ರಥದ ಗಾಲಿ ಪೂಜೆ-ಗುಗ್ಗ ರಿ ಹಬ್ಬ
Team Udayavani, Mar 16, 2021, 8:26 PM IST
ನಾಯಕನಹಟ್ಟಿ: ತಿಪ್ಪೇರುದ್ರಸ್ವಾಮಿ ಜಾತ್ರೆ ಅಂಗವಾಗಿ ರಥದ ಗಾಲಿ ಪೂಜೆ ಹಾಗೂ ಗುಗ್ಗರಿ ಹಬ್ಬ ಸೋಮವಾರ ಸಂಭ್ರಮದಿಂದ ನೆರವೇರಿತು. ಮಾ. 29 ರಂದು ಜರುಗಲಿರುವ ಜಾತ್ರೆಯ ಮೊದಲ ಹಂತವಾಗಿ ರಥದ ಗಾಲಿಗಳ ಪೂಜೆ ನೆರವೇರಿಸಲಾಯಿತು.
ಹೊರಮಠ ಹಾಗೂ ಒಳಮಠಗಳಲ್ಲಿ ಹುರುಳಿ ಕಾಳು (ಗುಗ್ಗುರಿ) ಬೇಯಿಸಲಾಯಿತು. ಹೊರಮಠದಲ್ಲಿ ಸುಮಾರು 2 ಕ್ವಿಂಟಲ್ ಹುರುಳಿಯನ್ನು ಬೆರಣಿ (ಒಣಗಿಸಿದ ಸಗಣಿ) ಬಳಸಿ ಬೇಯಿಸುವುದು ವಿಶೇಷ. ದೇವರ ಎತ್ತುಗಳಿರುವ ಬೊಮ್ಮದೇವರಹಟ್ಟಿ, ನಲಗೇತನಹಟ್ಟಿ ಸೇರಿದಂತೆ ನಾನಾ ಸ್ಥಳಗಳಿಂದ ಸುಮಾರು 20 ಕ್ವಿಂಟಲ್ ಬೆರಣಿ ತರಲಾಗಿತ್ತು. ಬೆರಣಿಯ ಬೆಂಕಿಯಿಂದ ಹುರುಳಿಯನ್ನು ಬೇಯಿಸಲಾಯಿತು.
ಬೆರಣಿ ಸುಟ್ಟ ನಂತರ ದೊರೆಯುವ ಬೂದಿಯನ್ನು (ಭಸ್ಮ) ದೇವಾಲಯಕ್ಕೆ ಪ್ರತಿ ದಿನ ಆಗಮಿಸುವ ಭಕ್ತರಿಗೆ ನೀಡಲಾಗುವುದು. ಭಕ್ತಾದಿಗಳು ಈ ಭಸ್ಮವನ್ನು ತಮ್ಮ ಹೊಲಗಳಿಗೆ ಚಿಮುಕಿಸುವ ಸಂಪ್ರದಾಯವಿದೆ. ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಇದೇ ಭಸ್ಮವನ್ನು ಹಣೆಗೆ ಹಚ್ಚಿಕೊಳ್ಳುತ್ತಾರೆ. ಗಾಲಿ ಪೂಜೆಯ ದಿನ ತಯಾರಿಸಿದ ಈ ಭಸ್ಮವನ್ನು ಇಡೀ ವರ್ಷ ದೇವಾಲಯದಲ್ಲಿ ಬಳಸಲಾಗುತ್ತದೆ.
ಸೋಮವಾರದ ವಾರೋತ್ಸವ ಹಾಗೂ ಗಾಲಿ ಪೂಜೆಯ ನಂತರ ಬೇಯಿಸಿದ ಹುರುಳಿಯನ್ನು ಪ್ರಸಾದವಾಗಿ ವಿತರಿಸಲಾಯಿತು. ಮಾ. 22 ರಿಂದ ಕಂಕಣ ಧಾರಣೆ ಕಾರ್ಯಕ್ರಮಗಳೊಂದಿಗೆ ಜಾತ್ರೆಯ ಧಾರ್ಮಿಕ ವಿ ಧಿಗಳು ಆರಂಭವಾಗಲಿವೆ. ದೇವಾಲಯದ ಇಒ ಮಂಜುನಾಥ ಬಿ. ವಾಲಿ, ಸಿಬ್ಬಂದಿ ಸತೀಶ, ಮುಖಂಡರಾದ ಕೆ. ತಿಪ್ಪೇರುದ್ರಪ್ಪ, ಜೆ.ಪಿ. ರವಿಶಂಕರ್, ದೊರೆ ತಿಪ್ಪೇಸ್ವಾಮಿ, ತಿಪ್ಪೇರುದ್ರಪ್ಪ, ಟಿ. ರುದ್ರಮುನಿ, ಡಿ. ಭೋಗೇಶ್, ಕಾಂತರಾಜ್, ದಳವಾಯಿ ರುದ್ರಮುನಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ