ಗುರುಕುಲ ಶಿಕ್ಷಣದಿಂದ ಸಂಸ್ಕಾರ
Team Udayavani, Mar 5, 2021, 6:10 PM IST
ಕೊಪ್ಪ: ಗುರುಕುಲ ಶಿಕ್ಷಣದಿಂದಸಂಸ್ಕಾರ ದೊರೆಯುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಮಾನವೀಯಮೌಲ್ಯಗಳನ್ನು ಬೆಳೆಸಿಕೊಂಡರೆ ಮುಂದಿನ ಜೀವನ ಅರ್ಥಪೂರ್ಣ ವಾಗಿರುತ್ತದೆ ಎಂದು ಬಾಳಗಾರು ಮಠದ ಶ್ರೀ ರಘುಭೂಷಣ ತೀರ್ಥ
ಸ್ವಾಮೀಜಿ ಅಭಿಪ್ರಾಯಪಟ್ಟರು. ಹರಿಹರಪುರ ಸಮೀಪದಪ್ರಬೋ ಧಿನಿ ಗುರುಕುಲದಲ್ಲಿ ಬುಧವಾರ ನಡೆದ ಹೊಸ ವಿದ್ಯಾರ್ಥಿಗಳಿಗೆ ದೀûಾ ಕಾರ್ಯಕ್ರಮದಲ್ಲಿ ಆಶೀರ್ವಚನನೀಡಿದ ಅವರು, ಶಿಷ್ಯನಲ್ಲಿರುವ ಅನಾಸಕ್ತಿ, ಅಹಂಕಾರ, ಅನ್ಯಮನಸ್ಕತೆ, ಅನಾದರಗಳಂತಹ ದುರ್ಗುಣಗಳನ್ನು ದೂರಗೊಳಿಸಿ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸುವ ಜವಾಬ್ದಾರಿ ಗುರುವಿನದ್ದು. ಪ್ರಬೋ ಧಿನಿ ಗುರುಕುಲದಂತಹ ಪ್ರಶಸ್ತವಾದ ವಾತಾವರಣದಲ್ಲಿ ಶಿಕ್ಷಣ ಪಡೆಯಲು ಆಯ್ಕೆಯಾಗಿರುವ ಹೊಸ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಅಭಿನಂದನೆ ತಿಳಿಸಿದರು.
ಬೆಂಗಳೂರಿನ ವೇದ ವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕರು, ಕರ್ನಾಟಕ ಗುರುಕುಲ ಪ್ರಕಲ್ಪಗಳ ಸಂಯೋಜಕರೂ ಆದ ಡಾ| ಮಹಾಬಲೇಶ್ವರ ಭಟ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಕುಲದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಇರಬಹುದಾದ ದೋಷಗಳನ್ನು ನಿವಾರಿಸಿ, ಹನ್ನೆರಡು ವರ್ಷಗಳ ಕಾಲ ಅವರಿಗೆ ಅಗತ್ಯ ಸಂಸ್ಕಾರಗಳನ್ನು ನೀಡಿ ಪೂರ್ಣ ಪ್ರಮಾಣದ ವ್ಯಕ್ತಿತ್ವ ವಿಕಸನವನ್ನು ಸಾ ಧಿಸುವ ಪ್ರಯತ್ನ ಗುರುಕುಲದಲ್ಲಿ ಮಾಡಲಾಗುತ್ತಿದೆ ಎಂದರು.
ಉದ್ಯಮಿ ಮಹಾರುದ್ರಪ್ಪ ಮಾತನಾಡಿ,ಗುರುಕುಲದಲ್ಲಿ ಕಲಿಸಿಕೊಡುತ್ತಿರುವ ಶಿಕ್ಷಣ ಪದ್ಧತಿಯು ದೇಶವ್ಯಾಪಿಯಾಗಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಬೋಧಿ ನಿ ಟ್ರಸ್ಟ್ನ ನಿರ್ವಾಹಕ ವಿಶ್ವಸ್ತರಾದ ಎಚ್.ಬಿ. ರಾಜಗೋಪಾಲ್ ವಹಿಸಿದ್ದರು. ಪ್ರಬೋ ಧಿನಿ ಟ್ರಸ್ಟ್ನ ಕಾರ್ಯದರ್ಶಿ ಉಮೇಶ್ ರಾವ್ ಸ್ವಾಗತಿಸಿದರು. ವಿಶ್ವಸ್ತರಾದ ಗಣೇಶ್ ರಾವ್ ವಂದಿಸಿದರು. ವಿಶ್ವಸ್ತರಾದ ಸುವರ್ಣಾ ಕೇಶವ, ಆಹ್ವಾನಿತ ಸದಸ್ಯ ನಾಗರಾಜ್ ಎಚ್.ಎನ್. ಹಾಗೂ ಅಖೀಲ ಭಾರತ ಸಾಹಿತ್ಯ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಇದ್ದರು. ಗುರುಕುಲಕ್ಕೆ ರಾಜ್ಯದ್ಯಂತ ಸಂದರ್ಶನದ ಮೂಲಕ ಆಯ್ಕೆಯಾದ 21 ಜನ ವಿದ್ಯಾರ್ಥಿಗಳು ಸೇರ್ಪಡೆಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ