ರಾಜಬೀದಿ ಸಿಸಿ ರಸ್ತೆಯನ್ನಾಗಿಸಲು ತೀರ್ಮಾನ
Team Udayavani, Nov 21, 2020, 8:06 PM IST
ಚಿತ್ರದುರ್ಗ: ನಗರದ ದೊಡ್ಡಪೇಟೆಯ ಐತಿಹಾಸಿಕ ರಾಜಬೀದಿಯನ್ನು 2 ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆಯಾಗಿ ಅಭಿವೃದ್ಧಿ ಮಾಡಲು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ದೊಡ್ಡಪೇಟೆ ನಿವಾಸಿಗಳ ಜತೆ ನಡೆದ ಸಭೆಯಲ್ಲಿ ತೀರ್ಮಾನಿಸಿದರು.
ಶುಕ್ರವಾರ ಬೆಳಗ್ಗೆ ಶಾಸಕರು ದೊಡ್ಡಪೇಟೆಗೆ ಭೇಟಿ ನೀಡಿ ರಾಜಬೀದಿ ಪರಿಶೀಲಿಸಿ ಸ್ಥಳೀಯರ ಜತೆಮಾತುಕತೆ ನಡೆಸಿದರು. ಇದು ಬಹಳ ಹಳೆಯದಾದ ರಸ್ತೆಯಾಗಿದ್ದು, ಸಾಕಷ್ಟು ಕಡೆ ಒತ್ತುವರಿಯಾಗಿದೆ. 60 ಅಡಿ ಇರುವ ರಸ್ತೆ ಈಗ 45 ಅಡಿಗೆ ಬಂದಿದೆ. ಇದರಿಂದ ಸುಗಮಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದು ರಾಜ ಬೀದಿಯಾಗಿದ್ದು, ಇಲ್ಲಿಂದಲೇ ಕೋಟೆಗೆ ದಾರಿಯು ಇದೆ. ಆದ್ದರಿಂದ ಈ ರಸ್ತೆಯನ್ನು ಸಹ ನಗರದ ಎಲ್ಲಾ ರಸ್ತೆಗಳಂತೆ ಸಿಸಿ ರಸ್ತೆಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಬಹುತೇಕ ಮನೆಗಳ ಮುಂದೆ ನೀರಿನ ತೊಟ್ಟಿ ನಿರ್ಮಾಣ ಮಾಡಿಕೊಳ್ಳಲಾಗಿದೆ. ಅಲ್ಲದೆ ಮನೆಗೆ ಹೋಗಲು ಮೆಟ್ಟಿಲು ನಿರ್ಮಾಣ ಮಾಡಲಾಗಿದೆ. ರಸ್ತೆ ನಿರ್ಮಾಣಕ್ಕೆ ಇವುಗಳನ್ನು ತೆರವು ಮಾಡಬೇಕಾಗುತ್ತದೆ. ಇದಕ್ಕೆ ಜನರ ಸಹಕಾರ ಅತ್ಯಗತ್ಯ. ಅಲ್ಲದೆ ಯುಜಿಡಿ ಕಾರ್ಯವನ್ನು ಅಗತ್ಯ ಬಿದ್ದರೆ ನಗರಸಭೆಯಿಂದಮಾಡಿಸಲಾಗುವುದು. ನೀರಿನ ಸಂಪರ್ಕಗಳನ್ನು ಮಾಲೀಕರೇ ಮಾಡಿಸಿಕೊಳ್ಳಬೇಕಾಗುತ್ತದೆ. ಉಚ್ಚಂಗಿ ಯಲ್ಲಮ್ಮ ದೇವಾಲಯದ ಮುಂಭಾಗದಿಂದ ಜಿಲ್ಲಾಸ್ಪತ್ರೆಹಾಗೂ ಮದಕರಿ ನಾಯಕ ಪ್ರತಿಮೆಯವರೆಗೂ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.
ನಗರದಲ್ಲಿ ಎಲ್ಲಾ ಕಡೆಯೂ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗ ಇರುವ ಹಳೆಯ ಮರಗಳನ್ನು ತೆಗೆದು ಅಲ್ಲಿ ಹೊಸದಾಗಿ ಸಸಿ ನೆಡಲಾಗುವುದು. ಇದರಿಂದ ಪರಿಸರಕ್ಕೆಯಾವುದೇ ಹಾನಿಯಾಗುವುದಿಲ್ಲ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ನಗರಸಭೆ ಸದಸ್ಯರಾದ ವೆಂಕಟೇಶ್,ಹರೀಶ್ ಚಂದ್ರಶೇಖರ್, ಮಾಜಿ ಸದಸ್ಯರಾದಸಿ.ಟಿ.ಕೃಷ್ಣಮೂರ್ತಿ, ವೆಂಕಟೇಶ್, ಸಾಹಿತಿಶ್ರೀಶೈಲಾರಾಧ್ಯ, ಬಿಜೆಪಿ ರಾಘವೇಂದ್ರ, ಜಗದೀಶ್, ಮೋಹನ್, ನಾಗರಾಜ್ ಬೇದ್ರೆ ವಿರೂಪಾಕ್ಷಪ್ಪ,ರಮೇಶ್, ಬಕ್ಕೇಶ್, ನಾಗರಾಜ್, ಪೌರಾಯುಕ್ತಹನುಮಂತರಾಜು, ಇಂಜಿನಿಯರ್ ಮನೋಹರ್, ಕಿರಣ, ವೀರೇಶ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ