ಆಂಜನೇಯಗೆ ಬ್ರೇಕ್ ಹಾಕಲು ಹರಸಾಹಸ
Team Udayavani, May 10, 2018, 6:25 AM IST
ಚಿತ್ರದುರ್ಗ: ಸಾಂಪ್ರದಾಯಿಕ ಎದುರಾಳಿಗಳ ಮತ್ತೂಂದು ಹಣಾಹಣಿಗೆ ಹೊಳಲ್ಕೆರೆ ಪರಿಶಿಷ್ಟ ಜಾತಿ ಮೀಸಲು ವಿಧಾನಸಭಾ ಕ್ಷೇತ್ರ ಸಜ್ಜಾಗಿದೆ. ಕಾಂಗ್ರೆಸ್ನಿಂದ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಸ್ಪರ್ಧಿಸಿದ್ದರೆ, ಬಿಜೆಪಿಯಿಂದ ಎಂ.ಚಂದ್ರಪ್ಪ ಕಣಕ್ಕೆ ಇಳಿದಿದ್ದಾರೆ.
ಆಂಜನೇಯ ಶಾಸಕರಾಗಿ ಪುನರಾಯ್ಕೆಯಾಗಲು ಹೋರಾಟ ನಡೆಸಿದ್ದಾರೆ. ಅವರ ಗೆಲುವಿಗೆ ಬ್ರೇಕ್ ಹಾಕಲು ಎಂ.ಚಂದ್ರಪ್ಪ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ಇವರಿಬ್ಬರ ನಡುವಿನ ಸೆಣಸಾಟದಲ್ಲಿ ಜೆಡಿಎಸ್ ಅಭ್ಯರ್ಥಿ ಶ್ರೀನಿವಾಸ ಗದ್ದಿಗೆ ತೀರಾ ಸಪ್ಪೆ ಎನ್ನಿಸಿದ್ದಾರೆ. ಹಾಗಾಗಿ ಇಲ್ಲೇನಿದ್ದರೂ ಕಾಂಗ್ರೆಸ್-ಬಿಜೆಪಿ ಮಧ್ಯೆ ನೇರ ಫೈಟ್.
ಬಿಜೆಪಿಗೆ ಬಂಡಾಯದ ಬಿಸಿ: ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ವಿರೋ ಧಿ ಅಲೆ ಅಷ್ಟಾಗಿ ಕಾಡದಿದ್ದರೂ ಆಂಜನೇಯ ಮಾತ್ರ ಎಚ್ಚರಿಕೆ ವಹಿಸಿದ್ದಾರೆ. ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ. ಹೊಳಲ್ಕೆರೆ ಮಾಜಿ ಶಾಸಕ ಪಿ.ರಮೇಶ್ ಹಾಗೂ ಅಭ್ಯರ್ಥಿ ಚಂದ್ರಪ್ಪ ಮಧ್ಯೆ ಅಷ್ಟಕ್ಕಷ್ಟೇ. ಜೊತೆಗೆ ಚಂದ್ರಪ್ಪ ಕೆಜೆಪಿಯಿಂದ ಬಿಜೆಪಿಗೆ ಬಂದವರು ಎಂಬ ಅಸಮಾಧಾನ ಇನ್ನೂ ಹೊಗೆಯಾಡುತ್ತಲೇ ಇದೆ. ಹಾಗಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹನುಮಕ್ಕ ಅವರನ್ನು ಮಾಜಿ ಶಾಸಕರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದಾರೆ.
ನಿರ್ಣಾಯಕ ಅಂಶ
ಕಳೆದ ಚುನಾವಣೆಯಲ್ಲಿ ಬಹುತೇಕ ಕುಂಚಿಟಿಗರ ಮತಗಳು ಚಂದ್ರಪ್ಪ ಅವರಿಗೆ ಚಲಾವಣೆಯಾಗಿದ್ದವು. ಈಗ ಪರಿಸ್ಥಿತಿ ಬದಲಾಗಿದ್ದು, ಕುಂಚಿಟಿಗ ಸಮುದಾಯದ ಮತಗಳನ್ನು ಸೆಳೆಯಲು ಆಂಜನೇಯ ತಂತ್ರ ರೂಪಿಸಿದ್ದಾರೆ. ಅಲ್ಲದೆ ಸಿರಿಗೆರೆಯ ತರಳಬಾಳು ಜಗದ್ಗುರುಗಳ ಸೂಚನೆ ಮೇರೆಗೆ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ, ಭರಮಸಾಗರ ಸುತ್ತಮುತ್ತಲಿನ ಮೂರು ಕೆರೆಗಳಿಗೆ ನೀರು ಭರ್ತಿ ಮಾಡುವ ಯೋಜನೆಗೆ ಸರ್ಕಾರದಿಂದ ಮಂಜೂರಾತಿ ಕೊಡಿಸಿದ್ದಾರೆ. ಆದರೂ ಹೊಳಲ್ಕೆರೆ ಕ್ಷೇತ್ರದಲ್ಲಿ ಯಡಿಯೂರಪ್ಪ ಪ್ರಭಾವ ಜಾಸ್ತಿ ಇದೆ. ಬಿಜೆಪಿ ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸಿಗಿಂತ ಯಡಿಯೂರಪ್ಪನವರ ಹೆಸರೇ ಹೆಚ್ಚು ಚಾಲ್ತಿಯಲ್ಲಿರುವುದರಿಂದ ಫಲಿತಾಂಶದಲ್ಲಿ ಏನು ಬೇಕಾದರೂ ಆಗಬಹುದು.
ಒಟ್ಟು ಮತದಾರರು: 2,24,393.
ಪುರುಷರು: 1,14,127.
ಮಹಿಳೆಯರು: 1,10,266.
ಜಾತಿವಾರು ಮತಗಳು
ಲಿಂಗಾಯತ-60 ಸಾವಿರ
ಮಾದಿಗ-40 ಸಾವಿರ
ವಾಲ್ಮೀಕಿ ನಾಯಕ-20 ಸಾವಿರ
ಗೊಲ್ಲ-20 ಸಾವಿರ
ಭೋವಿ18 ಸಾವಿರ
ಲಂಬಾಣಿ-16 ಸಾವಿರ
ಮುಸ್ಲಿಂ- 10 ಸಾವಿರ
ಕುರುಬ-8 ಸಾವಿರ
ಬಲಗೈ- 5 ಸಾವಿರ.
ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಮಹತ್ವದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದರಿಂದ ಮತದಾರರು ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸವಿದೆ.
– ಎಚ್. ಆಂಜನೇಯ, ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ
ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಆಗಿಲ್ಲ. ನನ್ನ ಅವ ಧಿಯಲ್ಲಿ ಮಾಡಿರುವ ರಸ್ತೆಗಳು ಈಗಲೂ ನನ್ನ ಹೆಸರು ಹೇಳುತ್ತಿವೆ. ಆದ್ದರಿಂದ ಈ ಬಾರಿ ಜನರು ನನ್ನನ್ನೇ ಆಯ್ಕೆ ಮಾಡಲಿದ್ದಾರೆ.
– ಎಂ. ಚಂದ್ರಪ್ಪ, ಬಿಜೆಪಿ ಅಭ್ಯರ್ಥಿ
ಬಿಜೆಪಿ, ಕಾಂಗ್ರೆಸ್ ಆಡಳಿತದಿಂದ ಕ್ಷೇತ್ರದ ಜನತೆ ರೋಸಿ ಹೋಗಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್ ಅಲೆ ಇದೆ. ಜೊತೆಗೆ ನಾನು ಸ್ಥಳೀಯ ಅಭ್ಯರ್ಥಿಯಾಗಿರುವುದರಿಂದ ಗೆಲುವು ನಿಶ್ಚಿತ.
– ಶ್ರೀನಿವಾಸ್ ಗದ್ದಿಗೆ, ಜೆಡಿಎಸ್ ಅಭ್ಯರ್ಥಿ
– ಹರಿಯಬ್ಬೆ ಹೆಂಜಾರಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ