ಮೆಕ್ಕೆ ಜೋಳಕ್ಕೆ ಸೈನಿಕನ ಬಳಿಕ ತೆನೆಕೊರಕನ ಕಾಟ!

ಆಳೆತ್ತರ ಬೆಳೆದಿರುವುದರಿಂದ ಔಷಧ ಸಿಂಪರಣೆ ಕಷ್ಟ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಆಘಾತ ಶೇ.40ರಷ್ಟು ಬೆಳೆ ನಾಶ ಭೀತಿ

Team Udayavani, Oct 12, 2019, 11:26 AM IST

11-October-27

ತಿಪ್ಪೇಸ್ವಾಮಿ ನಾಕೀಕೆರೆ
ಚಿತ್ರದುರ್ಗ: ಸೈನಿಕ ಹುಳು ಕಾಟ ಸ್ಪಲ್ಪಮಟ್ಟಿಗೆ ಕಡಿಮೆಯಾಯಿತೆಂದು ನಿಟ್ಟುಸಿರು ಬಿಟ್ಟಿದ್ದ ಮೆಕ್ಕೆಜೋಳ ಬೆಳೆಗಾರರಿಗೆ ಈಗ ಹೊಸ ತಲೆನೋವು ಶುರುವಾಗಿದೆ. ಮೆಕ್ಕೆಜೋಳದ ತೆನೆಗೆ ತೆನೆ ಕೊರಕ ಹುಳು ಕಾಟ ಶುರುವಾಗಿದ್ದು, ಶೇ.40ರಷ್ಟು ಬೆಳೆ ನಾಶವಾಗುವ ಭೀತಿ ಎದುರಾಗಿದೆ.

ಹಚ್ಚ ಹಸಿರಿನಿಂದ ಕಂಗೊಳಿಸುತ್ತ ಸಮೃದ್ಧವಾಗಿ ಬೆಳೆದು ನಿಂತ ಮೆಕ್ಕೆಜೋಳದ ತೆನೆಗೆ ಹುಳುಗಳು ಶತ್ರುವಾಗಿ ಕಾಡುತ್ತಿವೆ. ಇದರಿಂದ ಅರ್ಧ ತೆನೆಯೇ ಖಾಲಿಯಾಗುವ ಭಯ ಕಾಡುತ್ತಿದೆ. ನೆಲದಿಂದ 2ರಿಂದ 3 ಅಡಿ ಅಂತರದಲ್ಲಿದ್ದಾಗ ಸುಳಿಯೊಳಗೆ ಹುಳು ಸೇರಿಕೊಂಡು ಇಡೀ ಜೋಳದ ತೆನೆಯನ್ನೇ ಖಾಲಿ ಮಾಡುತ್ತಿದ್ದವು. ಈ ಹುಳುಗಳಿಗೆ ಕೆಲವರು ಸೈನಿಕ ಹುಳು ಅಂದರೆ, ಮತ್ತೆ ಕೆಲವರು ಲದ್ದಿ ಹುಳು ಎಂದು ಹೆಸರಿಟ್ಟಿದ್ದರು. ಈ ಹುಳುವಿನ ಕಾಟಕ್ಕೆ ಸೋಪು, ಶಾಂಪೂ, ಕೃಷಿ ಇಲಾಖೆ ಅಧಿಕಾರಿಗಳು ಹೇಳಿದ ಔಷಧ ಸೇರಿದಂತೆ ಇನ್ನಿಲ್ಲದ ಪ್ರಯೋಗ ಮಾಡಿ ಜೋಳವನ್ನು ಕಾಪಾಡಿಕೊಂಡ ರೈತರಿಗೆ ಈಗ ತೆನೆ ಕೊರೆಯುವ ಹುಳುವಿನ ಬಾಧೆ ಶುರುವಾಗಿದೆ. ಜೋಳ ಆಳೆತ್ತರ ಬೆಳೆದು ನಿಂತಿರುವುದರಿಂದ ಅದರೊಳಗೆ ಔಷಧ ಸಿಂಪರಣೆ ಕಷ್ಟ. ಒಂದೊಮ್ಮೆ ಮಾಡಿದರೂ ಜೋಳದ ಒಳಗೆ ಉಸಿರು ಕಟ್ಟಿದಂತಾಗುತ್ತದೆ.

ಸುಳಿಯಲ್ಲಿದ್ದು ಇಡೀ ಗಿಡವನ್ನೇ ನಾಶ ಮಾಡುತ್ತಿದ್ದ ಹುಳುವಿನ ಸಮಸ್ಯೆ ಹತೋಟಿಗೆ ಬಂದ ನಂತರ ಅಳಿದುಳಿದ ಹುಳುವಿನ ಸಂತಾನ ಈಗ ತೆನೆಯ ಮೇಲೆ ದಾಳಿ ಮಾಡುತ್ತಿದೆ. ಮೆಕ್ಕೆಜೋಳದ ತೆನೆ ಸುತ್ತಲೂ ಗರಿಗಳಿಂದ ಮುಚ್ಚಿಕೊಂಡು ಅತ್ಯಂತ ಸುರಕ್ಷಿತವಾಗಿರುತ್ತದೆ.

ಮೇಲ್ನೋಟಕ್ಕೆ ಜೋಳ ಚೆನ್ನಾಗಿದೆ ಎನ್ನುವಂತೆ ಕಂಡರೂ ತೆನೆಯ ತುದಿ ನಿಧಾನವಾಗಿ ಬಾಡಿ ಕೊಳೆತು ಹೋಗಿ ಒಣಗುವಂತೆ ಕಾಣಿಸತೊಡಗುತ್ತದೆ. ಈ ಹಂತದಲ್ಲಿ ತೆನೆಯನ್ನು ಬಿಚ್ಚಿ ನೋಡಿದರೆ ಸಣ್ಣ ಸಣ್ಣ ಹುಳುಗಳ ರಾಶಿಯೇ ಕಾಣಿಸುತ್ತಿದೆ ಎನ್ನುತ್ತಾರೆ ರೈತರು.

ಹಗಲಿರುಳು ಬೇಕು ಕಾವಲು: ಒಮ್ಮೆ ಜೋಳ ನಾಟಿ ಮಾಡಿದರೆ ಬೀಜ ಮೊಳಕೆಯಾಗಿ ಒಂದು ಗೇಣು ಬೆಳೆಯುವವರೆಗೆ ಹಗಲಿರುಳು ಕಾಯಬೇಕು. ರಾತ್ರಿ ಹಂದಿಗಳು ಬೀಜ ಹೆಕ್ಕಿದರೆ, ಹಗಲಿನಲ್ಲಿ ಪಕ್ಷಿಗಳು ಈ ಕೆಲಸ ಮಾಡುತ್ತವೆ. ಆಳುದ್ದ ಬೆಳೆದು ತೆನೆ ಶುರುವಾಗುತ್ತದೆ ಎನ್ನುವಾಗ ಜೋಳದ ದಂಟು ಹಾಗೂ ಹಾಲುಗಾಳು ತಿನ್ನಲು ಮತ್ತೆ ಹಂದಿ ಹಾಗೂ ಪಕ್ಷಿಗಳು ರೈತರಿಗೆ ಕಾಟ ಕೊಡುತ್ತವೆ.

ಇದಿಷ್ಟನ್ನೂ ರೈತರು ನಾಲ್ಕು ತಿಂಗಳ ಕಾಲ ಶ್ರದ್ಧೆಯಿಂದ ಮಾಡುತ್ತಾರೆ. ಆದರೆ ಈ ನಡುವೆ, ತೆನೆಕೊರಕ ಹುಳು ಕಾಣಿಸಿಕೊಂಡಿರುವುದು ಹಾಕಿದ ಬಂಡವಾಳದ ಮೇಲೆ ಅನುಮಾನ ಬರುವಂತೆ ಮಾಡಿದೆ. ಹಗಲು ಹೊತ್ತಿನಲ್ಲಿ ಸರಿಯಾದ ಬಿಸಿಲು ಬಿದ್ದರೆ ಈ ವೇಳೆ ಹುಳುಗಳು ತೆನೆಯಿಂದ ಹೊರಗೆ ಬರುತ್ತವೆ. ಇದೇ ಸಂದರ್ಭದಲ್ಲಿ ಬಿರು ಮಳೆಯಾದರೆ ಹುಳು ಸಾಯಬಹುದು ಎನ್ನುವುದು ರೈತರ ಅನುಭವ.

ಟಾಪ್ ನ್ಯೂಸ್

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.