ಗ್ರಾಪಂ ಸಂಕೀರ್ಣಕ್ಕೆ ಜಿಪಂ ಸಿಇಒ ಭೇಟಿ
Team Udayavani, Oct 28, 2021, 7:43 PM IST
ಕೊಟ್ಟಿಗೆಹಾರ: ಬಣಕಲ್ ಗ್ರಾಪಂ ಸ್ವತ್ಛಸಂಕೀರ್ಣಕ್ಕೆ ಜಿಪಂ ಸಿಇಒ ಪ್ರಭು ಭೇಟಿನೀಡಿ ಸ್ವತ್ಛತೆಯ ಬಗ್ಗೆ ಪರಿಶೀಲನೆ ನಡೆಸಿ,ಶ್ಲಾಘನೆ ವ್ಯಕ್ತಪಡಿಸಿದರು.ಬಳಿಕ ಮಾತನಾಡಿದ ಅವರು,ಬಣಕಲ್ ಗ್ರಾಪಂ ಸ್ವತ್ಛತೆ ಮತ್ತಿತರಕಾಮಗಾರಿಗಳ ಬಗ್ಗೆ ಉತ್ತಮಕೆಲಸ ಮಾಡಿದೆ. ಸ್ವತ್ಛ ಸಂಕೀರ್ಣದವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗಿದೆ.
ತ್ಯಾಜ್ಯ ನಿರ್ವಹಣೆಗೆಚಿಕ್ಕ ವಾಹನ ಇದ್ದುದರಿಂದ ಮುಂದಿನದಿನಗಳಲ್ಲಿ ಟ್ರಾÂಕ್ಟರ್ಗಳಿಗೆ ಆದ್ಯತೆ ನೀಡಿತ್ಯಾಜ್ಯ ನಿರ್ವಹಣೆ ಸುಲಭವಾಗುವಂತೆನೋಡಿಕೊಳ್ಳಲಾಗುವುದು ಎಂದರು.ಪ್ಲಾಸ್ಟಿಕ್ ಕರಗಿಸುವ ಯಂತ್ರ ವಿತರಿಸುವವ್ಯವಸ್ಥೆ ಮಾಡಲಾಗುವುದು. ಈಗಾಗಲೇಬಣಕಲ್ ಗ್ರಾಪಂಯಲ್ಲಿ ನಿವೇಶನಕ್ಕಾಗಿ450 ಅರ್ಜಿಗಳು ಬಾಕಿ ಉಳಿದಿವೆ.
ಸದ್ಯಕ್ಕೆನಿವೇಶನಕ್ಕಾಗಿ 2 ಎಕರೆ ಸ್ಥಳವನ್ನು ಶೀಘ್ರವೇಮಂಜೂರು ಮಾಡಲಾಗುವುದು. ಸ್ಥಳದಕೊರತೆಯಿರುವುದರಿಂದ ಖಾಲಿ ಸ್ಥಳಗುರುತಿಸಿದ ನಂತರ 20 ಎಕರೆ ಜಾಗನಿವೇಶನಕ್ಕೆ ಕಾದಿರಿಸಲು ಅಧಿ ಕಾರಿಗಳಿಗೆಸೂಚಿಸಲಾಗುವುದು ಎಂದರು.ಗ್ರಾಪಂಗಳು ಸ್ತ್ರೀಶಕ್ತಿ ಮತ್ತಿತರಸಂಘ-ಸಂಸ್ಥೆಗಳಿಗೆ ಪಂಚಾಯಿತಿ ಮಟ್ಟದಲ್ಲಿಕೌಶಲ್ಯ ಹಾಗೂ ಸ್ವಾವಲಂಬನೆಯಉದ್ಯೋಗ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿಸಂಘ ಸಂಸ್ಥೆಗಳನ್ನು ಬೆಳೆಸಬೇಕು.
ಇದರಿಂದಆದಾಯ ಹೆಚ್ಚುತ್ತದೆ. ಗ್ರಾಮಾಭಿವೃದ್ಧಿಗೆಒತ್ತು ನೀಡಿದಂತಾಗುತ್ತದೆ ಎಂದರು.ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸೋಮಶೇಖರ್, ತಾಪಂ ಇಒಡಿ.ಡಿ.ಪ್ರಕಾಶ್, ಗ್ರಾಪಂ ಅಧ್ಯಕ್ಷ ಜಿ.ಸತೀಶ್,ಪಿಡಿಒ ಬಿ.ಎನ್.ಕೃಷ್ಣಪ್ಪ, ಗ್ರಾಪಂ ಸದಸ್ಯರುಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ