ಸೋರುತಿಹುದು ಸರ್ಕಾರಿ ಕಟ್ಟಡ!
Team Udayavani, Sep 26, 2019, 7:58 PM IST
ಚೇತನ್
ಚಿಕ್ಕನಾಯಕನಹಳ್ಳಿ: ಕಳೆದ ಮೂರು ದಿನ ಗಳಿಂದ ಸುರಿಯುತ್ತಿರುವ ಉತ್ತರೆ ಮಳೆಗೆ ಸರ್ಕಾರಿ ಕಟ್ಟಡಗಳ ಪರಿಸ್ಥಿತಿ ಯಾವ ರೀತಿ ಹದಗೆಟ್ಟಿದೆ ಎಂಬುದು ಬಟಾಬಯಲಾಗಿದೆ.
ಹೌದು… ಪಟ್ಟಣದ ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು, ವಿಲೇಜ್ ಅಕೌಂಟೆಂಟ್ ಕಚೇರಿ ಹಾಗೂ ತಾಲೂಕು ಕಚೇರಿ ಉತ್ತರೆ ಮಳೆ ರಭಸಕ್ಕೆ ಸೋರುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಸಂಕಷ್ಟ ಪಡುವಂತಾಗಿದೆ.
ತಾಲೂಕು ಕಚೇರಿಯಲ್ಲಿನ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ, ಆಹಾರ ಶಾಖೆ ಕಚೇರಿಗಳ ಛಾವಣಿ ಸಿಮೆಂಟ್ ಚೂರುಗಳು ಬೀಳುತ್ತಿವೆ. ಹಲವು ದಾಖಲೆಗಳನ್ನು ರಕ್ಷಿಸಿಡುವುದೇ ಸವಾಲಾ ಗಿದೆ. ಸಿಬ್ಬಂದಿ ಛಾವಣಿ ಬೀಳುವ ಆತಂಕದಲ್ಲಿ ದಿನದೂಡುತ್ತಿದ್ದಾರೆ.
ಬೀಳುವ ಹಂತ ತಲುಪಿದೆ: ಸಾವಿರಾರು ರೈತರ ಕೃಷಿ ಭೂಮಿಗಳ ದಾಖಲೆ ಹೊಂದಿರುವ ಭೂದಾಖಲೆಗಳ ಕಚೇರಿಯಂತೂ ಬೀಳುವ ಹಂತ ತಲುಪಿದ್ದು, ಕೈ ಬರಹಗಳ ಪಹಣಿಗಳು, ಭೂಮಿ ವಿಸ್ತೀರ್ಣಗಳು, ತಿದ್ದುಪಡಿ ದಾಖಲೆ ಗಳು ಸೇರಿ ಕಂದಾಯ ಇಲಾಖೆಗೆ ಒದಗಿಸುವ ಹತ್ತಾರು ದಾಖಲೆ ನಾಶವಾಗುವ ಭೀತಿ ಎದುರಾಗಿದೆ. ಪೊಲೀಸ್ ಠಾಣೆ ಪಕ್ಕದಲ್ಲಿರುವ ಹಳೇ ಕೋರ್ಟ್ ಕಟ್ಟಡದಲ್ಲಿನ ಕಸಬಾ, ಹಂದಿನಕೆರೆ, ಕಂದಿಕೆರೆ ಸೇರಿ ಗ್ರಾಮ ಲೆಕ್ಕಿಗರ ಕಚೇರಿಗಳೂ ಸೋರುತ್ತಿದ್ದು, ರೈತರ ಖಾತೆ ವರ್ಗವಣೆ ದಾಖಲೆ, ಸರ್ಕಾರ ಯೋಜನೆಗಳ ಫಲಾನು ಭವಿಗಳ ದಾಖಲೆಗಳು ನಷ್ಟವಾಗುವ ಸಂಭವ ವಿದೆ.
ಕೆಲ ಕಚೇರಿಗಳ ಗೋಡೆಗಳು ಬೀಳುವ ಹಂತ ತಲುಪಿದೆ. 1972ರಲ್ಲಿ ಪ್ರಾರಂಭವಾಗಿರುವ ಪಟ್ಟಣದ
ಸರ್ಕಾರಿ ಸ್ವಾತಂತ್ರ ಪದವಿ ಪೂರ್ವ ಕಾಲೇಜಿನ ಬಹುತೇಕ ಕೊಠಡಿಗಳು ಸೋರುತ್ತಿದ್ದು, ಗೋಡೆಗಳು ಹಾಗೂ ಛಾವಣಿ ಸಂಪೂರ್ಣ ಶಿಥಲಗೊಂಡಿವೆ. ಸೋಮವಾರ ಹಾಗೂ ಮಂಗಳವಾರ ಬಂದ ಬಾರೀ ಮಳೆಗೆ ಕಾಲೇಜಿನ ಆವರಣ ಕೆರೆಯಂತಾಗಿತ್ತು.
ಕೊಠಡಿಗಳು ಸೋರುತ್ತಿರುವುದರಿಂದ ವಿದ್ಯಾರ್ಥಿಗಳು ಪಾಠ ಕೇಳದ ಸ್ಥಿತಿ ನಿರ್ಮಾಣ ವಾಗಿದೆ. ತಾಲೂಕಿನ ಮತಿಘಟ್ಟ ಕ್ಲಸ್ಟರ್ನ ಕೆಲ ಶಾಲೆಗಳೂ ಇದಕ್ಕೆ ಹೊರತಾಗಿಲ್ಲ. ಅನಾಹುತ ಸಂಭವಿಸುವ ಮುನ್ನ ತಾಲೂಕು ಕಚೇರಿ, ಸರ್ಕಾರಿ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜು ದುರಸ್ತಿಗೆ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಗಮನ ಕೊಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ