ಶ್ರೀರಾಮುಲುಗೆ ಮುತ್ತಿಗೆ, ಕಾರಿಗೆ ಕಲ್ಲು
Team Udayavani, Apr 14, 2018, 6:00 AM IST
ನಾಯಕನಹಟ್ಟಿ(ಚಿತ್ರದುರ್ಗ): ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಶುಕ್ರವಾರ ಇಲ್ಲಿನ ತಿಪ್ಪೇರುದ್ರಸ್ವಾಮಿ ದೇವಾಲಯಕ್ಕೆ ಬಂದಿದ್ದ ಶ್ರೀರಾಮುಲುಗೆ ಟಿಕೆಟ್ ವಂಚಿತ ಎಸ್.ತಿಪ್ಪೇಸ್ವಾಮಿ ಅವರ 350ಕ್ಕೂ ಹೆಚ್ಚು ಬೆಂಬಲಿಗರು ಮುತ್ತಿಗೆ ಹಾಕಲು ಯತ್ನಿಸಿ, ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು.
50ಕ್ಕೂ ಹೆಚ್ಚು ಮಹಿಳೆಯರು ಕೈಯಲ್ಲಿ ಪೊರಕೆ ಹಿಡಿದು “ಶ್ರೀರಾಮುಲು ವಾಪಸ್ ಹೋಗಿ’ ಎಂಬ ಘೋಷಣೆ ಕೂಗಿದರು. ಈ ವೇಳೆ, ಪರಿಸ್ಥಿತಿಯನ್ನು ತಹಬದಿಗೆ ತರಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದರು.
ಶ್ರೀರಾಮುಲು ದೇಗುಲದ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆ ತಿಪ್ಪೇಸ್ವಾಮಿ ಬೆಂಬಲಿಗರು ಘೋಷಣೆ ಕೂಗುತ್ತಾ, ಕಾರಿನ ಮುಂದೆ ನುಗ್ಗಿದರು. ಪೊಲೀಸರು ಅವರನ್ನು ಚದುರಿಸಿದರು. ನಂತರ, ಶ್ರೀರಾಮುಲು ದೇವಾಲಯದಿಂದ ಹೊರಬಂದಾಗಲೂ ತಿಪ್ಪೇಸ್ವಾಮಿ ಬೆಂಬಲಿಗರು ಮತ್ತೆ ದಾಂಧಲೆ ಆರಂಭಿಸಿ, ಕಾರು ಹತ್ತಲು ಅವಕಾಶ ನೀಡದೇ ಅಡ್ಡಿಪಡಿಸಿದರು. ಕೆಲವರು ಚಪ್ಪಲಿಗಳನ್ನೂ ಎಸೆದರು. ಪೊಲೀಸರು ಮತ್ತೆ ಲಾಠಿ ಪ್ರಹಾರ ನಡೆಸಿದರು.
ಪ್ರತಿಭಟನಾಕಾರರು ಇಟ್ಟಿಗೆ, ಕಲ್ಲು ಹಾಗೂ ಖಾಲಿ ಬಾಟಲಿಗಳನ್ನು ಎಸೆದಿದ್ದರಿಂದ ಶ್ರೀರಾಮುಲು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲ ಸೇರಿ ಐದು ಕಾರುಗಳ ಗಾಜುಗಳು ಪುಡಿ ಪುಡಿಯಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ