2021ರ ಜನಗಣತಿ ನಡೆಸಲು ಜಿಲ್ಲಾಡಳಿತದಿಂದ ಸಿದ್ಧತೆ

ಎಲ್ಲ ಕ್ಷೇತ್ರಗಳ ನಕ್ಷೆ ತಯಾರಿಸಿ ಕಚೇರಿಗೆ ಸಲ್ಲಿಸಲು ಸೂಚನೆ

Team Udayavani, Jan 19, 2020, 1:25 PM IST

Udayavani Kannada Newspaper

ಚಿತ್ರದುರ್ಗ: ದೇಶಾದ್ಯಂತ ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿ 2021ಕ್ಕೆ ನಡೆಯಲಿದ್ದು, ಜಿಲ್ಲಾಡಳಿತ ಈಗಾಗಲೇ ಪೂಕರ ಸಿದ್ಧತೆ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸರ್ಕಾರ ಜನರಿಗಾಗಿ ರೂಪಿಸುವ ಯಾವುದೇ ಯೋಜನೆಗಳಿಗೆ ಜನಸಂಖ್ಯೆಯ ವಿವರವೇ ಆಧಾರ. ಇದು ನಿಖರವಾಗಿ ದೊರೆಯುವುದು ಜನಗಣತಿಯಲ್ಲಿ. ಹೀಗಾಗಿ ಜನಗಣತಿ ಕಾರ್ಯ ಅತ್ಯಂತ ಮಹತ್ವ ಪಡೆದಿದೆ. ಜಿಲ್ಲಾಧಿಕಾರಿಗಳನ್ನು ಪ್ರಧಾನ ಜಿಲ್ಲಾ ಗಣತಿ ಅಧಿಕಾರಿಗಳನ್ನಾಗಿ ಹಾಗೂ ಅಪರ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಜನಗಣತಿ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಭಾರತದ ಜನಸಂಖ್ಯೆ ಬೆಳೆವಣಿಗೆಗೆ ಇತಿಹಾಸವಿದ್ದು, ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರಗಳಲ್ಲಿ ಚೀನ ಮೊದಲ ಸ್ಥಾನದಲ್ಲಿದ್ದರೆ, ಭಾರತ ಎರಡನೇ ಸ್ಥಾನದಲ್ಲಿದೆ. 1871-72 ರ ಆಸುಪಾಸಿನಲ್ಲಿ ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಜನಗಣತಿ ನಡೆಸಲು ತೀರ್ಮಾನಿಸಿ, ಗಣತಿದಾರರಿಗೆ ತರಬೇತಿ ನೀಡಿ, ಜನಗಣತಿ ನಡೆಸಲಾಗಿತ್ತು.

1881 ರಲ್ಲಿದ್ದ ಗಣತಿ ನಿಯಮ ಬದಲಾಯಿಸಿ, 1891 ರಿಂದ ಜನಗಣತಿ ಸಮೀಕ್ಷೆಗೆ ಸಂಬಂಧಿ ಸಿದಂತೆ ಕೆಲವು ವಿನೂತನ ಅಂಶಗಳನ್ನು ಉದ್ಯೋಗ ಮತ್ತು ಜಾತಿಯಾಧರಿತ ಮಾಹಿತಿ
ಕಲೆಹಾಕಲಾಯಿತು. 1901 ರಿಂದ ಹತ್ತು ವರ್ಷಕ್ಕೊಮ್ಮೆ ಜನಗಣತಿ ಕಾರ್ಯ ನಡೆಸುವ ಪ್ರಕ್ರಿಯೆ ಜಾರಿಗೆ ಬಂದಿದೆ. 2021 ರಲ್ಲಿ ನಡೆಯುವ ಜನಗಣತಿ 13ನೇ ಗಣತಿಯಾಗಿದೆ.

ಕಳೆದ 2011 ರ ಜನಗಣತಿಯಲ್ಲಿ ಉತ್ತರ ಪ್ರದೇಶ 19.9 ಕೋಟಿ ಜನಸಂಖ್ಯೆ ಹೊಂದಿ ದೇಶದಲ್ಲೇ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯವಾಗಿತ್ತು. ಭಾರತ ಜಗತ್ತಿನ ಶೇ. 17.5 ರಷ್ಟು ಜನಸಂಖ್ಯೆ ಹೊಂದಿದೆ. ಸಾಕ್ಷರತೆ 74.04, ಲಿಂಗಾನುಪಾತ 943 ರಷ್ಟಿದೆ ಎಂದು ವರದಿಯಾಗಿತ್ತು.

2011 ರ ಜನಗಣತಿಯ ವರದಿಯಂತೆ ಕರ್ನಾಟಕದಲ್ಲಿ 6.1 ಕೋಟಿ ಜನಸಂಖ್ಯೆ ದಾಖಲಾಗಿತ್ತು. ರಾಜ್ಯದ ಸಾಕ್ಷರತೆ 75.04 ಇದ್ದರೆ, ಲಿಂಗಾನುಪಾತ 965 ರಷ್ಟು ದಾಖಲಾಗಿತ್ತು.

2021 ಜನಗಣತಿ ವಿಶೇಷ: ಈ ಬಾರಿ ವಿಶೇಷವಾಗಿ ಮೊಬೈಲ್‌ ಆ್ಯಪ್‌
ಮೂಲಕ ಸಮೀಕ್ಷೆ ನಡೆಸಲಾಗುತ್ತದೆ. ಜಿಲ್ಲೆಯಲ್ಲಿ ಜನಗಣತಿಗಾಗಿ ಈಗಾಗಲೆ ಹಲವು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಜನಗಣತಿಗೆ ಸಂಬಂಧಪಟ್ಟ ಅಧಿಕಾರಿಗಳನ್ನು ನೇಮಿಸಿ ಅಧಿಸೂಚನೆ ಹೊರಡಿಸಲಾಗಿದೆ.
ಗ್ರಾಮ ಮಟ್ಟದಲ್ಲಿ ತಹಶೀಲ್ದಾರ್‌ ಕಾರ್ಯನಿರ್ವಹಿಸಿದರೆ, ಪಟ್ಟಣ ಪಂಚಾಯತಿ, ಪುರಸಭೆ ಅಥವಾ ನಗರಸಭೆ ಆಯುಕ್ತರು ಕಾರ್ಯನಿರ್ವಹಿಸುವರು. ತಮ್ಮ ಕ್ಷೇತ್ರಗಳ ನಕ್ಷೆ ತಯಾರಿಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೇಕು. ಇದರ ಆಧಾರದಲ್ಲಿ ಜನಸಂಖ್ಯೆ ಆಧರಿಸಿ ಬ್ಲಾಕ್‌ ಎಂದು ಗುರುತಿಸಲಾಗುತ್ತದೆ.

ಬ್ಲಾಕ್‌ಗೆ ಒಬ್ಬ ಗಣತಿದಾರರನ್ನು ನೇಮಿಸಲಾಗುತ್ತದೆ. ಈಗಾಗಲೇ ಜಿಲ್ಲೆಯಿಂದ ಇಬ್ಬರು ಮಾಸ್ಟರ್‌ ತರಬೇತುದಾರರನ್ನು ಆಯ್ಕೆ ಮಾಡಿದ್ದು, ರಾಜ್ಯಮಟ್ಟದಲ್ಲಿ ತರಬೇತಿ ಕೊಡಿಸಲಾಗಿದೆ. ಇವರು ಜಿಲ್ಲೆಯ 53 ಕ್ಷೇತ್ರ ತರಬೇತುದಾರರಿಗೆ ತರಬೇತಿ ನೀಡುವರು.

ತರಬೇತಿ ಪಡೆದ ಕ್ಷೇತ್ರ ತರಬೇತುದಾರರು 3054 ಜನ ಗಣತಿದಾರರಿಗೆ ಹಾಗೂ 507 ಮೇಲ್ವಿಚಾರಕರಿಗೆ ತರಬೇತಿ ನೀಡುವರು. ಗಣತಿದಾರರನ್ನಾಗಿ ಶಿಕ್ಷಣ ಇಲಾಖೆಯವರನ್ನು ಆಯ್ಕೆ ಮಾಡುವುದು ರೂಢಿ, ಮಾಹಿತಿ ರವಾನಿಸುವಲ್ಲಿ ಹಾಗೂ ಮಾಹಿತಿ ಸಂಗ್ರಹಿಸುವಲ್ಲಿ ನಿಪುಣರು ಎಂಬ ಉದ್ದೇಶದಿಂದ ಶಿಕ್ಷಕರನ್ನು ಗಣತಿದಾರರನ್ನಾಗಿ ಆಯ್ಕೆ ಮಾಡಲಾಗುತ್ತದೆ.

ಜಿಲ್ಲೆಯಲ್ಲಿ ಒಟ್ಟು 3054 ಗಣತಿದಾರರನ್ನು ನೇಮಿಸಲಾಗುವುದು, ಈ ಪೈಕಿ 278 ಹೆಚ್ಚುವರಿ ಕಾಯ್ದಿರಿಸಿದ ಗಣತಿದಾರರು. ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ತಾಲೂಕುವಾರು ವಿವರ ಇಂತಿದೆ. ಮೊಳಕಾಲ್ಮೂರು ಗಣತಿದಾರರು-258, ಮೇಲ್ವಿಚಾರಕರು-42. ಚಳ್ಳಕೆರೆ ಗಣತಿದಾರರು-673, ಮೇಲ್ವಿಚಾರಕರು-112. ಚಿತ್ರದುರ್ಗ
ಗಣತಿದಾರರು-790, ಮೇಲ್ವಿಚಾರಕರು-131. ಹೊಳಲ್ಕೆರೆ ಗಣತಿದಾರರು-377, ಮೇಲ್ವಿಚಾರಕರು-62. ಹಿರಿಯೂರು ಗಣತಿದಾರರು-526, ಮೇಲ್ವಿಚಾರಕರು-88. ಹಾಗೂ ಹೊಸದುರ್ಗದಲ್ಲಿ ಗಣತಿದಾರರು-430, ಮೇಲ್ವಿಚಾರಕರನ್ನಾಗಿ 72 ಜನರನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ
ಕಚೇರಿ ತಿಳಿಸಿದೆ.

ಜಿಲ್ಲೆಯಲ್ಲಿ 2021 ರ ಜನಗಣತಿ ಕಾರ್ಯ ಸುಸೂತ್ರವಾಗಿ ಜರುಗಲು ಬೇಕಾದ ಸಿದ್ಧತೆಗಳು ಈಗಾಗಲೆ ಭರದಿಂದ ಸಾಗಿದ್ದು, ನಿಖರ ಅಂಕಿ-ಅಂಶಗಳ ಸಂಗ್ರಹಣೆಯ ಕಾರ್ಯವನ್ನು ಯಶಸ್ವಿಗೊಳಿಸಲು ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಸಹಕಾರದ ಅಗತ್ಯವಿದೆ.

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.