ಗಣೇಶ ಹಬ್ಬ-ಮೊಹರಂ ಶಾಂತಿಯಿಂದ ಆಚರಿಸಿ
ಪಿಒಪಿ ಗಣಪತಿ ನಿಷಿದ್ಧ •ಶಾಂತಿ ಸಮಿತಿ ಸಭೆಯಲ್ಲಿ ಎಸ್ಪಿ ಹರೀಶ್ ಪಾಂಡೆ ಸ್ಪಷ್ಟನೆ
Team Udayavani, Aug 31, 2019, 3:19 PM IST
ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಎಸ್ಪಿ ಹರೀಶ್ ಪಾಂಡೆ ಮಾತನಾಡಿದರು.
ಚಿಕ್ಕಮಗಳೂರು: ಗಣೇಶ ಚತುರ್ಥಿ ಮತ್ತು ಮೊಹರಂ ಒಂದೇ ತಿಂಗಳಲ್ಲಿ ಬಂದಿವೆ. ಎರಡೂ ಸಮುದಾಯದ ಜನ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದೆ ಶಾಂತಿ, ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕೆಂದು ಎಸ್ಪಿ ಹರೀಶ್ ಪಾಂಡೆ ಹೇಳಿದರು.
ನಗರದ ಕುವೆಂಪು ಕಲಾಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸಾರ್ವಜನಿಕ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಪರಿಸರಕ್ಕೆ ಧಕ್ಕೆ ಎಂಬ ಕಾರಣಕ್ಕೆ ಪಿಒಪಿ ಗಣಪತಿಯನ್ನು ನಿಷೇಧಿಸಲಾಗಿದೆ. ಪೆಂಡಾಲ್ ಬಳಿ ವಿದ್ಯುತ್ ಸಂಪರ್ಕ ನೀಡುವಾಗ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಗಣಪತಿ ಮುಂದೆ ಹಣತೆ, ಊದುಬತ್ತಿ ಇಡುವುದರಿಂದ ಬೆಂಕಿ ಹತ್ತುವ ಸಾಧ್ಯತೆಯಿದ್ದು, ಸ್ಥಳದಲ್ಲಿ ಒಂದು ಅಗ್ನಿ ನಂದಕ ಇರಿಸುವುದು ಒಳಿತು. ದೊಡ್ಡ ಪೆಂಡಾಲ್ನವರು ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 1772 ಪೆಂಡಾಲ್ಗಳಲ್ಲಿ ಗಣಪತಿ ಪೂಜಿಸಲಿದ್ದು, ಎಲ್ಲ ಕಡೆ ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ಹಾಕಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸ್ವಯಂ ಸೇವಕರನ್ನು ನೇಮಿಸಿಕೊಂಡು ಶಾಂತಿ- ಸೌಹಾರ್ದತೆ ಕಾಪಾಡಿಕೊಳ್ಳಬೇಕು. ಗಣಪತಿ ವಿಸರ್ಜಿಸುವಾಗ ಸುರಕ್ಷತಾ ಕ್ರಮ ಕೈಗೊಳ್ಳಬೇಕು. ನಗರ, ಪಟ್ಟಣ ವ್ಯಾಪ್ತಿಯ ಪ್ರಮುಖ ಕೆರೆಯಲ್ಲಿ ಬೋಟ್, ಕ್ರೇನ್, ಲೈಫ್ ಜಾಕೆಟ್ ಹಾಗೂ ಈಜುಗಾರರನ್ನು ನಿಯೋಜನೆ ಮಾಡುತ್ತೇವೆ ಎಂದರು.
ಡಿಜೆ ಬಳಸುವಂತಿಲ್ಲ. 2 ಸ್ಪೀಕರ್ ಬಾಕ್ಸ್ಗೆ ಮಾತ್ರ ಅವಕಾಶವಿದೆ. ದೇವರ ಮುಂದೆ ಕುಡಿದು ಕುಣಿಯುವುದನ್ನು ನಿಯಂತ್ರಿಸಿ, ಹಬ್ಬದ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಪ್ರಚೋದನಕಾರಿ ಸಂದೇಶಗಳಿಗೆ ಮಹತ್ವ ನೀಡಬಾರದು. ಅವುಗಳನ್ನು ಡಿಲೀಟ್ ಮಾಡಿ. ಪ್ರಮುಖವಾಗಿ ಪ್ರಸಾದ ಅಥವಾ ಲಘು ಉಪಹಾರ ತಯಾರಿಸುವಾಗಿ ಬಹಳ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು. ತಿಂಡಿ ಅಥವಾ ಪ್ರಸಾದ ತಯಾರಿಸುವಾಗ ಸ್ವತಃ ಸ್ವಯಂ ಸೇವಕರೆ ಖುದ್ದು ನಿಂತು ಜವಾಬ್ದಾರಿ ನಿರ್ವಹಿಸಬೇಕು ಎಂದು ಹೇಳಿದರು
ಡಿವೈಎಸ್ಪಿ ಬಸಪ್ಪ ಅಂಗಡಿ ಮಾತನಾಡಿ, ಗಣಪತಿ ಉತ್ಸವ, ಮೆರವಣಿಗೆ ಸಂದರ್ಭ ಸಾರ್ವಜನಿಕ ಸಂಚಾರಕ್ಕೆ ತೊಂದೆಯಾಗಬಾರದು. ತಕರಾರು ಇರುವ ಜಾಗದಲ್ಲಿ ಗಣಪತಿ ಇಡಲೇಬಾರದು. ಖಾಲಿ ನಿವೇಶನಗಳಲ್ಲಿ ಗಣಪತಿ ಇಡುವಾಗ ನಿವೇಶನ ಮಾಲೀಕರ ಅನುಮತಿ ಕಡ್ಡಾಯ ಹಾಗೂ ಒತ್ತಾಯಪೂರ್ವಕ ದೇಣಿಗೆ ಸಂಗ್ರಹ ಮಾಡಬಾರದು. ಗಣಪತಿ ವಿಸರ್ಜಿಸುವ ದಿನಾಂಕ ತಿಳಿಸಿದರೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ವೃತ್ತ ನಿರೀಕ್ಷಕ ಸಲೀಂ ಹಾಜರಿದ್ದರು.
ಅನುಮತಿಗೆ ಸಿಂಗಲ್ ವಿಂಡೋ ಮಾಡಿದ್ದು ಸ್ವಾಗತಾರ್ಹ ಎಂದು ಬಿಜೆಪಿ ಮುಖಂಡ ಬಿ.ರಾಜಪ್ಪ ಹೇಳಿದರು. ಆಯಾ ಪೊಲೀಸ್ ಠಾಣೆ ಸರಹದ್ದಿನಲ್ಲಿಯೇ ಅನುಮತಿ ನೀಡಲು ವ್ಯವಸ್ಥೆ ಮಾಡಬೇಕು ಎಂದು ಆಲ್ದೂರಿನ ಸುರೇಶ್ ಒತ್ತಾಯಿಸಿದರು. ವಾರವಿಡೀ ಗಣಪತಿ ಉತ್ವಕ್ಕೆ ಶ್ರಮಪಟ್ಟಿರುತ್ತೇವೆ. ವಿಸರ್ಜನೆ ದಿನ ಯಾರೋ ಹೊರಗಡೆಯವರು ಬಂದು ಗಲಾಟೆ ಮಾಡಿದರೆ ವ್ಯವಸ್ಥಾಪಕರಾದ ನಮ್ಮನ್ನು ಕರೆದೊಯ್ದು ಲಾಕಪ್ನಲ್ಲಿ ಕೂರಿಸುತ್ತೀರಿ. ಇದ್ಯಾವ ನ್ಯಾಯ ಎಂದು ಶ್ರೀಲೇಖಾ ಟಾಕೀಸ್ ಬಡಾವಣೆಯ ವಿಜಯ್ ಪ್ರಶ್ನಿಸಿದರು. ಕಳೆದ ವರ್ಷ ಗಲಾಟೆ ಆಗಿದ್ದ ತರೀಕೆರೆಗೆ ಈ ಬಾರಿ ಹೆಚ್ಚಿನ ಭದ್ರತೆ ನೀಡಬೇಕು ಎಂದು ತುಡುಕೂರು ಮಂಜು ಆಗ್ರಹಿಸಿದರು.
ಎಲ್ಲ ಹಿಂದೂ ಬಾಂಧವರಿಗೆ ಗಣೇಶ ಚತುರ್ಥಿ ಶುಭಾಶಯಗಳು. ಶಾಂತಿ- ಸೌಹಾರ್ದತೆಯಿಂದ ಹಬ್ಬ ಆಚರಿಸೋಣ ಎಂದು ಯೂಸಫ್ ಹಾಜಿ ಹೇಳಿದರು. ತರೀಕೆರೆ, ಮೂಡಿಗೆರೆ, ಕಡೂರು ಹಾಗೂ ಶೃಂಗೇರಿ ಭಾಗದಿಂದ ಗಣಪತಿ ಉತ್ಸವ ಸಮಿತಿಯ ಪದಾಧಿಕಾರಿಗಳು ಸಭೆಯಲ್ಲಿ ಭಾಗಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ
Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
MUST WATCH
ಹೊಸ ಸೇರ್ಪಡೆ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ