ಶ್ರೀಮಾತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
Team Udayavani, Oct 30, 2020, 7:52 PM IST
ಚಿಕ್ಕಮಗಳೂರು: ನಾವು ಯಾವ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತೇವೆಯೋ ಆ ಕ್ಷೇತ್ರದ ಜವಬ್ದಾರಿಯನ್ನು ನಿರ್ವಹಿಸುವಂತವರ ಅಂತರಂಗ ಮಕ್ಕಳ ಶುದ್ಧವಾದ ಮನಸ್ಸಿನ ರೀತಿ ಇದ್ದರೆ ಅದು ಪರಿಪೂರ್ಣವಾದ ಬದುಕು ಎಂದು ಹೊರನಾಡು ಕ್ಷೇತ್ರದ ಧರ್ಮಕರ್ತ ಡಾ| ಜಿ. ಭೀಮೇಶ್ವರ ಜೋಷಿ ಹೇಳಿದರು.
ಗುರುವಾರ ಮೂಡಿಗೆರೆ ತಾಲೂಕು ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ನಡೆದ ಪಟ್ಟಾಭಿಷೇಕೋತ್ಸವ, ಜೀವ-ಭಾವ ಕಾರ್ಯಕ್ರಮದಅಂಗವಾಗಿ ಶ್ರೀಮಾತಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವರಲ್ಲಿ ಹೇಗೆ ರಾಗದ್ವೇಷ ಇಲ್ಲವೋ ಅದರ ಸ್ವರೂಪವೇ ಮಕ್ಕಳಗಾಗಿರುತ್ತಾರೆ. ಮಕ್ಕಳಲ್ಲಿಇರುವ ಪರಿಶುದ್ಧವಾದಸ್ವರೂಪ ನಮ್ಮ ಜೀವನದಲ್ಲಿ ಕೊನೆಯವರೆಗೂ ಅಳವಡಿಸಿ ಕೊಳ್ಳಬೇಕು ಎಂದರು. ಹೆಚ್ಚುವರಿಅಡಿಷನಲ್ ಅಡ್ವಕೇಟ್ ಜನರಲ್ ಅರುಣ್ ಶ್ಯಾಮ್ ಮಾತನಾಡಿ, ಸಮಾಜದ ಅಂಧಕಾರವವನ್ನು ಅನ್ನಪೂರ್ಣೇಶ್ವರಿಯು ಹೋಗಲಾಡಿ ಸಿದರೆ, ಮಕ್ಕಳ ಅಂಧಕಾರವನ್ನು ಶಾರದಾದೇವಿ ಅಂಧರ ವಿಕಾಸ ಕೇಂದ್ರ ಹೋಗಲಾಡಿಸುತ್ತಿದೆ. ಹೊರನಾಡು ಕ್ಷೇತ್ರ ನಂಬಿದ ಭಕ್ತರಿಗೆ ಜೀವಕೊಡುವ ಕೆಲಸವನ್ನು ಮಾಡುತ್ತಿದೆ. ಈ ನಿಟ್ಟಿನಲ್ಲಿ ಕ್ಷೇತ್ರವು ಅಂಧರ ಸಂಸ್ಥೆಗೆ ಪ್ರಶಸ್ತಿಯನ್ನು ನೀಡುತ್ತಿರುವುದು ಅಭಿನಂದಾರ್ಹವಾಗಿದೆ ಎಂದು ಹೇಳಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಮೊಗ್ಗ ಶ್ರೀ ಶಾರದಾದೇವಿ ಅಂಧರ ವಿಕಾಸ ಕೇಂದ್ರದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಈಶ್ವರ ಭಟ್ ಮಾತನಾಡಿ, ಕ್ಷೇತ್ರದ ಕಾರ್ಯಚಟುವಟಿಕೆಯ ಮಧ್ಯೆಯೂ ನಮಗೆ ನೀಡಿದ ಪ್ರಶಸ್ತಿಯಿಂದ ನಮಗೆ ಇನ್ನಷ್ಟು ಕೆಲಸ ಮಾಡಲು ಉತ್ತೇಜನ ನೀಡಿದಂತಾಗಿದೆ. ನಮ್ಮ ಸಂಸ್ಥೆಯು ಅಂಧ ವಿದ್ಯಾರ್ಥಿಗಳಿಗೆ ಉಚಿತ ಆಶ್ರಯದೊಡನೆ ವಿದ್ಯೆ, ಭೋಜನ, ವೈದ್ಯಕೀಯ ಸೌಲಭ್ಯ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಂಚಿತವಾಗಿ ಧರ್ಮಕರ್ತ ಡಾ| ಜಿ. ಬೀಮೇಶ್ವರ ಜೋಷಿಯವರ ಪಟ್ಟಾಭಿಷೇಕವಾಗಿ 30 ವರ್ಷ ತುಂಬಿದ ದಿನದ ಅಂಗವಾಗಿ ದೇವಿಗೆ ಅಭಿಷೇಕ, ಪೂಜೆ, ನವಗ್ರಹ ಹೋಮಗಳು ನಡೆದವು. ಈ ಸಂದರ್ಭದಲ್ಲಿ ಶಾರದಾದೇವಿ ಅಂಧರ ವಿಕಾಸ ಕೇಂದ್ರ ಕಾರ್ಯದರ್ಶಿ ಕೃಷ್ಣ ಪ್ರಸಾದ್, ಹೊರನಾಡಿನ ರಾಜ ಲಕ್ಷ್ಮೀ ಜೋಷಿ, ರಾಮನಾರಾಯಣ ಜೋಷಿ, ರಾಜಗೋಪಾಲ ಜೋಷಿ, ಗಿರಿಜಾ ಶಂಕರ ಜೋಷಿ, ಭವಾನಿ ಶಂಕರ್ ಜೋಷಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ