ವಿಜೃಂಭಣೆಯ ಮುತ್ತಿನ ಪಲ್ಲಕ್ಕಿ ಉತ್ಸವ
ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮ-ಮೆರವಣಿಗೆ
Team Udayavani, Jan 11, 2020, 4:15 PM IST
ಹೊಸದುರ್ಗ: ಪಟ್ಟಣದ ಕೋಟೆ ಬನಶಂಕರಿದೇವಿಯ ಮುತ್ತಿನ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ವೈಭವದಿಂದ ನಡೆಯಿತು.
ಬನದ ಹುಣ್ಣಿಮೆ ಅಂಗವಾಗಿ ಬನಶಂಕರಿದೇವಿ ದೇಗುಲದಲ್ಲಿ ಬೆಳಗ್ಗೆಯಿಂದಲೂ ಪಂಚಾಮೃತ ಅಭಿಷೇಕ, ಅಷ್ಟೋತ್ತರ ನಿವೇದನೆ, ಪುಣ್ಯಾಃ, ಕಳಶ ಪ್ರತಿಷ್ಠಾಪನೆ, ಹೋಮ ಹವನ, ಪೂರ್ಣಾಹುತಿ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯ ಕ್ರಮಗಳು ಶ್ರದ್ಧಾ ಭಕ್ತಿಯಿಂದ ಜರುಗಿದವು.
ಶುಕ್ರವಾರ ಸಂಜೆ ತೆರೆದ ವಾಹನದಲ್ಲಿ ಅಲಂಕೃತ ಮುತ್ತಿನ ಪಲ್ಲಕ್ಕಿಗೆ ಬಣ್ಣ, ಬಣ್ಣದ ಹೂಗಳಿಂದ ಶೃಂಗಾರಗೊಳಿಸಿದ್ದ ಬನಶಂಕರಿ ಪ್ರತಿಮೆ ಪ್ರತಿಷ್ಠಾಪಿಸಲಾಯಿತು. ನಂತರ ಧೂಪಸೇವೆ, ಚಾಮರಸೇವೆ, ಮಣೇವು, ಗುಂಡಿನ ಚಾಟಿ, ಕತ್ತಿವರಸೆ, ಈಡುಗಾಯಿ ಸೇವೆ, ಮಹಾಮಂಗಳಾರತಿ ಪೂಜೆ ನೆರವೇರಿದವು. ಬಳಿಕ ಭಕ್ತರ ಬನಶಂಕರಿ ದೇವಿ ಉಘೇ, ಉಘೇ ಎಂಬ ಘೋಷಣೆ ಮೊಳಗಿತ್ತು.
ತಾಲೂಕು ಸಂಘದ ಅಧ್ಯಕ್ಷ ಗೋ.ತಿಪ್ಪೇಶ್, ದೇವಾಂಗ ಸಮಾಜದ
ಅಧ್ಯಕ್ಷ ಡಿ.ಆರ್.ಗೋವಿಂದರಾಜು, ಬನಶಂಕರಿ ಬ್ಯಾಂಕ್ ಅಧ್ಯಕ್ಷ ಡಿ.ಆರ್ .ನಾಗೇಶಪ್ಪ, ಉಪಾಧ್ಯಕ್ಷ ಚಿದಾನಂದ್, ಆಸಂದಿಪ್ರಕಾಶ್, ಗೌಡ್ರು ಶ್ರೀನಿವಾಸಯ್ಯ, ಬೊಮ್ಮಣ್ಣ, ಟಿ.ಮಂಜುನಾಥ್, ಪುರಸಭೆ ಸದಸ್ಯರಾದ ದಾಳಿಂಬೆ ಗಿರೀಶ್, ರಾಮಚಂದ್ರ, ರಾಮಚಂದ್ರಪ್ಪ, ಜ್ಯೋತಿ, ಗೀತಾ, ಸಪ್ತಗಿರಿ ಗುರು ಹಾಜರಿದ್ದರು.
ತಾಲೂಕಿನ ಇತಿಹಾಸ ಪ್ರಸಿದ್ಧ ನೀರಗುಂದ, ಬೆಲಗೂರು, ಶ್ರೀರಾಂಪುರ, ಹೊನ್ನೇನಹಳ್ಳಿ, ದೊಡ್ಡತೇಕಲವಟ್ಟಿ ಸೇರಿ ಇನ್ನಿತರ ಗ್ರಾಮಗಳಲ್ಲಿ ನೆಲೆಸಿರುವ ಬನಶಂಕರಿ ದೇವಿ ಆರಾಧಕರು ಬನದಹುಣ್ಣಿಮೆ ಹಬ್ಬ ಆಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ
Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ
MUST WATCH
ಹೊಸ ಸೇರ್ಪಡೆ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?