ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಅಲ್ಪ ಇಳಿಕೆ
Team Udayavani, Jul 17, 2021, 11:36 AM IST
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಇಳಿದಿದ್ದು ಶುಕ್ರವಾರ ಬೆಳಗ್ಗೆ ಮತ್ತು ಸಂಜೆ ವೇಳೆ ಮಳೆಯಾಗಿದೆ. ಮಳೆ ಅಬ್ಬರಕ್ಕೆ ತುಂಗಾ, ಭದ್ರಾ, ಹೇಮಾವತಿ ನದಿಗಳು ತುಂಬಿ ಹರಿಯುತ್ತಿದ್ದು ಶುಕ್ರವಾರ ಯಾವುದೇ ಹಾನಿ ಸಂಭವಿಸಿಲ್ಲ.
ಮಲೆನಾಡು ಭಾಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿದಿತ್ತು. ಶುಕ್ರವಾರ ಬೆಳಗ್ಗೆ ಮಳೆಯಾದರೆ ಮಧ್ಯಾಹ್ನದ ವೇಳೆಗೆ ಬಿಡುವು ನೀಡಿದೆ. ಸಂಜೆ ವೇಳೆಗೆ ಮತ್ತೆ ಮಳೆಯಾಗುತ್ತಿದೆ. ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಕಳಸ ಭಾಗದಲ್ಲಿ ಬೆಳಗ್ಗೆ ಮಳೆಯಾಗಿದ್ದು, ಮಧ್ಯಾಹ್ನದ ವೇಳೆಗೆ ಕಡಿಮೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಮಲ್ಲಂದೂರು, ವಸ್ತಾರೆ, ಆಣೂರು ಭಾಗದಲ್ಲಿ ಮಳೆಯಾಗಿದೆ.
ಚಿಕ್ಕಮಗಳೂರು ಸುತ್ತಮುತ್ತ ಸೇರಿದಂತೆ ಕಡೂರು, ತರೀಕೆರೆ ಅಜ್ಜಂಪುರ ಭಾಗದಲ್ಲಿ ಮೋಡ ಕವಿದ ವಾತವರಣವಿದ್ದು, ಸಾಧಾರಣ ಮಳೆಯಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿ ನೀರು ರಭಸವಾಗಿ ಹರಿಯುತ್ತಿದ್ದು ನದಿಪಾತ್ರಕ್ಕೆ ಜನರು ತೆರಳದಂತೆ ಜಿಲ್ಲಾಡಳಿತ ಆದೇಶ ನೀಡಿದೆ ಹಾಗೂ ಮುಂದಿನ ನಾಲ್ಕು ದಿನಗಳ ಕಾಲ ಜಿಲ್ಲಾದ್ಯಂತ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಜೂನ್ ತಿಂಗಳಿಂದ ಇಲ್ಲಿಯವರೆಗೂ 63 ಮನೆಗಳಿಗೆ ಹಾನಿ; ಜಿಲ್ಲಾದ್ಯಂತ ಜೂನ್ ತಿಂಗಳಿಂದ ಇಲ್ಲಿಯವರೆಗೂ ಸುರಿದ ಮಳೆಗೆ 63 ಮನೆಗಳಿಗೆ ಹಾನಿಯಾಗಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ 2 ಮನೆಗಳಿಗೆ ಹಾನಿಯಾಗಿದ್ದರೆ, ಮೂಡಿಗೆರೆತಾಲೂಕಿನಲ್ಲಿ 27 ಮನೆಗಳಿಗೆ ಹಾನಿಯಾಗಿದೆ. ಕೊಪ್ಪ ತಾಲೂಕಿನಲ್ಲಿ 4 ಮನೆ, ಶೃಂಗೇರಿ 4, ತರೀಕೆರೆ 8, ಕಡೂರು 8, ನರಸಿಂಹರಾಜಪುರ 2, ಅಜ್ಜಂಪುರ ತಾಲೂಕಿನಲ್ಲಿ 8 ಮನೆಗಳಿಗೆ ಹಾನಿಯಾಗಿದೆ.
ಮಳೆ ವಿವರ: ಚಿಕ್ಕಮಗಳೂರು ಕಸಬಾ 9.2, ಜೋಳದಾಳ್ 20.2, ಅತ್ತಿಗುಂಡಿ 40.1,ಸಂಗಮೇಶ್ವರಪೇಟೆ 38.2, ಕಳಸಾಪುರ 4.4, ಆಲ್ದೂರು25, ಬ್ಯಾರುವಳ್ಳಿ 28.3, ಕೆ.ಆರ್.ಪೇಟೆ 19.1, ದಾಸರಹಳ್ಳಿ3.1, ಮಳಲೂರು 21.1, ವಸ್ತಾರೆ 30.6, ಕಡೂರು 1.8, ಸಿಂಗಟಗೆರೆ 4, ಪಂಚನಹಳ್ಳಿ 4, ಎಮ್ಮೆದೊಡ್ಡಿ 2.,ಯಗಟಿ 2, ಗಿರಿಯಾಪುರ 4,ಬಾಸೂರು 1, ಕೊಪ್ಪ 30, ಹರಿಹರಪುರ 28, ಜಯಪುರ 70.2 ಬಸರಿಕಟ್ಟೆ 67.9, ಕಮ್ಮರಡಿ 48.4, ಮೂಡಿಗೆರೆ 34.4, ಕೊಟ್ಟಿಗೆಹಾರ 75, ಗೋಣಿಬೀಡು 58.1, ಜಾವಳಿ 78.2, ಕಳಸ 55,8, ಹಿರೇಬೈಲು 65, ಹೊಸಕೆರೆ 107.6 ಬಿಳ್ಳೂರು 59, ಶೃಂಗೇರಿ 56, ಕಿಗ್ಗ 91, ಕೆರೆಕಟ್ಟೆ 121 ತರೀಕೆರೆ 78 ಲಕ್ಕವಳ್ಳಿ 8.2, ರಂಗೇನಹಳ್ಳಿ 4, ಲಿಂಗದಹಳ್ಳಿ 3, ಉಡೇವಾ 4, ತ್ಯಾಗದಬಾಗಿ 12.6, ತಣಿಗೆಬೈಲು 5.4,ಹುಣಸಘಟ್ಟ 4, ಅಜ್ಜಂಪುರ ಕಸಬಾ 2.2, ಶಿವನಿ 5.2, ಬುಕ್ಕಾಂಬುದಿಯಲ್ಲಿ 2.1 ಮತ್ತು ಚೌಳಹಿರಿಯೂರಿನಲ್ಲಿ 2.1 ಮಿಮೀ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ
Bengaluru Karaga: ರಾತ್ರಿ ಇಡೀ ಕರಗ ಉತ್ಸವ ವೈಭವ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ