ಗುರುವಿನ ಪಾದಪೂಜೆಗಿದೆ ವಿಶೇಷ ಸ್ಥಾನ
ಪ್ರತಿಯೊಬ್ಬರಿಗೂ ಇರಲಿ ಗುರುವಿನ ಮೇಲೆ ಭಕ್ತಿ•ಮಹಾತ್ಮರ ಕೃಪೆಯಿಂದ ಉತ್ತಮ ಮಳೆಯಾಗಲಿ
Team Udayavani, Jul 17, 2019, 2:54 PM IST
ಚಿಂಚೋಳಿ: ಹಾರಕೂಡ ಚನ್ನಬಸವೇಶ್ವರ ಮಠದಲ್ಲಿ ಪೂಜ್ಯ ಡಾ| ಚನ್ನವೀರ ಶಿವಾಚಾರ್ಯರ ಪಾದಪೂಜೆ ಮಾಡಲಾಯಿತು.
ಚಿಂಚೋಳಿ: ಗುರುವಿನ ಪಾದಪೂಜೆ ವೀರಶೈವದಲ್ಲಿ ವಿಶೇಷ ಸ್ಥಾನವಿದೆ. ಪಾದ ಸ್ಪರ್ಶ ಮಾಡಿದರೆ ಮುಕ್ತಿ ಸಿಗಲಿದೆ. ಪ್ರತಿಯೊಬ್ಬರಿಗೂ ಗುರುವಿನ ಮೇಲೆ ಅಪಾರ ಭಕ್ತಿ ಇರಬೇಕು ಎಂದು ಚಿಂಚೋಳಿ ಹಾರಕೂಡ ಹಿರೇಮಠದ ಸಂಸ್ಥಾನ ಪೀಠಾಧಿಪತಿ ಡಾ| ಚನ್ನವೀರ ಶಿವಾಚಾರ್ಯರರು ಹೇಳಿದರು.
ಪಟ್ಟಣದ ಹಾರಕೂಡ ಚನ್ನಬಸವೇಶ್ವರ ಮಠದಲ್ಲಿ ಮಂಗಳವಾರ ಗುರುಪೂರ್ಣಿಮೆ ನಿಮಿತ್ತ ನಡೆದ ಪಾದಪೂಜೆ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡಿದರು.
ಗುರು ಮತ್ತು ಪಾದಪೂಜೆ ಅತಿ ಶ್ರೇಷ್ಠವಾದುದು. ಕೆಲವು ಕಡೆ ಮಳೆ ಇದೆ. ಇನ್ನು ಕೆಲವು ಪ್ರದೇಶದಲ್ಲಿ ಮಳೆ ಇಲ್ಲ. ಪುಣ್ಯಪುರುಷರು, ಮಹಾತ್ಮರ ಶರಣ ಕೃಪೆಯಿಂದಾಗಿ ಇನ್ನು ಮುಂದೆ ಚೆನ್ನಾಗಿ ಬರಲಿದೆ. ಹಾರಕೂಡ ಚನ್ನಬಸವೇಶ್ವರ ಆಶೀರ್ವಾದ ಸದಾ ಭಕ್ತರ ಮೇಲಿದೆ ಎಂದು ಹೇಳಿದರು.
ಹಾರಕೂಡ ಮಠದಲ್ಲಿ ಬೆಳಗಿನಿಂದಲೇ ಚನ್ನಬಸವ ಶಿವಯೋಗಿಗಳ ಗದ್ದುಗೆ ವಿಶೇಷ ಪೂಜೆ, ಅಭಿಷೇಕ ಮತ್ತು ಬಿಲ್ವ ಪತ್ರಿ, ಹೂವುಗಳ ಪುಷ್ಪಾರ್ಚನೆ ಮಾಡಲಾಯಿತು.
ಭಕ್ತರ ಜಯಘೋಷಗಳ ಮಧ್ಯೆ ಹಾರಕೂಡ ಪೀಠಾಧಿ ಪತಿಗಳ ಪಾದಪೂಜೆ ಮಾಡಲಾಯಿತು. ಜಿಪಂ ಸದಸ್ಯ ಗೌತಮ ಪಾಟೀಲ, ಚನ್ನಬಸಪ್ಪ ನಾವದಗಿ, ಶಾಮರಾವ ಸೀಳಿನ, ನಾಗರಾಜ ಕಲಬುರಗಿ, ಸಂತೋಷ ಗಡಂತಿ, ರಾಜಶೇಖರ ಮಜ್ಜಗಿ, ನಾಗರಾಜ ಮಲಕೂಡ, ಅಪ್ಪಣ್ಣ, ಕಾತಿಕೇಯ ಸ್ವಾಮಿ, ಮಲ್ಲಿಕಾರ್ಜುನ ಶಾಸ್ತ್ರಿಗಳು, ನವಲಿಂಗ ಪಾಟೀಲ ಇದ್ದರು.
ಬೀದರ, ಕಲಬುರಗಿ, ಬಸವಕಲ್ಯಾಣ, ಸೇಡಂ, ಹುಮನಾಬಾದ, ಚಿತ್ತಾಪುರ, ಭಾಲ್ಕಿ ಇನ್ನತರ ನಗರ ಪ್ರದೇಶಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ