ಓಬಣ್ಣ ನಾಯಕರ ಸಮಾಧಿ ನಾಶ: ಕ್ರಮಕ್ಕೆ ಆಗ್ರಹ
Team Udayavani, Sep 28, 2021, 2:54 PM IST
ಚಿತ್ರದುರ್ಗ: ತಾಲೂಕಿನ ಹಳಿಯೂರುಬಳಿ ಪಾಳೇಗಾರ ಓಬಣ್ಣ ನಾಯಕರಸಮಾ ಧಿಯನ್ನು ನಾಶ ಮಾಡಿದವರವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆಒತ್ತಾಯಿಸಿ ರಾಜನಹಳ್ಳಿ ಶ್ರೀ ವಾಲ್ಮೀಕಿಪ್ರಸನ್ನಾನಂದ ಸ್ವಾಮೀಜಿಯವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಹಿರೇಗುಂಟನೂರು ಹೋಬಳಿ,ಹಳಿಯೂರು ಗ್ರಾಮದ ಸರ್ವೆನಂ:105/2ರಲ್ಲಿ ಓಬಣ್ಣ ನಾಯಕರಸಮಾ ಧಿಯನ್ನು ನಾಶ ಪಡಿಸಿದ ಬಿ.ಆರ್.ರುದ್ರಾಣಿ ಗಂಗಾಧರ ಹಾಗೂ ಇತರರವಿರುದ್ಧ ಗ್ರಾಮಾಂತರ ಪೊಲೀಸ್ಠಾಣೆಯಲ್ಲಿ ಚಿತ್ರನಾಯಕ ವೇದಿಕೆಸಂಸ್ಥಾಪಕ ಅಧ್ಯಕ್ಷ ಕೆ.ಟಿ. ಪ್ರಶಾಂತ್ಕುಮಾರ್ ಸೆ. 20 ರಂದು ದೂರುದಾಖಲಿಸಿದ್ದಾರೆ. ಆದರೆ ಈವರೆಗೂತಪ್ಪಿತಸ್ಥರನ್ನು ಬಂ ಧಿಸದಿರುವುದು ಖಂಡನೀಯ ಎಂದು ಆಕ್ಷೇಪಿಸಿದರು.
ಚಿನ್ಮೂಲಾದ್ರಿ ಸಂಸ್ಥಾನದ ಮೂಲಪುರುಷ ಚಿತ್ರನಾಯಕರ ನಂತರದಲ್ಲಿಆಳ್ವಿಕೆ ಮಾಡಿದಂತಹ ದೊರೆಗಳಲ್ಲಿಪ್ರಮುಖರಾದ ಓಬಣ್ಣ ನಾಯಕಕಾಲವಾದ ನಂತರ ಚಿತ್ರದುರ್ಗತಾಲೂಕಿನ ಹಳಿಯೂರು ಗ್ರಾಮದಜಮೀನಿನಲ್ಲಿ ಸ್ಮಾರಕ ಮಾಡಲಾಗಿತ್ತು.ಪ್ರಜೆಗಳಿಗಾಗಿ ಕೆರೆ ಕಟ್ಟೆ, ಗುಡಿಗೋಪುರಗಳು, ರಕ್ಷಣೆಗಾಗಿ ಕೋಟೆಕೊತ್ತಲಗಳನ್ನು ನಿರ್ಮಿಸಿದ ಜಾತ್ಯತೀಯಸಂಸ್ಥಾನದ ದೊರೆಗಳ ಸ್ಮಾರಕ ಹಾಳುಮಾಡಿರುವುದು ಸರಿಯಲ್ಲ.
ಈಘಟನೆಯ ಕುರಿತು ನಾಯಕ ಸಮಾಜದಮುಖಂಡರ ಜೊತೆ ಖುದ್ದು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದು, ಸಮಾಧಿಯಿಂದ ಹೊರ ತೆಗೆದ ಬೃಹದಾಕಾರದದೊರೆ ಓಬಣ್ಣ ನಾಯಕರ ಆಡಳಿತವೈಖರಿಯ ಕುರಿತಾದ ಸಾಹಸಗಳಶಿಲ್ಪಕಲೆಗಳ ಕೆತ್ತನೆಯ ಕಲ್ಲುಗಳುಜಮೀನಿನ ಪಕ್ಕದಲ್ಲಿವೆ. ಈ ಸಂಬಂಧಅ ಧಿಕಾರಿಗಳಿಗೆ ಅನೇಕ ಬಾರಿ ದೂರುನೀಡಿದ್ದರೂ ಇಲ್ಲಿಯವರೆಗೂ ಯಾವುದೇಕಾನೂನು ಕ್ರಮ ಕೈಗೊಂಡಿಲ್ಲ ಎಂದುಆರೋಪಿಸಿದರು. ಈ ಹಿನ್ನೆಲೆಯಲ್ಲಿಜಿಲ್ಲಾ ಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿತನಿಖೆ ಮಾಡಿಸಿ ಆರೋಪಿಗಳ ವಿರುದ್ಧಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ನಾಯಕ ಸಮಾಜದಮುಖಂಡರಾದ ಬಿ.ಕಾಂತರಾಜು,ಎಚ್.ಜೆ. ಕೃಷ್ಣಮೂರ್ತಿ, ಕೆ.ಟಿ.ಪ್ರಶಾಂತ್ಕುಮಾರ್, ಪಿ. ಬಸವರಾಜ್ಬಚ್ಚಬೋರನಹಟ್ಟಿ, ಪಿ. ತಿಪ್ಪೇಸ್ವಾಮಿಮದಕರಿ ಸಂತು, ಮಹಂತೇಶ್ಪಾಳೇಗಾರ್, ವಸಂತ್ ಲಕ್ಷ್ಮೀಸಾಗರ,ವೀರೇಂದ್ರಸಿಂಹ, ನಗರಸಭೆ ಸದಸ್ಯವೆಂಕಟೇಶ್ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ