ಸ್ತ್ರೀಯರಲ್ಲಿ ಉಳಿತಾಯ ಮನೋಭಾವ ಮುಖ್ಯ

ಪ್ಲಾಸ್ಟಿಕ್‌ ದೂರವಿಟ್ಟರೆ ಪರಿಸರಕೆಕ್ಕೆ ದೊಡ್ಡ ಕಾಣಿಕೆ ನೀಡಿದಂತೆಅನಗತ್ಯ ಖರ್ಚು ತಡೆಯಿರಿ

Team Udayavani, Dec 16, 2019, 4:01 PM IST

16-December-19

ಚಿಕ್ಕಮಗಳೂರು: ಮಹಿಳೆಯರು ಉಳಿತಾಯ ಮನೋಭಾವ ಅನುಸರಿಸುವ ಮೂಲಕ ವೃದ್ಧಾಪ್ಯದಲ್ಲಿ ಸ್ವತಂತ್ರವಾಗಿ ಬದುಕಬಹುದು ಎಂದು ಅಂಚೆ ಇಲಾಖೆ ವಿಶ್ರಾಂತ ಸಿಬ್ಬಂದಿ ಬಿ.ಪಿ. ಸರಸ್ವತಿ ಅಭಿಪ್ರಾಯಪಟ್ಟರು.

ಅಕ್ಕಮಹಾದೇವಿ ಮಹಿಳಾ ಸಂಘದ ಜ್ಯೋತಿನಗರ ಶರಣೆ ಆಯ್ದಕ್ಕಿ ಲಕ್ಕಮ್ಮ ತಂಡ ನಗರದ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಹೊಸ್ತಿಲ ಹುಣ್ಣಿಮೆ ಮಾಸಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಂಡೂ ಕಾಣದಂತೆ ಮಹಿಳೆಯರು ಉಳಿತಾಯ ಮಾಡುತ್ತಾರೆ. ಉಳಿತಾಯದ ಮೊತ್ತ ವೃದ್ಧಾಪ್ಯದಲ್ಲಿ ಕೈಗೆ ಬಂದರೆ ಮಕ್ಕಳು-
ಮೊಮ್ಮಕ್ಕಳು-ಸೊಸೆಯಂದಿರ ಹಂಗಿಲ್ಲದೆ ಬದುಕು ಸಾಗಿಸಬಹುದು. ಇಷ್ಟ ಬಂದಂತೆ ಖರ್ಚು ಮಾಡಬಹುದು. ಆದರೆ
ಅತಿಯಾದ ಬಡ್ಡಿ ಆಸೆಗಾಗಿ ಎಲ್ಲೆಲ್ಲೊ ಉಳಿತಾಯದ ಹಣವನ್ನು
ತೊಡಗಿಸಿ ಆ ನಂತರ ನಷ್ಟ ಅನುಭವಿಸುವ ಸಂದರ್ಭಗಳೇ ಇಂದು
ಅಧಿಕ. ಅಂಚೆ ಇಲಾಖೆ ದೀರ್ಘ‌ಕಾಲದಿಂದ ವಿಶ್ವಾರ್ಹತೆ ಹೊಂದಿದೆ.

ಉಳಿತಾಯಕ್ಕೆ ಅಂಚೆ ಇಲಾಖೆ ಅತ್ಯಂತ ಸೂಕ್ತ. ತೊಡಗಿಸಿದ ಹಣಕ್ಕೆ ಎಂದೂ ಮೋಸವಿಲ್ಲ ಎಂದರು. ಭಾರತೀಯ ಅಂಚೆ ಇಲಾಖೆ ಒಂದೂವರೆ ಶತಮಾನಗಳ ಇತಿಹಾಸ ಹೊಂದಿದೆ. ಬ್ರಿಟಿಷರ ಕಾಲದಲ್ಲಿ ಗೌರ್ನರ್‌ ಜನರಲ್‌ ಲಾರ್ಡ್‌ ಡಾಲ್‌ಹೌಸಿ 1854ರಲ್ಲಿ ಇಂಡಿಯನ್‌ ಪೋಸ್ಟಲ್‌ ಆಕ್ಟ್ ಜಾರಿಗೆ ತಂದರು. ಇಡೀ ದೇಶದಲ್ಲಿ ಏಕರೂಪದ ಶುಲ್ಕದೊಂದಿಗೆ ಅಂಚೆ ಇಲಾಖೆ ಕಾರ್ಯ ಆರಂಭಿಸಿತು. ಆರಂಭದಲ್ಲಿ ಸಾಮಾನ್ಯ ಅಂಚೆಪತ್ರಗಳ ಸ್ವೀಕೃತಿ, ರವಾನೆ ಮತ್ತು ಬಟವಾಡೆ ಸೇವೆ ಆರಂಭಿಸಿದ್ದು, ಆನಂತರ ಹಣಕಾಸಿನ ಸ್ವೀಕೃತಿ-ಬಟವಾಡೆ ಸೇರ್ಪಡೆಯಾಯಿತು. ವಿವಿಧ ಮಜಲುಗಳನ್ನು ಕಂಡು ಸೇವೆಗಳು ವಿಸ್ತೃತಗೊಂಡವೆಂದು ಅಂಚೆ ಇಲಾಖೆ ನಡೆದುಬಂದ ಹಾದಿ ತೆರೆದಿಟ್ಟರು. ಅಂಚೆಯೊಂದಿಗೆ ತಂತಿಸೇವೆಯು ನಿರಂತರವಾಗಿ ಮುಂದುವರಿದಿದ್ದು 1980ರಲ್ಲಿ ಅಂಚೆ ಇಲಾಖೆ ಮತ್ತು ಬಿಎಸ್‌ಎನ್‌ಎಲ್‌ ಪ್ರತ್ಯೇಕಗೊಂಡವು.

ಅಂಚೆ ಕಚೇರಿಗಳಲ್ಲಿ ಜೀವ ವಿಮೆ, ಅಂಚೆ ಚೀಟಿ ಸಂಗ್ರಹ, ಅಂತಾರಾಷ್ಟ್ರೀಯ ಹಣದ ವರ್ಗಾವಣೆ ಮತ್ತಿತರ ಹೊಸ ರೀತಿಯ ಸೇವೆಗಳು ಚಾಲ್ತಿಯಲ್ಲಿವೆ. ಕಂಪ್ಯೂಟರೀಕರಣದ ನಂತರ ಉಳಿತಾಯ ಪ್ರೇರೇಪಿಸುವ ಹತ್ತು ಹಲವು ಯೋಜನೆಗಳು ಜನಪ್ರಿಯವಾಗಿವೆ ಎಂದರು.

ಸಂಘದ ಅಧ್ಯಕ್ಷ ಗೌರಮ್ಮ ಬಸವೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ ಪ್ರಾಮಾಣಿಕತೆ, ಬದ್ಧತೆ, ನಿಯಮಪಾಲನೆ ಭಯ ಭಕ್ತಿ ಇರುತ್ತಿತ್ತು. ಇಂದು ಅದೆಲ್ಲ ಕಡಿಮೆಯಾಗಿರುವುದು ಸಮಾಜದ ಅನೇಕ ಕೆಡುಕುಗಳಿಗೆ ಕಾರಣವಾಗಿದೆ. ಒಳ್ಳೆಯ ಬದಲಾವಣೆ ಸಣ್ಣ ಪ್ರಮಾಣದಲ್ಲಾದರೂ ನಮ್ಮಿಂದ ಆರಂಭವಾಗಬೇಕು. ತರಕಾರಿ, ದಿನಸಿ ಮತ್ತಿತರ ನಿತ್ಯ ಬಳಕೆಯ ವಸ್ತುಗಳನ್ನು ಕೈ ಚೀಲದಲ್ಲಿ ಮನೆಗೆ ತರುವ ಮೂಲಕ ಪ್ಲಾಸ್ಟಿಕ್‌ ದೂರವಿಟ್ಟರೆ ಪರಿಸರಕ್ಕೆ ದೊಡ್ಡ ಕಾಣಿಕೆ ನೀಡಿದಂತಾಗುವುದು ಎಂದರು.

ಸಂಘದ ಹಿರಿಯ ಸದಸ್ಯೆ ಬೀಕನಹಳ್ಳಿಯ ಪಾರ್ವತಮ್ಮ ವಿವಿಧ ಆಟೋಟ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ತಂಡದ ಮುಖಂಡೆ ಲತಾ ಪ್ರಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೌಮ್ಯ ವಿಜಯ್‌ ಸ್ವಾಗತಿಸಿದರು. ಸ್ವಾತಿಮಧು ನಿರೂಪಿಸಿದರು. ಲತಾಶೇಖರ್‌ ಪರಿಚಯಿಸಿದರು. ಶೋಭಾ ವಂದಿಸಿದರು. ಗಿರಿಜಮ್ಮ ಮತ್ತು ಪುಷ್ಪಾ ಪ್ರಾರ್ಥಿಸಿ, ಶಿಲ್ಪಾ ರಘು ಹಾಗೂ ಸುಕನ್ಯಾ ತಂಡ ನಾಡಗೀತೆ ಹಾಡಿದರು.

ಉಪಾಧ್ಯಕ್ಷೆ ಕಾತ್ಯಾಯಿನಿ ನಿಚಂದ್ರಶೇಖರ್‌, ಖಜಾಂಚಿ ಯಮುನಾ ಸಿ.ಶೆಟ್ಟಿ, ಕಾರ್ಯದರ್ಶಿ ರೇಖಾ ಉಮಾಶಂಕರ್‌, ಸಹ ಕಾರ್ಯದರ್ಶಿ ಭಾರತಿ ಶಿವರುದ್ರಪ್ಪ, ಸಂಘಟನಾ ಕಾರ್ಯದರ್ಶಿ ನಾಗಮಣಿ ಕುಮಾರ್‌ ಇದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಲತಾಪ್ರಸನ್ನ ಅವರ ನೇತೃತ್ವದಲ್ಲಿ ನಡೆದವು.

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.