ಕಡ್ಡಾಯ ಕ್ವಾರಂಟೈನ್: ಗ್ರಾಪಂಗಳ ನಿರ್ಣಯ
Team Udayavani, May 14, 2020, 12:46 PM IST
ಸಾಂದರ್ಭಿಕ ಚಿತ್ರ
ಮೂಡಿಗೆರೆ: ಕೋವಿಡ್-19 ಸೋಂಕು ಇರುವ ಭೀತಿ ಹಿನ್ನೆಲೆಯಲ್ಲಿ ಹೊರ ಜಿಲ್ಲೆಗಳಿಂದ ಬರುವವರಿಗೆ ಕಡ್ಡಾಯವಾಗಿ ಹೋಂ-ಕ್ವಾರಂಟೈನ್ ಮಾಡುವುದಾಗಿ ಹೊರನಾಡು, ಮರಸಣಿಗೆ ಹಾಗೂ ಇಡಕಿಣಿ ಗ್ರಾಮ ಪಂಚಾಯತಿಗಳು ನಿರ್ಣಯ ಕೈಗೊಂಡಿವೆ.
ಹೊರನಾಡು, ಮರಸಣಿಗೆ ಹಾಗೂ ಇಡಕಣಿ ಗ್ರಾಪಂಗಳಲ್ಲಿ ನಡೆಸಲಾದ ಸಭೆಯಲ್ಲಿ ಕೆಂಪು ಹಾಗೂ ಹಳದಿ ವಲಯಗಳಿಂದ ಬರುವ ಯಾವುದೇ ವ್ಯಕ್ತಿಗಳನ್ನು ಊರಿನ ಸುರಕ್ಷತೆಯ ದೃಷಿಯಿಂದ ಕಡ್ಡಾಯವಾಗಿ ಹೋಂ-ಕ್ವಾರಂಟೈನ್ ಮಾಡವುದು ಸೂಕ್ತ. ಇದರಿಂದಾಗಿ ಹಲವರಿಗೆ ತೊಂದರೆಯ ಜೊತೆಗೆ ಬೇಸರ ಉಂಟಾದರೂ ಸಹಜ. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಸನ್ಮತಿ, ಉಪಾಧ್ಯಕ್ಷೆ ವಿನೋದಾ, ಪಿಡಿಒ ಅರುಣ್ ಕುಮಾರ್, ವೈದ್ಯಾ ಧಿಕಾರಿ ಸುನೈನಾ, ಪೊಲೀಸ್ ಸಿಬ್ಬಂದಿ ಮೋಹನ್, ರಾಜಣ್ಣ, ಮರಸಣಿಗೆ ಗ್ರಾಪಂ ಸಭೆಯಲ್ಲಿ ಅಧ್ಯಕ್ಷೆ ಇಂದಿರಾ, ಸದಸ್ಯ ವಿಶ್ವನಾಥ್, ಪಿಡಿಒ ಸುಧೀರ್, ಇಡಕಣಿ ಗ್ರಾಪಂ ಅಧ್ಯಕ್ಷೆ ಸುಚಿತ್ರಾ, ಪಿಡಿಒ ಶ್ರೀನಿವಾಸ್, ಗ್ರಾಪಂ ಸದಸ್ಯ ಸುಧಾಕರ್, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Devaramane; ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು
Charmady ಘಾಟಿಯಲ್ಲಿ ಕೆಟ್ಟು ನಿಂತ 16 ಚಕ್ರದ ಲಾರಿ… ಕಿ.ಮೀ.ಗಟ್ಟಲೆ ಟ್ರಾಫಿಕ್ ಜಾಮ್
420 ನಂಬರ್ನವರಿಂದ 400 ಸ್ಥಾನ ಗೆಲ್ಲುವ ಮಾತು… ಬಿಜೆಪಿ ವಿರುದ್ಧ ಪ್ರಕಾಶ್ ರಾಜ್ ಕಿಡಿ
Chikkamagaluru: ಈಶ್ವರಪ್ಪನವರ ಬಂಡಾಯ ನಿರ್ಧಾರದಿಂದ ಪಕ್ಷಕ್ಕೆ ಮಾರಕವಾಗಬಾರದು: ಸಿಟಿ ರವಿ
ಈಶ್ವರಪ್ಪ ಬಂಡಾಯ ಸ್ಪರ್ಧೆ: ಶೀಘ್ರದಲ್ಲಿ ಗೊಂದಲಗಳು ಬಗೆಹರಿಯುತ್ತದೆ; ಕೋಟ ಶ್ರೀನಿವಾಸ ಪೂಜಾರಿ
MUST WATCH
ಹೊಸ ಸೇರ್ಪಡೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ