ಶುಶ್ರೂಷಕಿಯರ ಪಾತ್ರ ಮಹತ್ವದ್ದು: ಡಾ| ಬಸವರಾಜು
Team Udayavani, May 13, 2020, 2:34 PM IST
ಚಳ್ಳಕೆರೆ: ಆಸ್ಪತ್ರೆಗೆ ಬರುವ ರೋಗಿಗಳು ಶೀಘ್ರ ಗುಣಮುಖರಾಗಲು ಕೇವಲ ವೈದ್ಯರು ನೀಡಿದ ಔಷಧ ಮತ್ತು ಚಿಕಿತ್ಸೆಯಷ್ಟೇ ಸಾಧ್ಯವಾಗದು. ಅವರ ಯೋಗ್ಯಕ್ಷೇಮವನ್ನು ವಿಚಾರಿಸಿ ಮಾರ್ಗದರ್ಶನ ಮಾಡುವ ಶುಶ್ರೂಷಕಿಯರ ಪಾತ್ರವೂ ಪ್ರಮುಖವಾದುದು. ಆದ್ದರಿಂದ ಪ್ರತಿಯೊಬ್ಬರೂ ಅವರನ್ನು ಗೌರವಿಸಬೇಕೆಂದು ಸರ್ಕಾರಿ ಆಸ್ಪತ್ರೆ ಆಡಳಿತಾಧಿಕಾರಿ ಡಾ| ಬಸವರಾಜು ಹೇಳಿದರು.
ಮಂಗಳವಾರ ಆಸ್ಪತ್ರೆಯ ಸಭಾಂಗಣದಲ್ಲಿ ಕೇಕ್ ಕತ್ತರಿಸುವ ಮೂಲಕ ಶುಶ್ರೂಷಕಿಯರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಶುಶ್ರೂಷಕಿಯರು ಪ್ರಾಮಾಣಿಕತೆಯಿಂದ ರೋಗಿಗಳ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ವೈದ್ಯರು ಕೇವಲ ರೋಗಿಗಳಿಗೆ ಅವರ ರೋಗದ ಬಗ್ಗೆ ಮಾಹಿತಿ ನೀಡಿ ಔಷಧ ನೀಡುತ್ತಾರೆ. ಆದರೆ ಶುಶ್ರೂಷಕಿಯರು ಹಾಗಲ್ಲ. ಔಷಧ ಸೇವಿಸುವ ಸಮಯ ಮತ್ತು ವಿಧಾನವನ್ನು ತಿಳಿಸುವುದಲ್ಲದೆ ಎಚ್ಚರಿಕೆಯಿಂದ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಾರೆ ಎಂದು ಶ್ಲಾಘಿಸಿದರು. ಮಕ್ಕಳ ತಜ್ಞ ಡಾ| ಜಿ. ತಿಪ್ಪೇಸ್ವಾಮಿ ಮಾತನಾಡಿ, ಶುಶ್ರೂಷಕಿಯರು ಆರೋಗ್ಯ ಇಲಾಖೆಯ ಅವಿಭಾಜ್ಯ ಅಂಗ. ಕೇವಲ ರೋಗಿಗಳ ಯೋಗಕ್ಷೇಮವಲ್ಲದೆ ವೈದ್ಯರ ಮಾರ್ಗದರ್ಶನವನ್ನೂ ಪಾಲಿಸಬೇಕಾಗುತ್ತದೆ. ಎಂತಹ ಸಂದರ್ಭದಲ್ಲೂ ವಿಚಲಿತರಾಗದೆ ರೋಗಿಗಳಿಗೆ ಧೈರ್ಯ ತುಂಬುತ್ತಾರೆ ಎಂದರು.
ಡಾ| ಬಿ.ಆರ್. ಮಂಜಪ್ಪ, ಸಾಯಿ ನಾಗಜ್ಯೋತಿ, ಓಂಕಾರಪ್ಪ, ವೆಂಕಟೇಶ್, ಹಿರಿಯ ಶುಶ್ರೂಷಕಿಯರಾದ ನಿರ್ಮಲಾ, ಪುಟ್ಟರಂಗಮ್ಮ, ಸುಮಿತ್ರಮ್ಮ, ರಂಗಮ್ಮ, ಹೊನ್ನಾವತಿ, ಸರಸ್ವತಿ, ಪ್ರೇಮಕುಮಾರಿ, ಶಶಿಕಲಾ, ಗೀತಮ್ಮ, ತಿಪ್ಪೇಸ್ವಾಮಿ, ಕಿರಣ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ