ಬರ ಹೊಡೆತದಲ್ಲೂ ಸಹಕಾರದ ಛಾಪು

ಡಿಸಿಸಿ ಬ್ಯಾಂಕ್‌ಗೆ ರಾಜ್ಯಮಟ್ಟದ ಪ್ರಶಸ್ತಿ ಗೌರವವಾರ್ಷಿಕ ವಹಿವಾಟು 500 ಕೋಟಿಗೂ ಹೆಚ್ಚು

Team Udayavani, Nov 15, 2019, 3:13 PM IST

15-November-14

„ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ:
ಬಿಡದೆ ಕಾಡುವ ಬರದ ಅಸಹಕಾರ ನಡುವೆಯೂ ಜಿಲ್ಲೆಯಲ್ಲಿ ಸಹಕಾರ ಸಂಘಗಳು ತಮ್ಮದೇ ಆದ ಛಾಪು ಮೂಡಿಸುತ್ತಿವೆ. ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ಸಹಕಾರ ಚಾಲ್ತಿಯಲ್ಲಿದೆ. ಒಂದು ಕಾಲಕ್ಕೆ ಮಿಂಚಿದ ಕೆಲ ವರ್ಗದ ಸಹಕಾರ ಸಂಘಗಳು ಕ್ರಮೇಣ ಕಾಲದ ಹೊಡೆತಕ್ಕೆ ಸಿಲುಕಿ ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರೆ, ಕೆಲ ಸಹಕಾರ ಸಂಘಗಳು ಸಾಧನೆ ಹಾದಿಯಲ್ಲಿ ಸಾಗುತ್ತಿವೆ.

ರಾಜ್ಯಮಟ್ಟದಲ್ಲಿ ಮೊದಲ ಸ್ಥಾನ ಪಡೆದ ಡಿಸಿಸಿ ಬ್ಯಾಂಕ್‌ನ ಆಧುನೀಕರಣ, ದಿನೇ ದಿನೇ ಜನರನ್ನು ತಲುಪುತ್ತಿರುವುದು ಸಹಕಾರ ಕ್ಷೇತ್ರಕ್ಕೆ ಭವಿಷ್ಯವಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಹಾಗಂತೆ ಈ ಕ್ಷೇತ್ರದಲ್ಲಿ ಎಲ್ಲವೂ ಸರಿಯಿದೆ ಎಂದರ್ಥವಲ್ಲ. ನೂರಾರು ಸಹಕಾರ ಸಂಘಗಳು ನಷ್ಟದ ಹಾದಿಯಲ್ಲಿವೆ. ಕೆಲವು ಮುಚ್ಚುವ ಸ್ಥಿತಿಯಲ್ಲಿವೆ.

ಬದಲಾದ ಕಾಲಮಾನಕ್ಕೆ ಸರಿಯಾಗಿ ಹೊಂದಿಕೊಳ್ಳಲು ಈ ಕ್ಷಣಕ್ಕೂ ಸಹಕಾರ ಸಂಘಗಳು ಹೆಣಗಾಡುತ್ತಿವೆ. ಬೆರಳೆಣಿಕೆ ಸಹಕಾರ ಸಂಘಗಳು ಮಾತ್ರ ಗಣಿಕೀಕರಣಗೊಂಡಿವೆ. ಸರ್ಕಾರದಿಂದ ಸಂಘಗಳಿಗೆ ಸಂಬಂ ಧಿಸಿದ ಮೇಲ್‌ ಬಂದರೆ ಅದನ್ನು ನೋಡುವಷ್ಟು, ಪ್ರಿಂಟ್‌ ಮಾಡಿಕೊಳ್ಳುವ ವ್ಯವಸ್ಥೆಯೂ ಇಲ್ಲದಂತಹ ಸಂಘಗಳು ಇರುವುದು ನಷ್ಟದ ಹಾದಿಗೆ ಕಾರಣವಾಗಿರಬಹುದು.

ಸಾವಿರ ಸಮೀಪ ಇವೆ: ಜಿಲ್ಲೆಯಲ್ಲಿ ಇದುವರೆಗೆ 989 ಸಹಕಾರ ಸಂಘಗಳು ಸ್ಥಾಪನೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, 3.25ಲಕ್ಷ ಸದಸ್ಯರಿದ್ದಾರೆ. ಇದರಲ್ಲಿ 753 ಸಂಘಗಳು ಚಾಲ್ತಿಯಲ್ಲಿದ್ದು, 50 ಸ್ಥಗಿತಗೊಂಡಿವೆ. 186 ಸಂಘಗಳು ಸಮಾಪನೆ ಹಂತದಲ್ಲಿವೆ. ಸಹಕಾರ ಸಂಘಗಳ ನೋಂದಣಿ ಮಾತ್ರ ಆನ್‌ ಲೈನ್‌ನಲ್ಲಿದೆ. ಉಳಿದಂತೆ ಗಣಕೀಕರಣ ಇನ್ನಷ್ಟೇ ಆಗಬೇಕಷ್ಟೆ. ಚಾಲ್ತಿಯಲ್ಲಿರುವ 753 ಸಹಕಾರ ಸಂಘಗಳಲ್ಲಿ 325 ಲಾಭದಲ್ಲಿವೆ.

635 ಸಂಸ್ಥೆಗಳು ನಷ್ಟದಲ್ಲಿವೆ. 29 ಸಂಸ್ಥೆಗಳು ಲಾಭ, ನಷ್ಟ ಎರಡೂ ಅಲ್ಲದ ಸ್ಥಿತಿಯಲ್ಲಿವೆ. ಈ ಎಲ್ಲಾ ಸಹಕಾರ ಸಂಘಗಳ ಒಟ್ಟಾರೆ ವಾರ್ಷಿಕ ವಹಿವಾಟು 500 ಕೋಟಿಗೂ ಹೆಚ್ಚು. “ಸಿ’ ಗ್ರೇಡ್‌ ಸಂಘಗಳೇ ಹೆಚ್ಚು: ಸಂಘಗಳ ಆಡಿಟ್‌ ವೇಳೆ ಜಿಲ್ಲೆಯಾದ್ಯಂತ ಯಾವ್ಯಾವ ಸಹಕಾರ ಸಂಘಗಳು ಯಾವ ಸ್ಥಿತಿಯಲ್ಲಿವೆ ಎಂದು ಲೆಕ್ಕ ಪರಿಶೋಧನಾ ವರ್ಗೀಕರಣ ಮಾಡಲಾಗಿದೆ.

ಇದರಲ್ಲಿ “ಸಿ’ ಮತ್ತು “ಡಿ’ ಗ್ರೇಡ್‌ ಸಂಘಗಳೇ ಹೆಚ್ಚಾಗಿವೆ. “ಎ’ ಗ್ರೇಡ್‌ ನಲ್ಲಿ 6, “ಬಿ’ ಗ್ರೇಡ್‌ನ‌ಲ್ಲಿ 30 ಸಂಘಗಳಿದ್ದರೆ “ಸಿ’ ಗ್ರೇಡ್‌ನ‌ಲ್ಲಿ 687 ಸಂಘಗಳಿವೆ. “ಡಿ’ ಗ್ರೇಡ್‌ನ‌ಲ್ಲಿ 237 ಸಂಘಗಳಿರುವ ಬಗ್ಗೆ ಜಿಲ್ಲಾ ಸಹಕಾರ ಯೂನಿಯನ್‌ ಅಂಕಿ-ಅಂಶ ಹೇಳುತ್ತದೆ.

ರಾಜ್ಯಮಟ್ಟದಲ್ಲಿರೋದು ಒಂದೇ ಸಹಕಾರ ಸಂಘ: ಜಿಲ್ಲೆಯಿಂದ ರಾಜ್ಯಮಟ್ಟವನ್ನು ಪ್ರತಿನಿಧಿಸುವ ಸಂಘ ಕೆಒಎಫ್‌ ಮಾತ್ರ. ಉಳಿದಂತೆ ರಾಜ್ಯದ ಒಳಗೆ ಜಿಲ್ಲೆಯನ್ನು ಮೀರಿದ 8 ಸಂಘಗಳು, ಜಿಲ್ಲಾಮಟ್ಟದಲ್ಲಿ 20, ತಾಲೂಕು ಮೀರಿದ, ಜಿಲ್ಲೆಯ ಕೆಳಗಿರುವ 9, ತಾಲೂಕು ಮಟ್ಟದಲ್ಲಿ 111 ಹಾಗೂ ತಾಲೂಕು ಮಟ್ಟಕ್ಕಿಂತ ಕಡಿಮೆ ಇರುವ 840 ಸಹಕಾರ ಸಂಘಗಳಿವೆ.

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

12

Theft; ಕೊಲ್ಲೂರು: ಮಹಿಳೆಯ ಚಿನ್ನ, ನಗದು ಕಳವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

Gadag; ತೋಂಟದಾರ್ಯ ಮಠದ ಅದ್ದೂರಿ ಮಹಾರಥೋತ್ಸವ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.