ಸಂಕಷ್ಟದಲ್ಲಿ ತೋಟಗಾರಿಕಾ ಬೆಳೆಗಾರ: ಡಾ| ಇಂದ್ರೇಶ್
Team Udayavani, Jul 16, 2019, 11:20 AM IST
ಕಡೂರು: ತಾಲೂಕು ಚಟ್ನಳ್ಳಿಯ ಜೋಡಿಲಿಂಗದಹಳ್ಳಿ ದಾಳಿಂಬೆ ಹೊಲದಲ್ಲಿ ನಡೆದ ಕೃಷಿ ಸಂವಾದ ಕಾರ್ಯಕ್ರಮವನ್ನು ತೋಟಗಾರಿಕೆ ವಿವಿ ಉಪಕುಲಪತಿ ಡಾ.ಇಂದ್ರೇಶ್ ಉದ್ಘಾಟಿಸಿದರು.
ಕಡೂರು: ಸಂಕಷ್ಟದಲ್ಲಿರುವ ತೋಟಗಾರಿಕಾ ಬೆಳೆಗಾರರ ಜತೆ ತೋಟಗಾರಿಕಾ ವಿಶ್ವ ವಿದ್ಯಾಲಯ ಸದಾ ಇರುತ್ತದೆ ಎಂದು ಬಾಗಲಕೋಟೆ ತೋಟಗಾರಿಕಾ ವಿವಿ ಉಪಕುಲಪತಿ ಡಾ| ಕೆ.ಎಂ. ಇಂದ್ರೇಶ್ ತಿಳಿಸಿದರು.
ತಾಲೂಕಿನ ಚಟ್ನಳ್ಳಿ ಸಮೀಪದ ಜೋಡಿಲಿಂಗದಹಳ್ಳಿ ರಸ್ತೆಯಲ್ಲಿರುವ ರೈತ ಮಹಾಲಿಂಗಪ್ಪ ಕಾಂತಣ್ಣನವರ ದಾಳಿಂಬೆ ಹೊಲದಲ್ಲಿ ಸೋಮವಾರ ಆಯೋಜಿಸಿದ್ದ ರೈತರೊಂದಿಗಿನ ಕೃಷಿ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಡಕೆ, ಕಾಫಿ, ತೆಂಗು, ಹಣ್ಣಿನ ಬೆಳೆಗಳಾದ ದಾಳಿಂಬೆ ಮತ್ತು ಇತರೆ ತರಕಾರಿ ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂದಿನ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಬೆಳೆಗಾರರ ಬಳಿ ಬಂದು ತಾಂತ್ರಿಕ ನೆರವು ನೀಡಿ ಅವುಗಳನ್ನು ಬೆಳೆಯುವ ವಿಧಾನಗಳನ್ನು ತಿಳಿಸಬೇಕಾಗಿದೆ. ರೋಗ ತಡೆಗಟ್ಟುವ ಬಗ್ಗೆ ಕ್ರಿಮಿನಾಶಕ ಬಳಕೆ ಬಗ್ಗೆ ನಿಖರ ತಿಳಿವಳಿಕೆ ನೀಡಿ, ಬೆಳೆಗಾರರ ನಷ್ಟ ತಪ್ಪಿಸಲು ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾನಿಲಯ ಸದಾ ನಿಮ್ಮೊಂದಿಗೆ ಇದೆ ಎಂದು ತಿಳಿಸಿದರು.
ನಮ್ಮ ವಿವಿಯಲ್ಲಿ ಕೆಲವು ಸತ್ವಪೂರ್ಣ ಕೀಟನಾಶಕಗಳು, ರೋಗ ನಿರೋಧಕ ಔಷಧಗಳ ಸಂಶೋಧನೆ ಮಾಡಿದ್ದು, ಅವುಗಳ ಬಳಕೆಯಿಂದ ರೈತರಿಗೆ ಲಾಭವಾಗುವ ಮಾಹಿತಿ ಲಭ್ಯವಿದೆ. ದಾಳಿಂಬೆಗೆ ಬರುವ ಮಾರಕ ರೋಗಗಳ ಹತೋಟಿ ನಿಟ್ಟಿನಲ್ಲಿ ನಮ್ಮ ಸಂಶೋಧನೆ ನಿರಂತರವಾಗಿ ನಡೆಯುತ್ತಿದೆ ಎಂದು ಹೇಳಿದರು.
ಕೃಷಿಕ, ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ರೈತ ಸಮೂಹಕ್ಕೆ ಆತಂಕ ತರುವಂತಹ ರೋಗರುಜಿನಗಳ ಬಾಧೆ ಮತ್ತು ಕೀಟಗಳ ಹಾವಳಿ ಬಹು ದೊಡ್ಡ ಸಮಸ್ಯೆಯಾಗಿದೆ. ಕೃಷಿಗೆ ಹಾಕಿದ ಬಂಡವಾಳ ಬಾರದ ಸ್ಥಿತಿಯಲ್ಲಿ ನೋವು ಅನುಭವಿಸುತ್ತಿರುವ ರೈತನಿಗೆ ಪದೇ ಪದೆ ಕಾಡುವ ಬರಗಾಲ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಜರ್ಜರಿತರಾಗಿವ ಕೃಷಿ ಸಮೂಹಕ್ಕೆ ತೋಟಗಾರಿಕೆ ಇಲಾಖೆ, ತೋಟಗಾರಿಕಾ ವಿವಿ ಜನಪ್ರತಿನಿಧಿಗಳು ಒಟ್ಟಾರೆ ಆಡಳಿತ ಸ್ಪಂದಿಸಿದಲ್ಲಿ ಮಾತ್ರ ರೈತ ಬದುಕಲು ಸಾಧ್ಯ. ಇಂದು ನಡೆಯುತ್ತಿರುವ ತೋಟಗಾರಿಕಾ ಬೆಳೆಗಳ ಸಂವಾದ ಕೃಷಿಕರ ಬಾಳಿಗೆ ಭರವಸೆ ಮೂಡಿಸಲಿ ಎಂದು ಆಶಿಸುತ್ತೇನೆ ಎಂದರು.
ಸಂವಾದದಲ್ಲಿ ಭಾಗವಹಿಸಿದ್ದ ದಾಳಿಂಬೆ ಬೆಳೆಗಾರರಾದ ಶ್ರೀರಾಂಪುರದ ಕುಮಾರ್, ಮಾಹಲಿಂಗಪ್ಪರ ಕಾಂತರಾಜ್, ಜಗದೀಶ್, ಶೆಟ್ಟಿಹಳ್ಳಿ ರಾಮಜ್ಜ, ಬೆಲಗೂರು ಅಶೋಕ್,ನಾಗೇನಹಳ್ಳಿ ಮಹಾದೇವ ಮುಂತಾದ ಪ್ರಗತಿಪರ ದಾಳಿಂಬೆ ಬೆಳೆಗಾರರು ಮಾತನಾಡಿ, ರೋಗ ಹತೋಟಿ ಬಗ್ಗೆ ಈಗಿನ ಕ್ರಿಮಿನಾಶಕಗಳು ವಿಫಲವಾಗಿವೆ. ಇದಕ್ಕೆ ಕಲಬೆರಕೆ ಔಷಧಗಳ ಮಾರಾಟಗಾರರು ಕಾರಣವೇ ಎಂದು ಪ್ರಶ್ನಿಸಿ ದರು. ಇದಕ್ಕೆ ಉತ್ತರಿಸಿದ ತೋಟಗಾರಿಕೆ ವಿವಿ ಸಸ್ಯರೋಗ ತಜ್ಞರಾದ ಡಾ.ಜಿ.ಮಂಜುನಾಥ್, ಕೀಟರೋಗ ತಜ್ಞ ಡಾ.ರಾಮನಗೌಡ ಅವರು, ರೈತರ ಅನುಮಾನಕ್ಕೆ ಸಹಮತ ವ್ಯಕ್ತಪಡಿಸಿದರು. ನಮ್ಮ ವಿವಿ ತಾಂತ್ರಿಕ ಪರೀಕ್ಷೆಗೆ ಮಾತ್ರ ಒಳ ಪಟ್ಟಿದ್ದು, ಕಲಬೆರಕೆ ಮಾರಾಟ ನಿಷೇಧಿಸುವ ಹೊಣೆ ಕೃಷಿ ಮತ್ತು ತೋಟಗಾರಿಕೆ ಅಧಿಕಾರಿಗಳಿಗೆ ಸಂಬಂಧಿಸಿದೆ ಎಂದು ಹೇಳಿದರು.
ಸಭೆಗೆ ಆಹ್ವಾನ ನೀಡಿದ್ದರೂ ಬಾರದಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳ ವಿರುದ್ಧ ರೈತರು ಅಸಮಧಾನ ವ್ಯಕ್ತಪಡಿಸಿ ದರು. ಇಲಾಖಾ ಅಧಿಕಾರಿಗಳಿಂದ ಯಾವುದೇತಾಂತ್ರಿಕ ಸಲಹೆ-ಸಹಕಾರ ತೋಟಗಾರಿಕಾ ಬೆಳೆಗಾರರಿಗೆ ದೊರೆಯುತ್ತಿಲ್ಲ ಎಂದು ಆಕ್ಷೇಪಿಸಿ ದರು. ತೋಟಗಾರಿಕಾ ವಿವಿಯ ಡಾ.ವೈ.ಕೆ.ಕೋಟಿಕಲ್, ಡಾ.ವಿಷ್ಣುವರ್ಧನ್, ದಾಳಿಂಬೆಸಂಶೋಧನಾ ಕೇಂದ್ರದ ಡಾ.ಆಶಿಶ್ ಮೈತ್ರಿ, ಡಾ.ಶ್ವೇತಾ ಬಿ.ಎಸ್, ಜಿಪಂ ಸದಸ್ಯ ವಿಜಯಕುಮಾರ್, ನೂರಾರು ರೈತರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Devaramane; ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು
Charmady ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ… ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್
420 ನಂಬರ್ನವರಿಂದ 400 ಸ್ಥಾನ ಗೆಲ್ಲುವ ಮಾತು… ಬಿಜೆಪಿ ವಿರುದ್ಧ ಪ್ರಕಾಶ್ ರಾಜ್ ಕಿಡಿ
Chikkamagaluru: ಈಶ್ವರಪ್ಪನವರ ಬಂಡಾಯ ನಿರ್ಧಾರದಿಂದ ಪಕ್ಷಕ್ಕೆ ಮಾರಕವಾಗಬಾರದು: ಸಿಟಿ ರವಿ
ಈಶ್ವರಪ್ಪ ಬಂಡಾಯ ಸ್ಪರ್ಧೆ: ಶೀಘ್ರದಲ್ಲಿ ಗೊಂದಲಗಳು ಬಗೆಹರಿಯುತ್ತದೆ; ಕೋಟ ಶ್ರೀನಿವಾಸ ಪೂಜಾರಿ
MUST WATCH
ಹೊಸ ಸೇರ್ಪಡೆ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ