ಮಲೆನಾಡಿಗೂ ವಕ್ಕರಿಸಿದ ಮಿಡತೆ ಹಾವಳಿ


Team Udayavani, Jun 11, 2020, 8:27 AM IST

ಮಲೆನಾಡಿಗೂ ವಕ್ಕರಿಸಿದ ಮಿಡತೆ ಹಾವಳಿ

ಶೃಂಗೇರಿ: ಕೂತಗೋಡು ಗ್ರಾಪಂ ವ್ಯಾಪ್ತಿಯ ಕೊಚ್ಚವಳ್ಳಿಯಲ್ಲಿ ಮಿಡತೆ ದಾಳಿಗೆ ತುತ್ತಾಗಿರುವ ಅಡಕೆ ಮರ.

ಶೃಂಗೇರಿ: ಉತ್ತರ ಭಾರತದಲ್ಲಿ ಕಂಡು ಬಂದಿರುವ ಮಿಡತೆ ಹಾವಳಿ ಇದೀಗ ಮಲೆನಾಡಿಗೂ ವಕ್ಕರಿಸಿದೆ. ತಾಲೂಕಿನ ಕೂತಗೋಡು ಗ್ರಾಪಂ ವ್ಯಾಪ್ತಿಯ ರೈತರೊಬ್ಬರ ಅಡಕೆ ತೋಟಕ್ಕೆ ಮಿಡತೆ ದಾಳಿ ಮಾಡಿದ್ದು, ರೈತರ ನಿದ್ದೆಗೆಡಿಸಿದೆ.

ಕೊಚ್ಚವಳ್ಳಿಯ ಅಶೋಕ್‌ ಎಂಬುವವರ ಅಡಕೆ ತೋಟದಲ್ಲಿ ಮಿಡತೆ ದಾಳಿ ನಡೆಸಿದ್ದು, ಎರಡೇ ದಿನದಲ್ಲಿ ಎರಡು ಮರದ ಸೋಗೆ(ಎಲೆ) ಸಂಪೂರ್ಣ ತಿಂದು ಹಾಕಿದೆ. ಮರ ಒಣಗಿ ನಿಂತಿದ್ದು, ಫಲ ಭರಿತ ಕೊನೆಯ ಅಡಕೆ ಕಾಯಿಗಳು ಉದುರಿ ಹೋಗಿದೆ. ಮಂಗಳವಾರ ಮನೆಯ ಎದುರಿನ ತೋಟದಲ್ಲಿ ಟಾರ್ಚ್‌ ಬೆಳಕಿನಲ್ಲಿ ಮಿಡತೆಗಳ ಹಾರಾಟ ಕಂಡು ಬಂದಿದೆ. ಹತ್ತಾರು ಮರದಲ್ಲಿ ಕಂಡು ಬಂದ ಮಿಡತೆಗಳು ರಾತ್ರಿ ಅಡಕೆ ಸೋಗೆಯನ್ನು ತಿನ್ನುವುದನ್ನು ಗಮನಿಸಿದ್ದಾರೆ. ಬೆಳಕು ಹರಿಯುತ್ತಿದ್ದಂತೆ ಮಿಡತೆಗಳು ಎಲೆ ಅಡಿ ಸೇರಿಕೊಳ್ಳುತ್ತಿದ್ದು, ಸೋಗೆಯನ್ನು ಎಳೆದರೆ ಮಿಡತೆಗಳು ಹಾರಾಡುವುದು ಗೋಚರಿಸುತ್ತದೆ. ಹತ್ತಾರು ಮರಗಳಲ್ಲಿ ರಾಶಿ ರಾಶಿ ಮಿಡತೆ ಕಂಡು ಬಂದಿದ್ದು, ಅಡಕೆ ತೋಟದಲ್ಲಿರುವ ಜಾಯಿಕಾಯಿ ಮರದಲ್ಲೂ ಕಾಣಿಸಿಕೊಂಡಿದೆ. ಮಿಡತೆ ದಾಳಿ ಹೆಚ್ಚಾದರೆ ನಾಲ್ಕಾರು ದಿನದಲ್ಲಿಯೇ ತೋಟವಿಡೀ ತಿಂದು ಹಾಕುವ ಭೀತಿ ಎದುರಾಗಿದೆ.

ಈ ಘಟನೆಯಿಂದ ಸ್ಥಳೀಯ ರೈತರು ಆತಂಕಗೊಂಡಿದ್ದಾರೆ. ಗ್ರಾಮದಲ್ಲಿ ಈಗಾಗಲೇ ಅಡಕೆ ತೋಟಕ್ಕೆ ಹಳದಿ ಎಲೆ ರೋಗವಿದ್ದು, ಗ್ರಾಮದಲ್ಲಿ ಹತ್ತಾರು ಎಕರೆ ರೋಗಕ್ಕೆ ನಾಶವಾಗಿದೆ. ಅಶೋಕ್‌ ಅವರ ತೋಟ ಹೊಸ ತೋಟವಾಗಿದ್ದು, ಫಲಭರಿತ ಅಡಕೆ ಮರಗಳಿಗೆ ಮಿಡತೆ ದಾಳಿಯಾದರೆ ತೋಟ ನಾಶವಾಗುವುದು ಖಚಿತ. ಕೊಳೆ ರೋಗಕ್ಕೆ ಈಗಗಾಲೇ ಬೊರ್ಡೋ ದ್ರಾವಣ ಸಿಂಪಡಿಸಿದ್ದರೂ ಮಿಡತೆ ಇದಕ್ಕೆ ಬಗ್ಗದೇ ಸೋಗೆಯನ್ನು ತಿಂದು ಹಾಕುತ್ತಿವೆ. ಮಿಡತೆ ಕಪ್ಪು ಹಸಿರು ಬಣ್ಣದಿಂದ ಕೂಡಿದ್ದು, ದೇಹದ ಮೇಲೆ ಹಳದಿ ಚುಕ್ಕೆ ಹೊಂದಿದೆ. ಮರದಿಂದ ಮರಕ್ಕೆ ಹಾರುವ ಇದು ಸಮೃದ್ಧವಾಗಿ ಹಸಿರು ಎಲೆ ಭಾಗವೇ ಇದಕ್ಕೆ ಆಹಾರವಾಗಿದೆ.

ಮಕ್ಕಳಂತೆ ಹಗಲು ರಾತ್ರಿ ಬೆಳೆಸಿರುವ ಅಡಕೆ ತೋಟಕ್ಕೆ ಇದೀಗ ಮಿಡತೆ ದಾಳಿ ಇಟ್ಟಿರುವುದರಿಂದ ತೀವ್ರ ಆತಂಕ ಎದುರಾಗಿದೆ. ಕಳೆದ ಮೂರು ದಿನದಿಂದ ಕೆಲವೇ ಮಿಡತೆ ಕಂಡು ಬಂದಿದ್ದು, ಮಂಗಳವಾರ ರಾತ್ರಿ ನೂರಾರು ಮಿಡತೆ ಕಂಡು ಬಂದಿದೆ. ಈಗಾಗಲೇ ಎರಡು ಮರವನ್ನು ಸಂಪೂರ್ಣ ತಿಂದು ಹಾಕಿದೆ. ಇದೇ ರೀತಿ ದಾಳಿ ಮುಂದುವರೆದರೆ ತೋಟ ನಾಶವಾಗಲಿದೆ. ತೋಟಗಾರಿಕೆ ಇಲಾಖೆ ತ್ವರಿತವಾಗಿ ಇದಕ್ಕೆ ಸೂಕ್ತ ಔಷ ಧ ಸಿಂಪಡಣೆಗೆ ಮಾರ್ಗದರ್ಶನ ನೀಡಬೇಕು. -ಕೊಚ್ಚವಳ್ಳಿ ಅಶೋಕ್‌ಹೆಗ್ಡೆ, ತೋಟದ ಮಾಲೀಕ

ಮಿಡತೆ ದಾಳಿ ಈಗಾಗಲೇ ನರಸಿಂಹರಾಜಪುರ ತಾಲೂಕಿನಲ್ಲಿ ಕಂಡು ಬಂದಿದೆ. ಇದರ ನಿಯಂತ್ರಣ ಸಾಧ್ಯವಿದೆ. ಇದಕ್ಕಾಗಿ ರೈತರು ಕ್ವಿನಾಲ್‌ ಫಾಸ್‌ 25 ಇಸಿ 2ಮಿ.ಲೀ. ಒಂದು ಲೀ.ನೀರಿನೊಂದಿಗೆ ಸಿಂಪಡಿಸುವುದರಿಂದ ಮಿಡತೆ ಬಾಧೆ ಹತೋಟಿಗೆ ತರಬಹುದಾಗಿದೆ. –ಶ್ರೀಕೃಷ್ಣ, ಸಹಾಯಕ ನಿರ್ದೇಶಕ, ತೋಟಗಾರಿಕೆ ಇಲಾಖೆ

ಗ್ರಾಮದಲ್ಲಿ ಕಂಡು ಬಂದಿರುವ ಮಿಡತೆ ದಾಳಿ ಆತಂಕ ಉಂಟು ಮಾಡಿದೆ. ಈ ಬಗ್ಗೆ ಸರಕಾರಕ್ಕೆ ಹಾಗೂ ಶಾಸಕ ಟಿ.ಡಿ.ರಾಜೇಗೌಡರ ಗಮನಕ್ಕೆ ತರಲಾಗಿದೆ. ರೈತರ ನೆರವಿಗೆ ಸರಕಾರ ಧಾವಿಸಬೇಕು. –ನಾಗೇಶ್‌ ಹೆಗ್ಡೆ, ಅಧ್ಯಕ್ಷರು, ಕೂತಗೋಡು ಗ್ರಾಪಂ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chikkaballapur: ಡಾ.ಕೆ.ಸುಧಾಕರ್‌ಗೆ ಜೈ ಎಂದ ಎಂಟಿಬಿ!

Chikkaballapur: ಡಾ.ಕೆ.ಸುಧಾಕರ್‌ಗೆ ಜೈ ಎಂದ ಎಂಟಿಬಿ!

7-politics-1

Chikkamagaluru: ಮೊದಲ ದಿನವೇ ಅಸಮಾಧಾನ ಸ್ಪೋಟ ಎದುರಿಸಿದ ಕೈ ಅಭ್ಯರ್ಥಿ

6-ckm

Mudigere: ಅಕ್ರಮವಾಗಿ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿ ಬಂಧನ

Horanadu, ಕಳಸ ದೇವಸ್ಥಾನಗಳಿಗೆ ಭೇಟಿ ನೀಡಿದ ಬಿಎಸ್‌ವೈ ಕುಟುಂಬ

Horanadu, ಕಳಸ ದೇವಸ್ಥಾನಗಳಿಗೆ ಭೇಟಿ ನೀಡಿದ ಬಿಎಸ್‌ವೈ ಕುಟುಂಬ

Temple Run: ಮತ್ತೆ ಮೋದಿ ಪ್ರಧಾನಿ ಆಗಬೇಕೆಂದು ಶತಾಯುಷಿ ಅಜ್ಜಿಯ ಟೆಂಪಲ್ ರನ್…

Temple Run: ಮತ್ತೆ ಮೋದಿ ಪ್ರಧಾನಿ ಆಗಬೇಕೆಂದು ಶತಾಯುಷಿ ಅಜ್ಜಿಯ ಟೆಂಪಲ್ ರನ್…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Sullia: ಗಾಂಜಾ ಸೇವನೆ; ಇಬ್ಬರು ವಶಕ್ಕೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.