ಚುನಾವಣೆಗೆ ಇನ್ನೊಂದು ವರ್ಷ ಬಾಕಿ: ಬೀದಿಗೆ ಬಿದ್ದ ಹೊಸದುರ್ಗ ಟಿಕೆಟ್ ಫೈಟ್
Team Udayavani, Jan 19, 2022, 3:11 PM IST
ಶಾಸಕ ಗೂಳಿಹಟ್ಟಿ ಶೇಖರ್
ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಇನ್ನೊಂದು ವರ್ಷ ಬಾಕಿ ಇರುವಾಗಲೇಜಿಲ್ಲೆಯಲ್ಲಿ ಟಿಕೆಟ್ ಫೈಟ್ ಶುರುವಾಗಿದೆ.ಹೊಸದುರ್ಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ವಿಚಾರ ಸಂಕ್ರಾಂತಿಯಿಂದ ಬೀದಿಗೆ ಬಿದ್ದಿದೆ. ಈವಾರ್ನಲ್ಲಿ ಪಕ್ಷದ ಕಾರ್ಯಕರ್ತರು ಮೂಕ ಪ್ರೇಕ್ಷಕರಾಗಿದ್ದಾರೆ.ಜಿಲ್ಲೆಯ 6 ತಾಲೂಕುಗಳಲ್ಲೂ ಬಿಜೆಪಿ, ಕಾಂಗ್ರೆಸ್,ಜೆಡಿಎಸ್ ಪಕ್ಷಗಳಿಂದ ಟಿಕೆಟ್ ಆಕಾಂಕ್ಷಿಗಳ ದಂಡೇ ಇದೆ.
ಈಗಾಗಲೇ ಪ್ರತ್ಯಕ್ಷ-ಪರೋಕ್ಷವಾಗಿ ವರಿಷ್ಠರಮೇಲೆ ಒತ್ತಡ ಹಾಕುವುದು, ಅಧಿ ಕೃತವಾಗಿ ನಾನುಆಕಾಂಕ್ಷಿ ಎಂದು ಹೇಳದಿದ್ದರೂ, ನಡವಳಿಕೆಗಳಿಂದನಾನೂ ಆಕಾಂಕ್ಷಿ ಎಂಬ ಭಾವನೆ ಮೂಡಿಸುತ್ತಾಅನೇಕರು ತೆರೆಮರೆ ಪ್ರಯತ್ನದಲ್ಲಿದ್ದಾರೆ.ಆದರೆ, ರಾಜ್ಯ ಖನಿಜ ನಿಗಮದ ಅಧ್ಯಕ್ಷ ಎಸ್.ಲಿಂಗಮೂರ್ತಿ ಹಾಗೂ ಹಾಲಿ ಶಾಸಕ ಗೂಳಿಹಟ್ಟಿಶೇಖರ್ ನಡುವಿನ ಫೈಟ್ ಬಹಿರಂಗವಾಗಿಯೇ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಜ.14 ಮಕರ ಸಂಕ್ರಾಂತಿಯಂದು ನನ್ನನಿರ್ಧಾರ ಪ್ರಕಟಿಸುತ್ತಿದ್ದೇನೆ. ಮುಂಬರುವ ವಿಧಾನಸಭಾ ಚುನಾವಣೆಗೆ ನಾನು ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಎಸ್.ಲಿಂಗಮೂರ್ತಿ ಪತ್ರಿಕಾ ಪ್ರಕಟಣೆ ಹೊರಡಿಸಿದರು.
ಇದರಿಂದ ಕೆರಳಿದ ಶಾಸಕ ಗೂಳಿಹಟ್ಟಿ ಶೇಖರ್, ಕಾರ್ಯಕರ್ತರು,ಅಭಿಮಾನಿಗಳು ಗೊಂದಲಕ್ಕೆ ಒಳಗಾಗುವುದುಬೇಡ. 2023ರ ವಿಧಾನಸಭಾ ಚುನಾವಣೆಗೂ ನಾನು ಸ್ಪರ್ಧೆ ಮಾಡುವುದು ಖಚಿತ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ವಿಡಿಯೋ ಹರಿಬಿಟ್ಟರು. 2018ರ ವಿಧಾನಸಭಾ ಚುನಾವಣೆಯಲ್ಲಿ 90 ಸಾವಿರಕ್ಕಿಂತಹೆಚ್ಚು ಮತದಾರರು ನನಗೆಆಶೀರ್ವಾದ ಮಾಡಿದ್ದಾರೆ.ಅವರೆಲ್ಲರೂ ಪಕ್ಷದಿಂದ ಟಿಕೆಟ್ ಕೇಳಲು, ಚುನಾವಣೆಗೆ ಸ್ಪರ್ಧೆಮಾಡಲು ಅರ್ಹರಾಗಿದ್ದಾರೆ.ಆದರೆ, ವರಿಷ್ಠರು ಘೋಷಣೆ ಮಾಡುವ ಮೊದಲೇ ನಾನು ಅಭ್ಯರ್ಥಿ ಎಂದು ಹೇಳುವ ಸಂಸ್ಕೃತಿ ಬಿಜೆಪಿಯಲ್ಲಿಲ್ಲ ಎನ್ನುವ ಮೂಲಕ ಲಿಂಗಮೂರ್ತಿಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಲಿಂಗಮೂರ್ತಿ ವಾದ ಏನು?: ಇತ್ತ ಲಿಂಗಮೂರ್ತಿಕೂಡಾ 2018ರ ಚುನಾವಣೆಯಲ್ಲಿ ನಾನು ಟಿಕೆಟ್ತ್ಯಾಗ ಮಾಡಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಅಧಿ ಕಾರಕ್ಕೆಬರಬೇಕು, ಹೊಸದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಆಯ್ಕೆಯಾಗಬೇಕು ಎಂಬ ಕಾರಣಕ್ಕೆ ಒಮ್ಮತದಅಭ್ಯರ್ಥಿ ಆಯ್ಕೆ ಮಾಡಿದ್ದೇವೆ. ಆದರೆ, ಕ್ಷೇತ್ರಕ್ಕೆಸಾಮಾಜಿಕ ನ್ಯಾಯ ಸಿಗಬೇಕಿದೆ. ಸಾಮಾನ್ಯಕ್ಷೇತ್ರವಾಗಿರುವುದರಿಂದ ಈ ಚುನಾವಣೆಯಲ್ಲಿನನಗೆ ಸ್ಪರ್ಧೆ ಮಾಡಲು ಪಕ್ಷದ ವರಿಷ್ಠರು ಅವಕಾಶಮಾಡಿಕೊಡುತ್ತಾರೆ. ಈ ಹಿಂದೆ ಸ್ಪರ್ಧೆ ಮಾಡಿ ಪರಾಭವಗೊಂಡ ಎರಡೂ ಚುನಾವಣೆಗಳಲ್ಲಿ40 ಸಾವಿರಕ್ಕಿಂತ ಹೆಚ್ಚು ಮತ ಪಡೆದಿದ್ದೇನೆ ಎಂಬ ಸಮರ್ಥನೆ ಇಟ್ಟಿದ್ದಾರೆ.
ಈ ನಡುವೆ ಗರಗದ ಪಾಂಡುರಂಗಪ್ಪ ಹಾಗೂ ಮಂಜುನಾಥ್ ಇಬ್ಬರೂ ಪಕ್ಷೇತರ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ತಯಾರಿ ನಡೆಸುತ್ತಿದ್ದಾರೆ. ಅಭ್ಯರ್ಥಿಗಳು ಹೆಚ್ಚಾದಂತೆ ಗೆಲುವಿನ ಅಂತರ ಕಡಿಮೆ ಆಗುತ್ತದೆ ಎನ್ನುವುದುಈ ಹಿಂದಿನ ಚುನಾವಣಾ ಫಲಿತಾಂಶಗಳಿಂದ ಸಾಬೀತಾಗಿದೆ. ಇಲ್ಲಿ ನೇರಾ ಹಣಾಹಣಿ ಅಥವಾ ತ್ರಿಕೋನ ಸ್ಪರ್ಧೆ ನಡೆದಾಗ ಗೆಲುವಿನ ಲೆಕ್ಕಾಚಾರ ಕಷ್ಟವಾಗಿರುತ್ತದೆ. ಅಭ್ಯರ್ಥಿಗಳು ಹೆಚ್ಚಾದಾಗ ಮತವಿಭಜನೆಯಾಗಲಿದೆ. ಇಂತಹ ಸಂದರ್ಭಗಳಲ್ಲಿಅಚ್ಚರಿಯ ಆಯ್ಕೆಗಳೂ ನಡೆದಿವೆ.
ತಿಪ್ಪೆಸ್ವಾಮಿ ನಾಕೀಕೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವರ್ಷದೊಳಗೆ 3.55 ಕೋಟಿ ವೆಚ್ಚದ ರಾಜಕಾಲುವೆ ನಿರ್ಮಾಣ ಭರವಸೆ : ಎಸ್.ಜಯರಾಂ
ಹಿಪ್ಹಾಪ್ ನೃತ್ಯದ ಜೊತೆ ಹೈಬ್ರಿಡ್ ಭರತನಾಟ್ಯ : ನೆಟ್ಟಿಗರಿಂದ ಭಾರಿ ಮೆಚ್ಚುಗೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ