ಮೊದಲ ಬಾರಿ ಬಸ್ ಬಂದ ಖುಷಿ!
•ಇನ್ನಿಲ್ಲ ವಿದ್ಯಾರ್ಥಿಗಳಿಗೆ ನಡೆಯೋ ಸಂಕಷ್ಟ•ಸಮಸ್ಯೆಗೆ ಸ್ಪಂದಿಸಿದ ಸಂಸದರು-ಶಾಸಕರು
Team Udayavani, Jul 13, 2019, 10:11 AM IST
ಚಿಂಚೋಳಿ: ಗಡಿಭಾಗದ ಜವಾಹರ ನಗರ ತಾಂಡಾಕ್ಕೆ ಮೊದಲ ಬಾರಿ ಬಸ್ ಆಗಮಿಸಿದ ಖುಷಿಯಲ್ಲಿ ಜನತೆ ಹಾಗೂ ವಿದ್ಯಾರ್ಥಿಗಳು.
ಚಿಂಚೋಳಿ: ಕುಂಚಾವರಂ ಗಡಿಭಾಗದ ಜವಾಹರ ನಗರ ತಾಂಡಾಕ್ಕೆ ಮೊದಲ ಸಲ ಸಾರಿಗೆ ಬಸ್ ಸಂಚಾರ ಪ್ರಾರಂಭಿಸಿರುವುದರಿಂದ ತಾಂಡಾದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ತಾಂಡಾದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಅನೇಕ ವರ್ಷಗಳಿಂದ ನಮ್ಮ ಜವಾಹರ ನಗರ ತಾಂಡಾಕ್ಕೆ ಬಸ್ಸಿನ ಸಂಚಾರ ಇಲ್ಲದ ಕಾರಣ ಚಿಂಚೋಳಿ, ಕುಂಚಾವರಂ, ಶಾದೀಪುರದಲ್ಲಿ ವಿದ್ಯಾಭ್ಯಾಸಕ್ಕಾಗಿ ಹೋಗಿ ಬರಲು ಬಸ್ಸು ಇಲ್ಲದ ಕಾರಣ ವಿದ್ಯಾರ್ಥಿಗಳು ಕಾಲು ದಾರಿಯಲ್ಲಿಯೇ ನಡೆದುಕೊಂಡು ಶಾಲೆಗೆ ಹೋಗುವ ಪರಿಸ್ಥಿತಿ ಇತ್ತು.
ತಾಂಡಾಕ್ಕೆ ಬಸ್ಸಿನ ಸಂಚಾರ ಪ್ರಾರಂಭಿಸುವಂತೆ ಸಂಸದ ಡಾ| ಉಮೇಶ ಜಾಧವ, ಶಾಸಕ ಡಾ| ಅವಿನಾಶ ಜಾಧವ ಅವರಿಗೆ ಅನೇಕ ಸಲ ಮನವಿ ಸಲ್ಲಿಸಿದ್ದರಿಂದ ಚಿಂಚೋಳಿ ಸಾರಿಗೆ ಘಟಕದಿಂದ ಮುಂಜಾನೆ ಮತ್ತು ಸಂಜೆ ಬಸ್ಸಿನ ಸಂಚಾರವನ್ನು ಶುಕ್ರವಾರ ಪ್ರಾರಂಭಿಸಲಾಗಿದೆ. ಇದರಿಂದ ನಮಗೆ ಬಹಳ ಸಂತಸವಾಗಿದೆ. ನಮ್ಮ ಸಮಸ್ಯೆ ಅರಿತು ಬಸ್ಸಿನ ಸಂಚಾರ ಪ್ರಾರಂಭಿಸಲು ಹೆಚ್ಚಿನ ಆಸಕ್ತಿ ವಹಿಸಿದ ಡಿಪೋ ಮ್ಯಾನೇಜರ್ ವಿಜಯಕುಮಾರ ಹೊಸಮನಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.
ತಾಂಡಾಕ್ಕೆ ಮೊದಲ ಸಲ ಸಾರಿಗೆ ಬಸ್ ಸಂಚಾರ ಪ್ರಾರಂಭ ಆಗಿರುವುದರಿಂದ ಬಸ್ ಚಾಲಕನಿಗೆ ಮತ್ತು ನಿರ್ವಾಹಕನಿಗೆ ತಾಂಡಾದ ಜನರು ಶಾಲು, ಹೂಮಾಲೆ ಹಾಕಿ ಅಭಿನಂದಿಸಿದರು. ನಂತರ ಬಸ್ಸಿಗೆ ತಳಿರು-ತೋರಣಗಳಿಂದ ಸಿಂಗರಿಸಿ ಸ್ವಾಗತಿಸಲಾಯಿ ತು. ವಿದ್ಯಾರ್ಥಿ ಮುಖಂಡ ವಿಜಯಕುಮಾರ ಜಾಧವ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?
Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!
Election; ಡಿ.ಕೆ.ಶಿವಕುಮಾರ್, ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ದೂರು