ತ್ಯಾಜ್ಯದಿಂದ ತಯಾರಿಸಿದ ಇಟ್ಟಿಗೆಗೆ ಅವಾರ್ಡ್‌!

ಹೊಸ ಪ್ರಯೋಗ ಯಶಸ್ವಿ ತ್ಯಾಜ್ಯ ಸಮಸ್ಯೆಗೆ ಸಿಗಲಿದೆಯೇ ಪರಿಹಾರ ದೊಡ್ಡ ಮಟ್ಟದಲ್ಲಿ ತಯಾರಿಗೆ ಚಿಂತನೆ

Team Udayavani, Sep 21, 2019, 7:36 PM IST

21-Sepctember–22

„ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ:
ಹಳೆಯ ಮನೆಗಳನ್ನು ಕೆಡವಿದ ನಂತರ ಬರುವ ತ್ಯಾಜ್ಯದಿಂದ ತಯಾರಿಸಿದ ಇಟ್ಟಿಗೆಗೆ ಅವಾರ್ಡ್‌ ಸಿಕ್ಕಿದೆ. ಜಿಲ್ಲಾ ನಗರಾಭಿವೃದ್ಧಿ ಕೋಶದಿಂದ ಇಂಥದ್ದೊಂದು ಪ್ರಯೋಗ ನಡೆದಿದ್ದು, ರಾಜ್ಯದ ನಗರಾಭಿವೃದ್ಧಿ ಇಲಾಖೆ ಬೆಸ್ಟ್‌ ಪ್ರಾಕ್ಟಿಸಸ್‌ ಅವಾರ್ಡ್‌ ನೀಡಿ ಪ್ರೋತ್ಸಾಹಿಸಿದೆ. ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಾಜಶೇಖರ್‌ ಅವರು, ಗುರುವಾರ ಬೆಂಗಳೂರಿನ ಚೌಡಯ್ಯ ಮೆಮೊರಿಯಲ್‌ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಹಳೆಯ ಮನೆಗಳ ತ್ಯಾಜ್ಯವನ್ನು ಸೋಸಿ ಅದರಿಂದ ಸುಮಾರು 45 ಇಟ್ಟಿಗೆಗಳನ್ನು ತಯಾರಿಸಲಾಗಿದೆ. ನಂತರ ವ್ಯಾಸ ಅಸೋಸಿಯೇಷನ್‌ ಎಂಬ ಸಂಸ್ಥೆಯಿಂದ ಇದರ
ಗುಣಮಟ್ಟ ಪರಿಶೀಲಿಸಲಾಗಿದೆ. ಈ ವೇಳೆ ಇಟ್ಟಿಗೆಗಳು ಬಳಕೆಗೆ ಯೋಗ್ಯ ಎಂದು ಪ್ರಮಾಣ
ಪತ್ರ ನೀಡಿದ್ದು, ಇದನ್ನು ನಗರಾಭಿವೃದ್ಧಿ ಇಲಾಖೆಗೆ ಸಲ್ಲಿಸಿದ್ದು, ಇದೊಂದು ಹೊಸ ಪ್ರಯೋಗ, ಒಳ್ಳೆಯ ಪದ್ಧತಿ ಎಂದು ಗುರುತಿಸಿ ಅವಾರ್ಡ್‌ ನೀಡಲಾಗಿದೆ. ಈ ಮೂಲಕ ನಗರಸಭೆ ಹಾಗೂ ಜಿಲ್ಲಾಡಳಿತಕ್ಕೆ ತಲೆನೋವಾಗಿದ್ದ ಡೆಬ್ರಿಸ್‌ ಸಮಸ್ಯೆಗೆ ಕೊನೆಗೂ ಮುಕ್ತಿ ಸಿಗುವ ಲಕ್ಷಣ ಕಾಣಿಸುತ್ತಿದೆ.

ನಗರವನ್ನು ಪ್ರವೇಶಿಸುವ ರಸ್ತೆಗಳ ಆಸುಪಾಸು, ಖಾಲಿ ನಿವೇಶನ, ಜನ ಸಂಚಾರ ವಿರಳವಾಗಿರುವ ಪ್ರದೇಶಗಳಲ್ಲಿ ರಾತ್ರೋ ರಾತ್ರಿ ತಂದು ಸುರಿಯುತ್ತಿದ್ದ ಹಳೆಯ ಮನೆಗ ತ್ಯಾಜ್ಯ
ನಗರಸಭೆಗೆ ಸವಾಲಾಗಿತ್ತು. ಹೊಳಲ್ಕೆರೆ ರಸ್ತೆ, ಚಂದ್ರವಳ್ಳಿ ಬಳಿ ಹಾಗೂ ಎಸ್‌ಜೆಎಂ ಕಾಲೇಜುವರೆಗೆ ದೊಡ್ಡ ಮಟ್ಟದಲ್ಲಿ ಹಳೆಯ ಮನೆಗಳನ್ನು ಕೆಡವಿದ ತ್ಯಾಜ್ಯವನ್ನು ಸಾವಿರಾರು ಲೋಡ್‌ ತಂದು ಸುರಿಯಲಾಗಿತ್ತು. ಇದೇ ವಿಚಾರವಾಗಿ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ನಗರಸಭೆ ಅಧಿ ಕಾರಿಗಳನ್ನು ಪ್ರಗತಿ ಪರಿಶೀಲನಾ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಈಗ ಈ ಹೊಸ ಪ್ರಯೋಗದಿಂದ ತ್ಯಾಜ್ಯ ಸಮಸ್ಯೆಗೆ ಸ್ವಲ್ಪ ಮುಕ್ತಿ ಸಿಗಬಹುದು.

ದೊಡ್ಡ ಮಟ್ಟದಲ್ಲಿ ತಯಾರಿಗೆ ಚಿಂತನೆ: ತ್ಯಾಜ್ಯದಿಂದ ಇಟ್ಟಿಗೆ ತಯಾರಿ ಮಾಡುವ ಪ್ರಯೋಗ ಯಶಸ್ವಿಯಾಗಿದ್ದು, ಈಗ ಅದನ್ನು ದೊಡ್ಡ ಮಟ್ಟದಲ್ಲಿ ಅನುಷ್ಠಾನಕ್ಕೆ ತರುವ ಪ್ರಯತ್ನಕ್ಕೆ ನಗರಾಭಿವೃದ್ಧಿ ಕೋಶ ಚಿಂತನೆ ನಡೆಸಿದೆ.

ನಗರದಲ್ಲಿ ಕೆಡವಿದ ಮನೆಗಳ ತ್ಯಾಜ್ಯ ಸುರಿಯಲು ಸರಿಯಾದ ಜಾಗವೂ ಇಲ್ಲ. ಈಗ
ಒಂದು ಹೆಲ್ಪ್ಲೈನ್‌ ಆರಂಭಿಸಿ, ಅದರ ಮೂಲಕ ಮನೆ ಕೆಡವಿದವರು ನಗರಸಭೆಗೆ ಫೋನ್‌ ಮಾಡಿ ಹೇಳಿದರೆ ಸಾಕು, ನಗರಸಭೆಯ ವಾಹನ ನಿಮ್ಮ ಮನೆ ಮುಂದೆ ಬಂದು ನಿಲ್ಲುತ್ತದೆ. ತ್ಯಾಜ್ಯವನ್ನು ತುಂಬಿಕೊಂಡು ಇಟ್ಟಿಗೆ ತಯಾರಿಸುವ ಸೈಟ್‌ಗೆ ರವಾನೆ ಮಾಡಲಾಗುತ್ತದೆ. ಇದಕ್ಕಾಗಿ ಇಂತಿಷ್ಟು ಶುಲ್ಕವನ್ನೂ ನಿಗದಿ  ಮಾಡಲಾಗುವುದು. ಇದರಿಂದ ತ್ಯಾಜ್ಯವನ್ನು ರಸ್ತೆ ಬದಿಗೆ ಸುರಿದು ವ್ಯರ್ಥ ಮಾಡುವ ಸಮಸ್ಯೆಗೆ ಪರಿಹಾರದ ಜತೆಗೆ ನಗರಸಭೆಗೆ ಆದಾಯವೂ ಬರುತ್ತದೆ. ಜತೆಗೆ ಇಟ್ಟಿಗೆಗಳ ಗುಣಮಟ್ಟದ ಮೇಲೆ ಜನರಿಗೆ ನಂಬಿಕೆ ಬಂದರೆ ಮತ್ತೂಂದು ಉದ್ದಿಮೆಗೆ ಅವಕಾಶವೂ ಸಿಕ್ಕಂತಾಗುತ್ತದೆ.

ಟಾಪ್ ನ್ಯೂಸ್

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.