ಜೈನ ವೀರನಿಷಿಧಿ-ಮಹಾಸತಿ ಕಲ್ಲುಗಳ ಸಂಶೋಧನೆ


Team Udayavani, Jul 27, 2020, 12:11 PM IST

ಜೈನ ವೀರನಿಷಿಧಿ-ಮಹಾಸತಿ ಕಲ್ಲುಗಳ ಸಂಶೋಧನೆ

ಬಾಳೆಹೊನ್ನೂರು: ಮಾರ್ಕಾಂಡೇಶ್ವರ ದೇವಾಲಯದ ಹಿಂದಿನ ಅರಳೀಕಟ್ಟೆ ಬುಡದ ಬಲಭಾಗದಲ್ಲಿರುವ 4 ಅಡಿ ಎತ್ತರದ ಮಹಾಸತಿ ಕಲ್ಲು

ಬಾಳೆಹೊನ್ನೂರು: ಪಟ್ಟಣದ ಮಾರ್ಕಾಂಡೇಶ್ವರ ದೇವಾಲಯದ ಆವರಣದಲ್ಲಿ ಸಾಂತರರ ಕಾಲದ ಒಂದು ಜೈನರ ವೀರನಿಷಿಧಿಗಲ್ಲು, ಬೈರವರಸರ ಕಾಲದ ಒಂದು ಮಹಾಸತಿಕಲ್ಲು, ಒಂದು ವೀರ ಮಹಾಸತಿಕಲ್ಲು ಹಾಗೂ ಎರಡು ಮಹಾಸತಿಕಲ್ಲನ್ನು ಜಿಲ್ಲೆಯ ಹವ್ಯಾಸಿ ಇತಿಹಾಸ ಸಂಶೋಧಕ ಎಚ್‌.ಆರ್‌. ಪಾಂಡುರಂಗ ಸಂಶೋಧನೆ ಮಾಡಿದ್ದಾರೆ.

ಈ ಕುರಿತು ಪತ್ರಿಕೆಗೆ ಮಾಹಿತಿ ನೀಡಿರುವ ಅವರು, ಸಾಂತರರು ಹಾಗೂ ಬೈರವರಸರು ಮತ್ತು ಕೆಳದಿ ನಾಯಕರ ಕಾಲದಲ್ಲಿ ಐತಿಹಾಸಿಕ ವ್ಯಾಪಾರ ಕೇಂದ್ರವಾಗಿದ್ದ ಗ್ರಾಮ ಬಾಳೆಹೊನ್ನೂರಾಗಿದ್ದು, ಸಾಂತರರ ಕಾಲದ ಸಲ್ಲೇಖನ ವ್ರತಾಚರಣೆ ಹಾಗೂ ಬೈರವರಸರ ಕಾಲದ ಮಹಾಸತಿ ಆಚರಣೆಗಳ ಕುರಿತು ಸಂಶೋದಿಸಿ ಬಾಳೆಹೊನ್ನೂರಿನ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಲಾಗಿದೆ ಎಂದು ತಿಳಿಸಿದ್ದಾರೆ.

ಜೈನ ವೀರನಿಷಿಧಿ ಕಲ್ಲು: ದೇವಾಲಯದ ಬಲಪಾರ್ಶ್ವದಲ್ಲಿರುವ 4.6 ಅಡಿ ಎತ್ತರದ ಕಣ ಶಿಲೆಯ ಈ ಸ್ಮಾರಕದಲ್ಲಿ ಮೂರು ಫಲಕಗಳಿದ್ದು ಕೆಳಗಿನ ಫಲಕದಲ್ಲಿ
ಶ್ವೇತಛತ್ರಿ ಸಹಿತ ಅಶ್ವಾರೋಹಿ ವೀರನೊಬ್ಬ ಸೈನಿಕರೊಂದಿಗೆ ಯುದ್ಧಕ್ಕೆ ಹೊರಟ ಶಿಲ್ಪದ ಚಿತ್ರಣವಿದೆ. ಮಧ್ಯದ ಫಲಕದಲ್ಲಿ ಯುದ್ಧದಲ್ಲಿ ಹೋರಾಡಿ ವೀರ ಮರಣ ಹೊಂದಿದ ವೀರನನ್ನು ಚಾಮರಧಾರಿ ದೇವಕನ್ಯೆಯರು ತಮ್ಮ ತೋಳುಗಳಲ್ಲಿ ಎತ್ತಿಕೊಂಡು ಸ್ವಗಕ್ಕೆ ಕೊಂಡೊಯ್ಯುವ ಚಿತ್ರಣವಿದೆ.

ದೇವಾಲಯದ ಎದುರು ಎಡಗಡೆ
ದಿಬ್ಬದ ಮೇಲೆ ದೇವಾಲಯಕ್ಕೆ ಅಭಿಮುಖವಾಗಿ ನಿಂತ 4.6 ಅಡಿ ಎತ್ತರದ ಕಣಶಿಲೆಯ ಮತ್ತೂಂದು ಮಹಾಸತಿ ಕಲ್ಲು ವಿಶೇಷವಾಗಿದ್ದು, ದೇವಾಲಯದ ಚಿತ್ರಕಂಬದ ರೂಪದಲ್ಲಿದ್ದು ಎರಡು ಭಾಗ ಹೊಂದಿದೆ. ಕಂಬದ ಕೆಳಗಿನ ಫಲಕ ಪೀಠಭಾಗವಾಗಿದೆ. ಇದೂ ಸಹ ಹದಿನೇಳನೆ ಶತಮಾನದ್ದಾಗಿದ್ದು, ಬೈರವರಸರ ಕಾಲದ ಸ್ಮಾರಕವಾಗಿದೆ.

ಮೇಲ್ಕಂಡಂತೆ ಸಲ್ಲೇಖನ ವ್ರತದ ಮೂಲಕ ಪ್ರಾಣ ತ್ಯಾಗ ಮಾಡಿದ ವೀರನ ವೀರನಿಷ ಧಿಗಲ್ಲು ಹಾಗೂ ಮಹಾಸತಿ ಆಚರಿಸಿ ಪತಿಯೊಡನೆ ಪ್ರಾಣತ್ಯಾಗ ಮಾಡಿದ ಸತಿಯರ ಮಹಾಸತಿಕಲ್ಲು ಸ್ಮಾರಕಗಳು ಹತ್ತನೇ ಶತಮಾನದಿಂದ ಹದಿನೇಳನೆ ಶತಮಾನದವರೆಗೂ ಬಾಳಿದ ಬಾಳೆಹೊನ್ನೂರಿನ ಮಹಾಪ್ರಜೆಗಳ ಪರಾಕ್ರಮ- ತ್ಯಾಗ- ಸಂಸ್ಕೃತಿಯ ಹೆಮ್ಮೆಯ ಪ್ರತೀಕವಾಗಿದೆ ಎಂದು ಸಂಶೋಧಕ ಪಾಂಡುರಂಗ ತಿಳಿಸಿದ್ದಾರೆ.

ಈ ಸ್ಮಾರಕಗಳ ಅಧ್ಯಯನದಲ್ಲಿ ಮಾರ್ಗದರ್ಶನವನ್ನು ಇತಿಹಾಸ ವಿದ್ವಾಂಸಕ ಎಂ.ಜಿ. ಮಂಜುನಾಥ್‌, ಶೇಷ ಶಾಸ್ತ್ರಿಗಳು ಮಾಡಿದ್ದಾರೆ. ಕ್ಷೇತ್ರ ಕಾರ್ಯದಲ್ಲಿ
ಮಾರ್ಕಾಂಡೇಶ್ವರ ದೇಗುಲದ ಅರ್ಚಕ ಕುಂದೂರು ಪ್ರಕಾಶ್‌ ಭಟ್‌ ಅವರು ಸಹಕರಿಸಿದ್ದರು ಎಂದು ಪಾಂಡುರಂಗ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaaaa

BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.