ವಾಣಿವಿಲಾಸ ಸಾಗರದಲ್ಲಿ 107 ಅಡಿ ನೀರು ಸಂಗ್ರಹ
Team Udayavani, Sep 15, 2021, 2:18 PM IST
ಹಿರಿಯೂರು: ಬಯಲುಸೀಮೆಯ ಜೀವನಾಡಿವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವವಾಣಿವಿಲಾಸ ಸಾಗರದಲ್ಲಿ ಪ್ರಸಕ್ತ ಸಾಲಿನಲ್ಲಿ ಸೆ. 13ರಂದು 107 ಅಡಿ ನೀರು ಹರಿದು ಬಂದಿದೆ.
ಹತ್ತುವರ್ಷಗಳ ಬಳಿಕ ನೀರಿನ ಮಟ್ಟ 107 ಅಡಿ ಇದೆ.ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿಸುತ್ತಮುತ್ತ, ಕಡೂರು, ಬೀರೂರು, ಅಜ್ಜಂಪುರ,ತರೀಕೆರೆ, ಹೊಸದುರ್ಗ ತಾಲೂಕಿನಾದ್ಯಂತ ಸುರಿದಮಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಯಲ್ಲಿಅಜ್ಜಂಪುರ ಸಮೀಪದ ಪಂಪ್ ಹೌಸ್ ನಿಂದ ನಿತ್ಯನೀರನ್ನು ಲಿಫ್ಟ್ ಮಾಡುತ್ತಿರುವುದರಿಂದಾಗಿ ಬಹುತೇಕಕೆರೆ ಕಟ್ಟೆ, ಬ್ಯಾರೇಜ್ ಗಳು ಭರ್ತಿಯಾಗಿವೆ.
ಈ ನೀರುವಾಣಿ ವಿಲಾಸ ಸಾಗರಕ್ಕೆ ಹರಿದು ಬರುತ್ತಿದೆ. ಮುಂದಿನಒಂದು ವಾರದಲ್ಲಿ 110 ಅಡಿಗೆ ಹೆಚ್ಚುವ ನಿರೀಕ್ಷೆಯಿದೆ ಎಂಬುದು ನೀರಾವರಿ ಇಲಾಖೆ ಅಧಿ ಕಾರಿಗಳಅಭಿಪ್ರಾಯ.ಗುಡ್ಡ, ಬೆಟ್ಟಗಳ ಮಧ್ಯ ಸ್ವಾಭಾವಿಕವಾಗಿನಿರ್ಮಿಸಿರುವ ವಾಣಿವಿಲಾಸ ಸಾಗರಕ್ಕೆ ಹೆಚ್ಚಿನನೀರು ಹರಿದು ಬಂದಿರುವುದರಿಂದ ನೋಡಲುನಯನ ಮನೋಹರವಾಗಿದೆ. ಡ್ಯಾಂ ಬಳಿಇರುವ ಔಷಧ ವನ ಕೂಡ ನೋಡುಗರಿಗೆ ಖುಷಿನೀಡುತ್ತದೆ.
ಹಿರಿಯೂರು ಪಟ್ಟಣದಿಂದಹೊಸದುರ್ಗ ರಸ್ತೆಯಲ್ಲಿ 17 ಕಿಮೀ ಸಾಗಿದರೆಸಿಗುವುದೇ ಭಾರತದ ಭೂಪಟವನ್ನು ಹೋಲುವವಾಣಿವಿಲಾಸ ಸಾಗರ ಸಿಗುತ್ತದೆ. ಕೊರೊನಾಸಂಕಷ್ಟದಲ್ಲಿ ಉದ್ಯೋಗ ಕಳೆದುಕೊಂಡು ಹಳ್ಳಿಗಳಕಡೆ ಮುಖ ಮಾಡಿರುವ ಯುವಕರಿಗೆ ತುಂಬಿಹರಿಯುತ್ತಿರುವ ವಾಣಿವಿಲಾಸ ಸಾಗರ ಕೃಷಿಚಟುವಟಿಕೆಗಳಲ್ಲಿ ತೊಡಗಲು ಪ್ರೇರಣೆ ನೀಡಿದೆ.ಇದರಿಂದ ತಾಲೂಕಿನಲ್ಲಿ ಮತ್ತೆ ಹಸಿರು ಪರಿಸರಸೃಷ್ಟಿಯಾಗುವ ಆಸೆ ಚಿಗುರೊಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ