ಮಳೆಯಿಂದ ರಾಗಿಗೆ ಬಂತು ಕಳೆ !
Team Udayavani, Oct 18, 2018, 1:53 PM IST
ಕಡೂರು: ತಾಲೂಕಿನಾದ್ಯಂತ ಸುರಿಯುತ್ತಿರುವ ಚಿತ್ತಾ ಮಳೆಯು ರಾಗಿ ಬೆಳೆಗೆ ಆಸರೆಯಾಗಿ ಜೀವ ನೀಡಿದೆ. ಕಳೆದ ಮೂರು ನಾಲ್ಕು ವರ್ಷಗಳಿಂದ ಬರಗಾಲಕ್ಕೆ ತುತ್ತಾಗುತ್ತಿದ್ದ ಕಡೂರು ತಾಲೂಕಿಗೆ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಮಳೆ ಬಂದಿದೆ. ಕೆಲವು ಭಾಗಗಳಲ್ಲಿ ಮುಂಗಾರಿನ ಬೆಳೆಗಳು ಕೈ ಕೊಟ್ಟರೂ ಹಿಂಗಾರು ಪೂರ್ವ ಬೆಳೆಗಳಿಗೆ ಬರುತ್ತಿರುವ ಮಳೆಯಿಂದ ಜೀವ ಬಂದಿದೆ.
ತಾಲೂಕಿನಾದ್ಯಂತ 29,705 ಹೆಕ್ಟೇರಿನಲ್ಲಿ ರಾಗಿ ಬಿತ್ತನೆ ಮಾಡಲಾಗಿದೆ. ಯಗಟಿ ಹೋಬಳಿಯಲ್ಲಿ 5 ಸಾವಿರ ಹೆಕ್ಟೇರಿಗೂ ಹೆಚ್ಚಿನ ಜಮೀನಿನಲ್ಲಿ ಚಿಜಿತ್ತನೆ ಮಾಡಲಾಗಿದೆ. ಕಡೂರು ಕಸಬಾ 4200, ಹೀರೆನಲ್ಲೂರು 4300, ಸಖರಾಯಪಟ್ಟಣ 4550, ಪಂಚನಹಳ್ಳಿ 4900,ಚೌಳಹಿರಿಯೂರು 3000 ಹೆಕ್ಟೇರಿನಲ್ಲಿ ಬಿತ್ತನೆಯಾಗಿ ಉತ್ತಮ ಬೆಳೆ ಬರುವ ನಿರೀಕ್ಷೆಯಲ್ಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆಗಿದಾಂಗ್ಗೆ ಬರುತ್ತಿರುವ ಮಳೆಯಿಂದ ರಾಗಿ, ಮುಸುಕಿನ ಜೋಳ ಮತ್ತಿತರ ಬೆಳೆಗಳು ಉತ್ತಮ ಇಳುವರಿ ನೀಡಲಿವೆ.
ಕಳೆದ ಒಂದು ವಾರದಿಂದ ಸಂಜೆ ಆಥವಾ ರಾತ್ರಿ ಮಳೆ ಸುರಿಯುತ್ತಿದ್ದು ಕಡೂರು, ಬೀರೂರು ಪಟ್ಟಣಗಳು ಸೇರಿದಂತೆ, ಹಿರೇನಲ್ಲೂರು, ಗಿರಿಯಾಪುರ, ಬಿಳುವಾಲ, ಬಾಸೂರು, ನಾಗೇನಹಳ್ಳಿ ಮುಂತಾದೆಡೆ ಕೊಯ್ಲು ಮಾಡಿದ್ದ ಈರುಳ್ಳಿ ನೆನೆದು ರೈತರು ಅದನ್ನು ರಕ್ಷಿಸಲು ಹರಸಾಹಸ ಪಡುವಂತಹ ಸ್ಥಿತಿಗೆ ಬಂದಿದೆ. ಇನ್ನು ಕೆಲವು ಭಾಗಗಳಲ್ಲಿ ಈರುಳ್ಳಿಗೆ ಬೆಲೆ ಇಲ್ಲದೆ ಕೂಲಿ ನೀಡಲಾಗದೆ ಬೆಳೆಯನ್ನು ಹೊಲದಲ್ಲೇ ಬಿಟ್ಟುಬಿಟ್ಟಿದ್ದಾರೆ.
ಈ ಬಾರಿ ಮುಂಗಾರು ಪೂರ್ವ ಮಳೆ ಬಾರದೇ ರೈತರು ಆತಂಕಕ್ಕೊಳಗಾಗಿದ್ದರು. ಹಾಕಿದ ಬೆಳೆಗಳೆಲ್ಲ ಮಳೆ ಬಾರದೆ ಹಾಳಾಗಿತ್ತು. ಕಡೂರು ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದೆ.
ವಾಣಿಜ್ಯ ಬೆಳೆಗಳಾದ ಈರುಳ್ಳಿ ಮತ್ತು ಹತ್ತಿ ಅತ್ಯಂತ ಕಡಿಮೆ ಇಳುವರಿ ಬಂದಿತ್ತು. ಮಿಕ್ಕಂತೆ ಇತರೆ ಬೆಳೆಗಳಾದ ಉದ್ದು, ಹೆಸರು, ಎಳ್ಳು, ಮೆಕ್ಕೆಜೋಳ, ಶೇಂಗಾ ಮುಂತಾದವುಗಳು ಶೇ.70 ರಷ್ಟು ಹಾನಿಗೊಳಗಾಗಿದ್ದವು. ಇದೀಗ ಚಿತ್ತಾ ಮಳೆ ಉತ್ತಮವಾಗಿ ಬಂದಿರುವುದು ಈಗಾಗಲೇ ಬಿತ್ತನೆ ಕಾರ್ಯ ಮುಗಿದಿದೆ ಎಂದು ತಾಲೂಕು ಪ್ರಭಾರ ಕೃಷಿ ಅಧಿಕಾರಿ ಚಂದ್ರು ಮಾಹಿತಿ ನೀಡಿದರು.
ಮೊದಲು ಕೈಕೊಟ್ಟ ಮಳೆ ಇದೀಗ ಬಿರುಸಾಗಿ ಸುರಿಯಲಾರಂಭಿಸಿರುವುದು ರೈತರಿಗೆ ಹರ್ಷ ತಂದರೂ ಯಾವುದೇ ಕೆರೆಗಳು ತುಂಬಿಲ್ಲದಿರುವುದು ಆತಂಕಕಾರಿಯಾಗಿದೆ. ಕೆರೆಗಳು ತುಂಬದಿದ್ದರೆ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಕೊರತೆಯಿಂದ ನೀರು ಕಡಿಮೆಯಾಗುವ ಸಂಭವವಿದೆ. ಅಲ್ಲದೆ ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ಕಾಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್ಡಿಡಿ
ಕ್ರೀಡೆಯೊಂದಿಗೆ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿ ಡಿ.ಬಿ.ಶಬರಿ
MUST WATCH
ಹೊಸ ಸೇರ್ಪಡೆ
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು
Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್
ದಳಪತಿ ಅಭಿಮಾನಿಗಳ ಟ್ರೋಲ್ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?