ಹೊಯ್ಸಳ ಶಿಲ್ಪ ಕಲೆಗೆ ಆಧ್ಯಾತ್ಮ ಪ್ರೇರಣೆ
ತರಳಬಾಳು ಹುಣ್ಣೆಮೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಸಂಶೋಧಕ ಶ್ರೀವತ್ಸ ಎಸ್.ವಟಿ ಅಭಿಪ್ರಾಯ
Team Udayavani, Feb 5, 2020, 5:25 PM IST
ಹಳೇಬೀಡು: ಎಲ್ಲಾ ಧರ್ಮಗಳಿಗೂ ಆಧ್ಯಾತ್ಮವೇ ಮೂಲ ಎಂದು ಸಂಶೋಧಕ ಮತ್ತು ಸಾಹಿತಿ ಶ್ರೀವತ್ಸ ಎಸ್.ವಟಿ ಅಭಿಪ್ರಾಯಪಟ್ಟರು.
ಹಳೇಬೀಡಿನ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಹೊಯ್ಸಳರ ಕಾಲದಲ್ಲಿ ದೇವಾಲಯಗಳು ಮತ್ತು ಆಧ್ಯಾತ್ಮಿಕತೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಹೊಯ್ಸಳರ ಕಾಲದ ದೇವಾಲಯದ ನಿರ್ಮಾಣಕ್ಕೆ ಆಧ್ಯಾತ್ಮಿಕತೆಯೇ ಪ್ರೇರಣೆಯಾಗಿದೆ. ಆಧ್ಯಾತ್ಮ ಎಂಬುದು ನಮ್ಮ ನಂಬಿಕೆಗಳಲ್ಲಿ ಒಂದಾಗಿದೆ. ಭಾರತೀಯ ಸಮಾಜದಲ್ಲಿ ದೇವರನ್ನು ಆರಾಧಿಸುವುದು ಸಹಜ. ಅದನ್ನು ಮೂರ್ತರೂಪದಲ್ಲಿ ಪೂಜಿಸಿ ದೇವರನ್ನು ಕಂಡುಕೊಳ್ಳುವ ರೀತಿಯಲ್ಲಿ ಒಂದಾಗಿದೆ.
ಆಧ್ಯಾತ್ಮಿಕತೆ ಆಧರಿಸಿ ಚಿಂತನೆ ಬೆಳೆದಂತೆ ವಿವಿಧ ಉಪ ಪ್ರಕಾರಗಳು ವಿಸ್ತೀರ್ಣವಾದವು. ದೇವರ ರೂಪವನ್ನು ಯಾರೂ ಕಂಡಿಲ್ಲ. ಮಾನವನ ಚಿಂತನೆಗೆ ಅನುಗುಣವಾಗಿ ದೇವರ ಮೂರ್ತಿ ರೂಪ ಪಡೆಯತೊಡಗಿತು ಎಂದರು.
ಧರ್ಮದ ಮೂಲ ದೇವರು: ಧರ್ಮದ ಮೂಲ ದೇವರು. ದೇವರನ್ನು ಆರಾಧಿಸುವುದಕ್ಕೆ ದೇಗುಲಗಳು ನಿರ್ಮಾಣವಾಗಿದೆ. ಶೈವ, ವೈಷ್ಣವ ಜೈನ ಸೇರಿದಂತೆ ಎಲ್ಲಾ ಧರ್ಮದ ಅನುಯಾಯಿಗಳಿಗೆ ಆಶ್ರಯ ನೀಡಿದ ಕೀರ್ತಿ ಹೊಯ್ಸಳರ ಅರಸರಿಗೆ ಸಲ್ಲುತ್ತದೆ. ಹೊಯ್ಸಳರ ಕಾಲದಲ್ಲಿ ನಿತ್ಯ ಮರಣ ದೇವಾಲಯಗಳಿಗೆ ಪ್ರಾಧಾನ್ಯತೆ ಕೊಟ್ಟಿದ್ದಾರೆ. ಕುಟುಂಬದಲ್ಲಿ ಮೃತರಾದ ವ್ಯಕ್ತಿಯ ನೆನಪಿಗೆ ದೇವಾಲಯಗಳು ನಿರ್ಮಾಣವಾಗಿದೆ.
ಉದಾಹರಣೆ ವಿಷ್ಣುವರ್ಧನನ ತಮ್ಮ ಉದಾಯದಿತ್ಯ ಮೃತಪಟ್ಟಾಗ ಕೆಲವತ್ತಿ ಗ್ರಾಮದಲ್ಲಿ ವಿಷ್ಣು ದೇವಾಲಯ ನಿರ್ಮಾಣವಾದ ಉಲ್ಲೇಖವಿದೆ. ಹಾಗೆಯೇ ನಾಟ್ಯರಾಣಿ ಶಾಂತಲೆ ಮೃತಪಟ್ಟಾಗ ಶಾಂತಲೇಶ್ವರ ದೇವಾಲಯ ಸೇರಿದಂತೆ ಇನ್ನೂ ಅನೇಕ ದೇವಾಲಯಗಳು ನಿರ್ಮಾಣವಾಗಿರುವ ಉಲ್ಲೇಖವಿದೆ ಎಂದು ಹೇಳಿದರು.
ಜಿನಾಲಯಗಳಿಗೆ ಪ್ರಾಮುಖ್ಯತೆ: ಹೊಯ್ಸಳರ ಕಾಲದಲ್ಲಿ ಜೈನ, ಶೈವ, ವೈಷ್ಣವ ಧರ್ಮಗಳು ಪ್ರಧಾನ ಆಚರಣೆಯಲ್ಲಿದ್ದವು. ಹೊಯ್ಸಳರ ಆರಂಭಕಾಲದಲ್ಲಿ ಮೂಡಿಗೆರೆ ತಾಲೂಕು ಅಂಗಡಿಗ್ರಾಮದಲ್ಲಿ ಜೈನ ಜಿನಾಲಯಗಳಿಗೆ ಪ್ರಾಮುಖ್ಯತೆ ನೀಡಿ ನಂತರದಲ್ಲಿ ವೈಷ್ಣವ ಮತ್ತು ಶೈವ ದೇವಾಲಯದ ನಿರ್ಮಾಣಕ್ಕೆ ಮುಂದಾದರು ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ