ಎಪಿಎಂಸಿ ಪುನರಾರಂಭಕ್ಕೆ ಎಸಿ ಸೂಚನೆ
Team Udayavani, Apr 8, 2020, 4:05 PM IST
ಚಳ್ಳಕೆರೆ: ನಗರದ ಎಪಿಎಂಸಿ ಆವರಣದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಮಿಕ ಮುಖಂಡರು.
ಚಳ್ಳಕೆರೆ: ಕಳೆದ ಮಾರ್ಚ್ 24ರಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವ್ಯಾಪ್ತಿಯ ಎಲ್ಲ ದಲ್ಲಾಲಿ ಮಂಡಿಗಳು ಹಾಗೂ ವಿವಿಧ ವಾಣಿಜ್ಯೋದ್ಯಮ ವ್ಯವಹಾರಗಳು ಸ್ಥಗಿತಗೊಂಡಿದ್ದು, ಮತ್ತೆ ಎಲ್ಲವನ್ನು ಪುನರಾರಂಭ ಮಾಡುವಂತೆ ಮಾರುಕಟ್ಟೆ ಸಮಿತಿ ಆಡಳಿತಾ ಧಿಕಾರಿ, ಉಪವಿಭಾಗಾಧಿಕಾರಿ ಪ್ರಸನ್ನ ಸೂಚಿಸಿದರು.
ಇಲ್ಲಿನ ಮಾರುಕಟ್ಟೆ ಕಚೇರಿ ಆವರಣದಲ್ಲಿ ಮಂಗಳವಾರ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು, ದಲ್ಲಾಲರ ಸಂಘದ ಮುಖಂಡರು, ಛೇಂಬರ್ ಆಫ್ ಕಾರ್ಮಸ್ನ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾರುಕಟ್ಟೆ ಪುನರಾಂಭವಾದಲ್ಲಿ ಮಾತ್ರ ಆದಾಯ ಹೆಚ್ಚಳವಾಗುತ್ತದೆಯಲ್ಲದೆ, ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಆಹಾರ ಉತ್ಪಾದನೆ ಹಾಗೂ ಸಾಗಟಕ್ಕೆ ಇದು ಉತ್ತಮ ಪ್ರಯತ್ನವಾಗಿದ್ದು, ಎಲ್ಲಾ ನಿಯಮಗಳನ್ನು ಅಳವಡಿಸಿಕೊಂಡು ಕಾರ್ಮಿಕರು, ದಲ್ಲಾಲರ ಸಂಘ ಮತ್ತು ಖರೀದಿದಾರರು ಮಾರುಕಟ್ಟೆ ಆರ್ಥಿಕ ಹಿತದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ದಲ್ಲಾಲರ ಸಂಘದ ಅಧ್ಯಕ್ಷ ಕೆ.ಎಂ. ಅರವಿಂದಕುಮಾರ್ ಮಾತನಾಡಿ, ಕಳೆದ ಮೂರು ತಿಂಗಳುಗಳಿಂದ ಮಾರುಕಟ್ಟೆಯಿಂದ ವ್ಯಾಪಾರವಾದ ಯಾವುದೇ ದಾಸ್ತಾನುವಿನ ಹಣ ಇನ್ನೂ ಬಂದಿಲ್ಲ. ಹಲವಾರು ವರ್ತಕರು ಬದಲಾದ ಕಾಲ ಪರಿಸ್ಥಿತಿಯಲ್ಲಿ ಆರ್ಥಿಕ ಮುಗ್ಗಟ್ಟಿನಿಂದ ಪರಿತಪಿಸುತ್ತಿದ್ದಾರೆ. ಮಿಲ್ ಹಾಗೂ ಮಾರುಕಟ್ಟೆಯ ಬೇರೆ ರಾಜ್ಯದಿಂದಲೂ ಸಹ ಖರೀದಿದಾರರು ಆಗಮಿಸಿದ್ದು, ಇದು ಪರೋಕ್ಷವಾಗಿ ಕೊರೋನಾ ವೈರಾಣು ನಿಯಂತ್ರಣ ಪ್ರಯತ್ನಕ್ಕೆ ಹಿನ್ನೆಡೆಯಾಗುವುದರಿಂದ ಸದ್ಯದ ಸ್ಥಿತಿಯಲ್ಲಿ ವ್ಯವಹಾರಗಳನ್ನು ಮುಂದುವರೆಸುವುದು ಸಾಧ್ಯವಾಗದು ಎಂದರು.
ಛೇಂಬರ್ ಆಫ್ ಕಾರ್ಮಸ್ನ ನಿರ್ದೇಶಕ ವಂದನಾ ರಾಜು, ಎಐಟಿಯುಸಿ ಹಮಾಲರ ಸಂಘದ ತಾಲೂಕು ಅಧ್ಯಕ್ಷ ಕೆ.ವಿ.ವೀರಭದ್ರಪ್ಪ ಮಾತನಾಡಿದರು. ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಡಿವೈಎಸ್ಪಿ ಎಸ್.ರೋಷನ್ ಜಮೀರ್, ಎಪಿಎಂಸಿ ಉಪನಿರ್ದೇಶಕ ಕೆ.ಶ್ರೀನಿವಾಸ್ ರೆಡ್ಡಿ, ಕಾರ್ಮಿಕ ಅಧಿಕಾರಿ ಶಫೀವುಲ್ಲಾ, ಆರೋಗ್ಯ ಅಧಿಕಾರಿ ಎನ್.ಪ್ರೇಮಸುಧಾ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಬಸವರಾಜು, ಪೌರಾಯುಕ್ತ ಪಿ.ಪಾಲಯ್ಯ, ವೃತ್ತ ನಿರೀಕ್ಷಕ ಈ.ಆನಂದ, ಮಾರುಕಟ್ಟೆ ಅಧಿಕಾರಿ ಮಹಮ್ಮದ್ ಗೌಸ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ