಪಕರಣಗಳ ಅಂಗಡಿಯೊಂದರಲ್ಲಿ ವೈಶಿಷ್ಟ್ಯ ಪೂರ್ಣವಾಗಿ “ರಾಯಲ್ ಓಕ್ ಗೊಂಬೆ ವೈಭವ’ ಗಮನ ಸೆಳೆಯುತ್ತಿದೆ. ಮಹಾಲಯ ಅಮವಾಸ್ಯೆಯಿಂದ ರಾಯಲ್ ಓಕ್ನ್ನುಗೊಂಬೆಗಳು ಆವರಿಸಿದ್ದು ವಿಜಯ ದಶಮಿಯವರೆಗೆ ಪ್ರದರ್ಶನವಿದೆ. ನಗುವ ಬುದ್ಧ, ಸುಂದರ ಹೂವಿನ ಗಿಡ, ಬಣ್ಣ- ಬಣ್ಣದಿಂದ ಮಿನುಗುವ ದೀಪಗಳು ಕೈಬೀಸಿ ಕರೆಯುತ್ತಿವೆ.
ಕೆ.ಎಂ. ರಸ್ತೆಯ ಎಪಿಎಂಸಿ ಮುಂಭಾಗದಮಂಜುಶ್ರೀ ಕಟ್ಟಡದಲ್ಲಿರುವ ಅಂತಾರಾಷ್ಟ್ರೀಯ ಗೃಹೋಪಯೋಗಿ ಪೀಠೊಪಕರಣಗಳ ಮಾರಾಟ ಮಳಿಗೆ “ರಾಯಲ್ ಓಕ್’ಪ್ರಾರಂಭಗೊಂಡು ನ.7ಕ್ಕೆ ವರ್ಷ ತುಂಬಲಿದೆ. ಪ್ರಥಮ ವಾರ್ಷಿಕೋತ್ಸವದ ಹೊಸ್ತಿಲಲ್ಲಿ ದಸರಾ ಗೊಂಬೆ ವೈಭವದ ಮೂಲಕ ಸಾರ್ವಜನಿಕರಿಗೆ ಸ್ಮರಣೀಯ ಕೊಡುಗೆ ನೀಡುತ್ತಿದೆ. ಸಂಪ್ರದಾಯ-ಸಂಸ್ಕೃತಿ ನೆನಪಿಸುವುದರೊಂದಿಗೆ ಮನರಂಜನೆ ನೀಡುವ ಪ್ರಯತ್ನ ಮಾಡಿದೆ.
ಮಣ್ಣಿನಿಂದಲೇ ಮಾಡಿದ ಗೊಂಬೆಗಳು ಪರಿಸರ ಸ್ನೇಹಿ ಸಂದೇಶ ನೀಡುತ್ತಿವೆ. ಮೈಸೂರು, ಚನ್ನಪಟ್ಟಣ, ಬೆಂಗಳೂರು, ಕೊಲ್ಲಾಪುರ ಸೇರಿದಂತೆ ವಿವಿಧೆಡೆಯಿಂದ ಆರುನೂರಕ್ಕೂ ಹೆಚ್ಚು ಬಣ್ಣಬಣ್ಣದ ಗೊಂಬೆಗಳನ್ನು ಆರಿಸಿ ತರಲಾಗಿದೆ ಎಂದು ಮಾಲೀಕ ಪಿ.ಆರ್. ಅಮರನಾಥ್ ತಿಳಿಸಿದರು.
ಸುಮಾರು 700ಕ್ಕೂ ಹೆಚ್ಚು ಗೊಂಬೆಗಳು ಆಕರ್ಷಕ ಭಂಗಿಯಲ್ಲಿವೆ ವಿವಿಧ ಬಣ್ಣಗಳ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿದುರ್ಗೆ, ಮಹಾಗೌರಿ, ಸಿದ್ಧಿರಾತ್ರಿ ಹೀಗೆ ನವದುರ್ಗೆಯರ ಒಂಭತ್ತು ಅವತಾರಗಳ ಸುಂದರ ಗೊಂಬೆಗಳು ಅನಾವರಣಗೊಂಡಿವೆ. ಅಷ್ಟಲಕ್ಷ್ಮಿಯರ ಗೊಂಬೆಗಳಿವೆ. ಸಪ್ತಮಾತೃಕೆಯರಾದ ಸರಸ್ವತಿ-ಮಾಹೇಶ್ವರಿ-ಕಾತ್ಯಾಯಿನಿ-ಲಕ್ಷ್ಮೀ-ವರಾಥಹಿ-ಇಂದ್ರಾಣಿ ಮತ್ತು ಚಾಮುಂಡ ಸಾತ್ ನೀಡಿದ್ದಾರೆ.
ಮತ್ಸ್ಯಾವತಾರ, ಕೂರ್ಮಾವತಾರ, ನರಸಿಂಹ, ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ.. ಹೀಗೆ ಮಹಾವಿಷ್ಣುವಿನ ದಶಾವತಾರದ ಗೊಂಬೆಗಳಿವೆ. ವ್ಯಾಸ, ಅಗಸ್ತ್ಯ, ವಸಿಷ್ಠ, ವಿಶ್ವಾಮಿತ್ರರನ್ನೊಳಗೊಂಡ ಸಪ್ತಋಷಿಗಳೂ ಹಾಗೂ ಶಂಕರಾಚಾರ್ಯರು, ರಾಮಾನುಜಾ ಚಾರ್ಯರು, ಮಧ್ವಾಚಾರ್ಯವನ್ನು ಒಳಗೊಂಡ “ಯತಿ ಪರಂಪರೆ’, ಸಂಗೀತ ವಿದ್ವಾಂಸ ಶಾಮಾಶಾಸ್ತ್ರಿಗಳು, ಹರಿದಾಸರು- ಪುರಂದರ- ಕನಕದಾಸರನ್ನೊಳಗೊಂಡ “ದಾಸ ಪರಂಪರೆ’ಯ ಗೊಂಬೆ ಇರಿಸಲಾಗಿದೆ.
ಶ್ರೀಮಂತ ಸಂಸ್ಕೃತಿಯ ಪ್ರತೀಕವಾದ ಗೊಂಬೆ ಹಬ್ಬವನ್ನು ಜೀವಂತವಾಗಿಡುವ ಸಾರ್ಥಕ ಪ್ರಯತ್ನವಿದು. ಸವಿತಾ- ಪಿ.ಆರ್.ಅಮರ್ ನಾಥ್ ದಂಪತಿಯ ಕ್ರಿಯಾಶೀಲತೆಯಿಂದ “ರಾಯಲ್ ಓಕ್ ದಸರಾ ಗೊಂಬೆ ವೈಭವ ಖುಷಿ ನೀಡುತ್ತಿದೆ ಎಂದು ಪ್ರೇಕ್ಷಕ ಎಂ.ಎನ್. ರಾಕೇಶ ಶ್ಲಾಘಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ