ವರುಣನಬ್ಬರಕ್ಕೆ 25 ಲಕ್ಷ ರೂ. ಹಾನಿ
Team Udayavani, Oct 26, 2021, 1:25 PM IST
ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಮೂರುದಿನಗಳಿಂದ ಮಳೆಯ ಆರ್ಭಟಮುಂದುವರೆದಿದ್ದು, ಮನೆ, ಬೆಳೆ,ಜಾನುವಾರುಗಳು ಸೇರಿದಂತೆ ಸುಮಾರು25 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದುಜಿಲ್ಲಾಡಳಿತ ಅಂದಾಜಿಸಿದೆ.
ಜಿಲ್ಲೆಯ ಹೊಸದುರ್ಗ, ಹೊಳಲ್ಕೆರೆ,ಹೊಳಲ್ಕೆರೆ, ಹಿರಿಯೂರು ಭಾಗದಲ್ಲಿಮಳೆಯಿಂದ ಹಲವು ಕೆರೆ, ಕಟ್ಟೆಗಳುತುಂಬಿವೆ. ವಿಶೇಷವಾಗಿ ವಾಣಿವಿಲಾಸಸಾಗರಕ್ಕೆ ನೀರಿನ ಹರಿವಿನ ಪ್ರಮಾಣಹೆಚ್ಚಾಗಿದೆ. ಸೋಮವಾರ ಬೆಳಗ್ಗೆ 8ಗಂಟೆಗೆ ನಡೆದ ಮಾಪನದ ವೇಳೆವಿವಿ ಸಾಗರದಲ್ಲಿ 114 ಅಡಿ ನೀರು ಸಂಗ್ರಹವಾಗಿದೆ.
ಮೂರು ದಿನಗಳ ಹಿಂದೆ ಬಿರುಮಳೆಗೆ ಓರ್ವ ವ್ಯಕ್ತಿ ಮೃತಪಟ್ಟಿದ್ದು,ನಾಲ್ವರು ಗಾಯಗೊಂಡಿದ್ದರು. 12ಕುರಿಗಳು ಮೃತಪಟ್ಟಿವೆ. ಜಿಲ್ಲೆಯಲ್ಲಿ 49ಮನೆಗಳಿಗೆ ಭಾಗಶಃ ಹಾನಿಯಾಗಿದೆ.ಹೊಸದುರ್ಗ ತಾಲೂಕು ಒಂದರಲ್ಲೇ 34ಮನೆಗಳು ನೀರು ನುಗ್ಗಿ ಹಾನಿಗೀಡಾಗಿವೆ.ಆನಿವಾಳ ಬಳಿ 8 ಮನೆಗಳಿಗೆ ನೀರು ನುಗ್ಗಿಅವಾಂತರ ಸೃಷ್ಟಿಯಾಗಿತ್ತು.
ಸಾವಿರಾರುಎಕರೆ ಬೆಳೆ ನಾಶವಾಗಿದೆ. ಅಡಕೆ, ಬಾಳೆ,ತೆಂಗು, ಮೆಕ್ಕೆಜೋಳ ಸೇರಿದಂತೆ ಖುಷ್ಕಿಹಾಗೂ ತೋಟಗಾರಿಕಾ ಬೆಳೆಗಳುಹೊಸದುರ್ಗ, ಹೊಳಲ್ಕೆರೆ ಭಾಗದಲ್ಲಿಜಲಾವೃತವಾಗಿವೆ. ಜಿಲ್ಲೆಯ ದೊಡ್ಡಕೆರೆಗಳಲ್ಲಿ ಒಂದಾಗಿರುವ ತಾಳ್ಯ ಕೆರೆಕೋಡಿ ಬೀಳುವ ಹಂತದಲ್ಲಿದೆ. ಸಣ್ಣಪುಟ್ಟಕೆರೆಗಳು ಈಗಾಗಲೇ ತುಂಬಿ ಕೋಡಿಬಿದ್ದಿವೆ.ಹೆಚ್ಚಾದ ಮಳೆಯಿಂದಾಗಿ ಹತ್ತಿಬಿಡಿಸಲು ಸಾಧ್ಯವಾಗದೆ ನಷ್ಟ ಸಂಭವಿಸಿದೆ.
ಹತ್ತಿಗೆ ದರ ಹೆಚ್ಚಾಗಿರುವಹಿನ್ನೆಲೆಯಲ್ಲಿ ರೈತರು ಇಕ್ಕಟ್ಟಿಗೆಸಿಲುಕಿದ್ದಾರೆ. ಮೆಕ್ಕೆಜೋಳಕ್ಕೆ ಸಕಾಲಕ್ಕೆಮಳೆಯಾಗದೆ ಬೆಳೆ ಅಷ್ಟಕ್ಕಷ್ಟೇಎನ್ನುವಂತಾಗಿದ್ದರೆ, ಕಟಾವಿನ ಸಮಯಕ್ಕೆಮಳೆ ಜೋರಾಗಿರುವುದರಿಂದ ತೆನೆಮುರಿಯಲು ಸಾಧ್ಯವಾಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ
MUST WATCH
ಹೊಸ ಸೇರ್ಪಡೆ
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ
Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ