ಕೊಟ್ಟಿಗೆಹಾರ : ಕಳ್ಳಭಟ್ಟಿ ಅಡ್ಡೆ ಮೇಲೆ ಬಾಳೂರು ಪೊಲೀಸರ ದಾಳಿ
Team Udayavani, May 23, 2022, 8:17 PM IST
ಕೊಟ್ಟಿಗೆಹಾರ : ಜಾವಳಿ ಸಮೀಪದ ಕಾಳಿಕಟ್ಟೆ ಗ್ರಾಮದಲ್ಲಿ ಕಳ್ಳಭಟ್ಟಿ ಅಡ್ಡೆಯ ಮೇಲೆ ಬಾಳೂರು ಪೋಲಿಸರು ದಾಳಿ ನಡೆಸಿ ಕಳ್ಳಭಟ್ಟಿ ವಶ ಪಡಿಸಿಕೊಂಡಿದ್ದಾರೆ.
ಕಾಳಿಕಟ್ಟೆ ಗ್ರಾಮದ ಸುರೇಶ್ ಎಂಬುವವರ ತೋಟದಲ್ಲಿದ್ದ ಕಳ್ಳಭಟ್ಟಿ ಅಡ್ಡೆಯ ಮೇಲೆ ಪೋಲಿಸರು ದಾಳಿ ನಡೆಸಿ 2 ಲೀಟರ್ ಕಳ್ಳಭಟ್ಟಿ ಹಾಗೂ ಸಲಕರಣೆಗಳನ್ನು ವಶಪಡಿಸಿಕೊಂಡು 100 ಲೀಟರ್ ಕಳ್ಳಭಟ್ಟಿ ಕೊಳೆಯನ್ನು ನಾಶ ಪಡಿಸಿದ್ದಾರೆ.
ಆರೋಪಿಗಳು ಪರಾರಿಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬಾಳೂರು ಠಾಣೆ ಪಿಎಸ್ಐ ಪವನ್ ಕುಮಾರ್ ಸಿ.ಸಿ, ಸಿಬ್ಬಂದಿಗಳಾದ ಮಹೇಶ್, ವಸಂತ್, ಮನು, ಪ್ರವೀಣ್, ಅಭಿಜಿತ್, ಸತೀಶ್, ಓಂಕಾರ್, ಹೇಮಂತ್, ಪ್ರದೀಪ್ ಇದ್ದರು.
ಇದನ್ನೂ ಓದಿ : ಆರ್ಥಿಕ ಸುಧಾರಣೆ ಅಬಾಧಿತ;ದಾವೋಸ್ ವಿಶ್ವ ಆರ್ಥಿಕ ಶೃಂಗದಲ್ಲಿ ನೀತಿ ಆಯೋಗದ ಸಿಇಒ ಪ್ರತಿಪಾದನೆ