ಮೈದುಂಬಿದ ಎತ್ತಪೋತಾ
ಬೆಟ್ಟಗುಡ್ಡಗಳ ನಡುವೆ ಜುಳುಜುಳು ನಿನಾದ•50 ಅಡಿ ಎತ್ತರದಿಂದ ಧುಮ್ಮುಕ್ಕುತ್ತಿದೆ
Team Udayavani, Aug 5, 2019, 10:00 AM IST
ಚಿಂಚೋಳಿ: ಗೋಪು ನಾಯಕ ತಾಂಡಾ ಬಳಿ 'ಎತ್ತಪೋತಾ' ಜಲಧಾರೆ ಮೈದುಂಬಿ ಹರಿಯುತ್ತಿದೆ
ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶದಲ್ಲಿ ಇರುವ ‘ಎತ್ತಪೋತಾ’ ಜಲಧಾರೆ ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.
ತಾಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಜಿಟಿಜಿಟಿ ಮಳೆ ಸುರಿಯುತ್ತಿದೆ. ಅಲ್ಲದೇ ತೆಲಂಗಾಣದಲ್ಲಿ ಮಳೆ ಆಗುತ್ತಿರುವುದರಿಂದ ಗೋಪು ನಾಯಕ ಮತ್ತು ಸಂಗಾಪುರ ತಾಂಡಾಗಳ ಮಧ್ಯೆ ಹರಿಯುವ ಎತ್ತಪೋತಾ ಜಲಧಾರೆಗೆ ಹೆಚ್ಚಿನ ನೀರು ಹರಿದು ಬರುತ್ತಿದೆ.
ಕಳೆದ ಮೂರು ದಿನಗಳಿಂದ ತೆಲಂಗಾಣ ರಾಜ್ಯದ ಜಹಿರಾಬಾದ, ಕೋಹಿರ, ತಾಂಡೂರ, ಕುಂಚಾವರಂ, ಚಿಂಚೋಳಿ ತಾಲೂಕಿನ ಪ್ರವಾಸಿಗರು ಬೆಟ್ಟ ಗುಡ್ಡಗಳ ಮಧ್ಯೆ ಜುಳುಜುಳು ಎಂದು ಮೈದುಂಬಿ ಹರಿಯುವ ಜಲಧಾರೆ ನೋಡಿ ಸಂತಸ ಪಡುತ್ತಿದ್ದಾರೆ.
ಕುಂಚಾವರಂ ಅರಣ್ಯ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆ ಆಗುತ್ತಿರುವುದರಿಂದ ವನ್ಯಜೀವಿಧಾಮದಲ್ಲಿ ಇರುವ ಸಣ್ಣಪುಟ್ಟ ನಾಲೆಗಳಲ್ಲಿ ನೀರು ಹರಿದು ಬಂದು, ಆ ನೀರು ಎತ್ತಪೋತಾಕ್ಕೆ ಸೇರಿಕೊಳ್ಳುತ್ತಿದೆ. ಈ ನೀರು 50 ಅಡಿ ಎತ್ತರದಿಂದ ಧುಮ್ಮುಕ್ಕಿ ಹರಿಯುತ್ತಿದೆ.
ಕಳೆದ ಮೂರು ವರ್ಷಗಳಿಂದ ತಾಲೂಕಿನಲ್ಲಿ ಮಳೆ ಅಭಾವದಿಂದಾಗಿ ಎತ್ತಪೋತಾ ಜಲಧಾರೆ ಬತ್ತಿ ಹೋಗಿ ಜೀವಕಳೆ ಕಳೆದುಕೊಂಡಿತ್ತು. ಈಗ ಮಳೆ ಸುರಿಯುತ್ತಿದ್ದು, ಬೆಟ್ಟಗುಡ್ಡಗಳಿಂದ ಬಳಕುತ್ತಾ ಹರಿದು ಬರುವ ಮಳೆಯ ಕೆಂಪು ನೀರು ಎತ್ತಪೋತಾ ಜಲಧಾರೆಗೆ ಬರುತ್ತಿದೆ.
ಜನಜೀವನ ಅಸ್ತವ್ಯಸ್ತ
ಚಿಂಚೋಳಿ ತಾಲೂಕಿನಲ್ಲಿ ಮಳೆ ಮತ್ತೆ ಮುಂದುವರಿದ್ದು ರವಿವಾರ ಸಂಜೆ ವ್ಯಾಪಕ ಮಳೆ ಸುರಿದಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಪಟ್ಟಣದಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಸಂತೆಗೆ ಬಂದ ತರಕಾರಿ ವ್ಯಾಪಾರಿಗಳು ಪರದಾಡಿದರು. ತಾಲೂಕಿನಲ್ಲಿ ಮುಂಜಾನೆ ಸೂರ್ಯ ದರ್ಶನವಾಯಿತು. ನಂತರ ಮಧ್ಯಾಹ್ನ ಸಮಯದಲ್ಲಿ ಮತ್ತೇ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಚಿಂಚೋಳಿ 20 ಮಿ.ಮೀ, ಕುಂಚಾವರಂ 20.4 ಮಿ.ಮೀ, ಸುಲೇಪೇಟ 25.2 ಮಿ.ಮೀ, ನಿಡಗುಂದಾ 14 ಮಿ.ಮೀ, ಕೋಡ್ಲಿ 32 ಮಿ.ಮೀ, ಐನಾಪುರ 15.4 ಮಿ.ಮೀ, ಚಿಮ್ಮನಚೋಡ 20 ಮಿ.ಮೀ ಮಳೆ ಆಗಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿವೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಅನೀಲಕುಮಾರ ರಾಠೊಡ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ