ಬೆಳೆಗಾರರ ಕಣ್ಣಲ್ಲಿ ನೀರು ತರಿಸಿದ ಹುರುಳಿಕಾಯಿ


Team Udayavani, Jun 10, 2021, 10:43 PM IST

10-18

ಭರಮಸಾಗರ: ಕಳಪೆ ಹುರುಳಿಕಾಯಿ ಬಿತ್ತನೆ ಬೀಜ ಬಿತ್ತಿದ್ದರಿಂದ ಸುಮಾರು ಮೂರು ಎಕರೆಯಲ್ಲಿ ಬೆಳೆದ ಫಸಲಿನಲ್ಲಿ ಬರೀ ಬಳ್ಳಿಯಷ್ಟೇ ಬೆಳೆದಿತ್ತು. ಉದರಿಂದ ಬೇಸತ್ತ ರೈತರಿಬ್ಬರು ಇಡೀ ಹೊಲವನ್ನು ನಾಶಪಡಿಸಿರುವ ಘಟನೆ ಅಳಗವಾಡಿ ಗ್ರಾಮದಲ್ಲಿ ನಡೆದಿದೆ.

ರೈತರಾದ ನಾಗರಾಜ್‌ ಎರಡು ಎಕರೆ ಹಾಗೂ ಕರಿಬಸಪ್ಪ ಒಂದೂಕಾಲು ಎಕರೆ ನೀರಾವರಿ ಜಮೀನಿನಲ್ಲಿ ಹುರುಳಿಕಾಯಿ ಬಿತ್ತನ ಮಾಡಲಾ ಗಿತ್ತು. ಅಶೋಕ ಸೀಡ್ಸ್‌ ಕಂಪನಿಗೆ ಸೇರಿದ ಹುರುಳಿಕಾಯಿ ಬೀಜಗಳನ್ನು ಸಿರಿಗೆರೆ ಗ್ರಾಮದ ಖಾಸಗಿ ಆಗ್ರೋ ಸೀಡ್ಸ್‌ ಒಂದರಲ್ಲಿ ಮಾರ್ಚ್‌ ತಿಂಗಳಲ್ಲಿ ತಲಾ 25 ಕೆಜಿ ತೂಕದ ಆರು ಬ್ಯಾಗ್‌, 15 ಕೆಜಿ ತೂಕದ 4 ಬ್ಯಾಗ್‌ ಬಿತ್ತನೆ ಬೀಜ ಖರೀದಿಸಲಾಗಿತ್ತು. ಪ್ರತಿ ವರ್ಷ ಹುರುಳಿಕಾಯಿ ಬೆಳೆದು ಅನುಭವ ಇದ್ದ ಈ ಇಬ್ಬರು ರೈತರು ಹೆಚ್ಚಿನ ಶ್ರಮ ಹಾಕಿದ್ದರು.

ಮಾರುಕಟ್ಟೆ ನಾಡಿಮಿಡಿತ ಅರಿತು ಸರಿಯಾಗಿ ಬಸವ ಜಯಂತಿ ವೇಳೆಗೆ ಕಾಯಿ ಕಟಾವಿಗೆ ಬರುವಂತೆ ತಯಾರಿಯನ್ನೂ ನಡೆಸಿದ್ದರು. ಎರಡೂ ಕಾಲು ತಿಂಗಳಲ್ಲಿ ಬಂದು ಹೋಗುವ ಈ ಬೆಳೆಗೆ ಒಂದು ಎಕರೆಗೆ ಬಿತ್ತನೆ ಬೀಜ, ಕಳೆ, ಔಷ ಧ ಸಿಂಪಡಣೆ, ಇತರೆ ಖರ್ಚುಗಳು ಸೇರಿ 15 ಸಾವಿರ ರೂ. ಖರ್ಚು ಮಾಡಲಾಗಿದೆ. ಇತರೆ ಕೆಲಸಗಳನ್ನು ನಿರ್ವಹಿಸಿರುವ ಖರ್ಚು ಸೇರಿದರೆ 20 ಸಾವಿರ ರೂ. ದಾಟುತ್ತದೆ. ಎಕರೆಗೆ 25 ರಿಂದ 30 ಕ್ವಿಂಟಲ್‌ ಕಾಯಿ ಇಳುವರಿ ಸಿಗಬೇಕು.

ಇಷ್ಟೆಲ್ಲಾ ಪ್ರಯತ್ನದ ಬಳಿಕ ಲಕ್ಷ ಲಕ್ಷ ಆದಾಯ ಗಳಿಸಬೇಕಾದ ರೈತರಿಗೆ ಹುರುಳಿಕಾಯಿ ಬೆಳೆ ಕಣ್ಣಲ್ಲಿ ನೀರು ತರಿಸಿದೆ. ಮಾರುಕಟ್ಟೆಯಲ್ಲಿ ಕೆಜಿ ಕಾಯಿಗೆ 100 ರಿಂದ 112 ರೂ. ದರವಿದೆ. ಬಳ್ಳಿಯಲ್ಲಿ ಹೂವು, ಕಾಯಿ ಇಲ್ಲದೇ ಇರುವುದನ್ನು ಕಂಡು ರೈತರು ಕಂಗಾಲಾಗಿದ್ದಾರೆ.

ಉತ್ತಮ ಇಳುವರಿಗಾಗಿ ನಿತ್ಯ ಬಳ್ಳಿಗೆ ತಂಪು ವಾತಾವರಣ ಕಲ್ಪಿಸಲು ಹೆಗಲ ಮೇಲೆ ಕ್ಯಾನ್‌ ಹೊತ್ತು ನಿತ್ಯ ನೀರಿನ ಸಿಂಪಡಣೆ ಮಾಡಿದ್ದೇವೆ. ಮೂರು ದಿನಕ್ಕೊಮ್ಮೆ ಕೀಟನಾಶಕಗಳ ಸಿಂಪಡಣೆ, ಇತರೆ ಎಲ್ಲಾ ಕೆಲಸಗಳನ್ನು ತುಂಬಾ ಮುತುವರ್ಜಿಯಿಂದ ನಿರ್ವಹಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ರೈತ ನಾಗರಾಜ್‌ ಬೇಸರ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ನಡುವೆ ಸಾಲ ಮಾಡಿ ಹುರುಳಿಕಾಯಿ ಬೆಳೆಯಲು ಹೋದರೆ ಕಳಪೆ ಬಿತ್ತನೆ ಬೀಜಕ್ಕೆ ತುತ್ತಾಗಿ ನಮ್ಮ ಬದುಕು ಮೂರಾಬಟ್ಟೆಯಾಗಿದೆ. ನಮಗೆ ಆಗಿರುವ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಕನಿಷ್ಠ ಸೌಜನ್ಯಕ್ಕೂ ಜಮೀನಿಗೆ ಭೇಟಿ ನೀಡಿ ಕಂಪನಿಯವರು ಪರಿಶೀಲನೆ ನಡೆಸಲಿಲ್ಲ. ಕೃಷಿ ಇಲಾಖೆ ಮತ್ತು ಸರ್ಕಾರ ನಮಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಕೊಡಿಸಬೇಕು.

ಕರಿಬಸಪ್ಪ, ಅಳಗವಾಡಿ ರೈತ

ಬಳ್ಳಿಯಲ್ಲಿ ಕಾಯಿ ಬಿಡದೇ ಇರುವ ಕುರಿತು ಆಗ್ರೋ ಸೀಡ್ಸ್‌ ಅಂಗಡಿ, ಅಶೋಕ ಸೀಡ್ಸ್‌ ಬಿತ್ತನೆ ಬೀಜ ಪೂರೈಸುವ ಕಂಪನಿಯ ಪ್ರಕಾಶ್‌ ಮತ್ತು ಮಧು ಎಂಬುವವರನ್ನು ಸಂಪರ್ಕಿಸಿದ್ದೇವೆ. ಅವರು ಹಾರಿಕೆ ಉತ್ತರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಯಾರೊಬ್ಬರು ಜಮೀನಿಗೆ ಭೇಟಿ ನೀಡಿ ನಮ್ಮ ಕಷ್ಟ ಕೇಳಲಿಲ್ಲ. ಹೀಗಾಗಿ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಬಳ್ಳಿಯನ್ನು ನೋಡಲಾಗದೆ ನಾಶಪಡಿಸಿದ್ದೇವೆ. ಇಂತಹ ಕಳಪೆ ಬೀಜ ಪೂರೈಸುವ ಕಂಪನಿಗಳ ವಿರುದ್ಧ ಕೃಷಿ ಇಲಾಖೆ ಕ್ರಮ ಕೈಗೊಳ್ಳಬೇಕು.

ನಾಗರಾಜ್‌, ಅಳಗವಾಡಿ ರೈತ

ಅಳಗವಾಡಿ ರೈತರ ಜಮೀನುಗಳಿಗೆ ಭೇಟಿ ನೀಡಿ ಬಳ್ಳಿಯಲ್ಲಿ ಕಾಯಿ ಬಿಡದಿರುವುದನ್ನು ಪರಿಶೀಲಿಸಿ ಮಾದರಿಗಳನ್ನು ಕಂಪನಿಗೆ ಕಳುಹಿಸುತ್ತೇನೆ. ರೈತರಿಗೆ ಅನ್ಯಾಯ ಆಗದಂತೆ ನೋಡಿಕೊಳ್ಳುತ್ತೇನೆ.

ಪ್ರಕಾಶ್‌, ಅಶೋಕ ಸೀಡ್ಸ್‌ ಬೀಜ ಪೂರೈಕೆದಾರರು, ಚಿತ್ರದುರ್ಗ

 

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

BY Raghavendra ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ ದಾಖಲು

BY Raghavendra ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ಕೇಸ್‌ ದಾಖಲು

Gas ಸಿಲಿಂಡರ್ ಸ್ಫೋಟ: ಮನೆ ಸಂಪೂರ್ಣ ಭಸ್ಮ

Gas ಸಿಲಿಂಡರ್ ಸ್ಫೋಟ: ಮನೆ ಸಂಪೂರ್ಣ ಭಸ್ಮ

ಬೈಕ್ ಗೆ ಡಿಕ್ಕಿ ಹೊಡೆದ ಟಾಟಾ ಏಸ್… ಓರ್ವ ಸ್ಥಳದಲ್ಲೇ ಮೃತ್ಯು, ಇನ್ನೋರ್ವ ಗಂಭೀರ

ಬೈಕ್ ಗೆ ಡಿಕ್ಕಿ ಹೊಡೆದ ಟಾಟಾ ಏಸ್… ಓರ್ವ ಸ್ಥಳದಲ್ಲೇ ಮೃತ್ಯು, ಇನ್ನೋರ್ವ ಗಂಭೀರ

ISRO Success: ಅಂತರಿಕ್ಷ ನೌಕೆ ‘ಪುಷ್ಪಕ್‌’ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ…

ISRO ಸಾಧನೆ: ಅಂತರಿಕ್ಷ ನೌಕೆ ‘ಪುಷ್ಪಕ್‌’ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ…

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.