ರೈತನಿಂದ ಮೆಕ್ಕೆಜೋಳ ನೆಲಸಮ
Team Udayavani, Jun 28, 2020, 9:55 AM IST
ಭರಮಸಾಗರ: ಬಿತ್ತನೆ ಮಾಡಿದ ಒಂದು ತಿಂಗಳ ಅವಧಿಯಲ್ಲೇ ಮೆಕ್ಕೆಜೋಳ ಬೆಳೆಗೆ ಬಿದ್ದ ಲದ್ದಿಹುಳು ನಿಯಂತ್ರಣ ಆಗದ ಕಾರಣ ರೈತ ಫಸಲನ್ನು ನೆಲಸಮಗೊಳಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಬೀರಾವರ ಗ್ರಾಮದಲ್ಲಿ ಶನಿವಾರ ನಡೆದಿದೆ.
ರೈತ ಕುಬೇಂದ್ರ ಗೌಡ ಎಂಬುವವರು ಕಳೆದ ತಿಂಗಳ ಹದ ಮಳೆಗೆ ಎರಡೂವರೆ ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಅಲ್ಲೊಂದು ಇಲ್ಲೊಂದು ಹುಳು ಭಾದೆ ಕಾಣಿಸಿಕೊಂಡಿತ್ತು. ಕೃಷಿ ಇಲಾಖೆ ಸಲಹೆಯಂತೆ ಕೀಟನಾಶಕ ಸಿಂಪಡಣೆ ಮಾಡಲಾಗಿತ್ತು. ಆದರೂ ಹುಳು ಬಾಧೆ ಜಾಸ್ತಿಯಾಯಿತು. ಸಂಪೂರ್ಣ ಹೊಲ ಹಾಳಾಗುತ್ತಿರುವುದನ್ನು ಕಂಡ ರೈತ, ಎರಡೂವರೆ ಎಕರೆ ಜಮೀನಿನಲ್ಲಿನ ಸಂಪೂರ್ಣ ಮೆಕ್ಕೆಜೋಳ ಫಸಲನ್ನು ಟ್ರ್ಯಾಕ್ಟರ್ ಕುಂಟೆ ಬಳಸಿ ನೆಲಸಮಗೊಳಿಸಿದ್ದಾರೆ.
ಎರಡೆರಡು ಬಿತ್ತನೆ ಮಾಡುತ್ತಿರುವ ತಮಗೆ ಸಾಲದ ಶೂಲಕ್ಕೆ ತಳ್ಳುವಂತೆ ಮಾಡಿದೆ. ಸರಿಯಾದ ಕೀಟನಾಶಕಗಳು ಸಿಗುತ್ತಿಲ್ಲ.ಬೆಳೆ ನಾಶಪಡಿಸಿದರೂ ಏನಾಗಿದೆ ನಿನಗೆ ಎಂದು ಕೇಳುವವರೇ ಇಲ್ಲದಂತಾಗಿದೆ. ಈ ಎಲ್ಲಾ ಸಮಸ್ಯೆಗಳ ನಡುವೆ ಮೆಕ್ಕೆಜೋಳ ಬೆಳೆ ಬೆಳೆಯುವುದೇ ದುಬಾರಿಯಾಗಿದೆ ಎಂದು ರೈತ ಕುಬೇಂದ್ರ ಗೌಡ ಅಳಲು ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ