ಚಿಕ್ಕಮಗಳೂರು : ಮಲೆನಾಡಿನಲ್ಲಿ ಭಾರೀ ಮಳೆ | ಮಹಲ್ಗೋಡು ಸೇತುವೆ ಮುಳುಗಡೆ
Team Udayavani, Oct 11, 2021, 8:29 PM IST
ಚಿಕ್ಕಮಗಳೂರು : ಮಲೆನಾಡಲ್ಲಿ ಸಂಜೆ ಸುರಿದ ಭಾರೀ ಮಳೆಯಿಂದ ಎನ್.ಆರ್.ಪುರ ತಾಲೂಕಿನ ಮಹಲ್ಗೋಡು ಸೇತುವೆ ಮುಳುಗಡೆಯಾಗಿದೆ. ಧಾರಾಕಾರ ಮಳೆಗೆ ಸೇತುವೆ ಪಕ್ಕದ ಹಳ್ಳ ತುಂಬಿ ಹರಿದಿದೆ.
ಇನ್ನು ತುಂಬಿ ಹರಿಯುತ್ತಿದ್ದ ಸೇತುವೆ ದಾಟಲು ಯತ್ನಿಸಿದ ಬೈಕ್ ಸವಾರರು ತಮ್ಮ ಜೀವಕ್ಕೆ ಆಪತ್ತು ತಂದುಕೊಂಡರು. ನೀರಿನ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಮೋರಿಗೆ ಬೈಕ್ ಸಿಲುಕಿಕೊಂಡಿತು. ಹಗ್ಗದ ಸಹಾಯದಿಂದ ಸ್ಥಳೀಯರು ಬೈಕ್ ಸವಾರರನ್ನು ರಕ್ಷಣೆ ಮಾಡಿದರು.
ಇನ್ನು ಮಳೆಯಿಂದಾಗಿ ಬಾಳೆಹೊನ್ನೂರು-ಕಳಸ ಸಂಪರ್ಕ ಕಡಿತಗೊಂಡಿತು.ಸೇತುವೆ ಬಳಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.