ಭಗವದ್ಗೀತೆ ಅಧ್ಯಯನ ಭಾರತೀಯರ ಕರ್ತವ್ಯ
Team Udayavani, Apr 11, 2022, 4:23 PM IST
ಮೊಳಕಾಲ್ಮೂರು: ಭಾರತೀಯ ಜೀವನ ಪದ್ಧತಿಯಲ್ಲಿ ಹಾಸುಹೊಕ್ಕಾಗಿರುವ ಭಗವದ್ಗೀತೆಯ ಜತೆಗೆ ಗ್ರಂಥಗಳನ್ನೂ ಅಧ್ಯಯನ ಮಾಡಬೇಕು ಎಂದು ಆರ್ಎಸ್ಎಸ್ ಕರ್ನಾಟಕದ ದಕ್ಷಿಣ ಪ್ರಾಂತ್ಯದ ಸಹಪ್ರಾಂತ ಬೌದ್ಧಿಕ್ ಪ್ರಮುಖ್ ಕೃಷ್ಣಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಕ್ಷೇತ್ರ ಮಾದರಿ ಬಾಲಕರ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಆಯೋಜಿಸಿದ್ದ ಪಥಸಂಚಲನ ಸಂದರ್ಭದಲ್ಲಿ ಅವರು ಮಾತನಾಡಿದರು. ಜಗತ್ತಿನ ಎಲ್ಲಾ ಮತಗಳಲ್ಲಿ ಶ್ರೇಷ್ಠ ವಿಚಾರಗಳಿದ್ದು ಕಾಲ ಕಾಲಕ್ಕೆ ತಪ್ಪುಗಳು ನುಸುಳಿಕೊಂಡಿವೆ. ಭಗವಾನ್ ಶ್ರೀಕೃಷ್ಣ, ಮಹಮ್ಮದ್ ಪೈಗಂಬರ್, ಏಸು ಕ್ರಿಸ್ತರು ಸತ್ಯವನ್ನೇ ಹೇಳಿದ್ದಾರೆ.
ಭಾರತವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಹೊರದೇಶದ ಕುರಾನ್ ಹಾಗೂ ಬೈಬಲ್ ಅರ್ಥ ಮಾಡಿಕೊಂಡರೆ ಸಾಲದು, ಭಾರತದ ಜೀವನ ಪದ್ಧತಿ, ಮಾತೃದೇವೋಭವ, ಪಿತೃದೇವೋಭವ, ಅತಿಥಿದೇವೋಭವ ಹಾಗೂ ಆಚಾರ್ಯ ದೇವೋಭವ ಎಂಬ ಧೇಯವಾಕ್ಯಗಳನ್ನು ಹಿಂದೂ ಪುರಾಣ ಗ್ರಂಥಗಳಲ್ಲಿ ಕಾಣಬಹುದು. ಹಿಂದೆ ಜಾತಿ-ಜಾತಿ ಹಾಗೂ ಭಾಷೆ-ಭಾಷೆಗಳ ನಡುವೆ ಜಗಳವಾಗುತ್ತಿತ್ತು. ಈ ಭೇದ ಭಾವವನ್ನು ನಿವಾರಿಸಿ ನಾವೆಲ್ಲರೂ ಒಂದೇ ಎಂಬ ಮನೋಭಾವ ಮೂಡಿಸಲು ಡಾ| ಕೇಶವ ಬಲರಾಮ್ ಹೆಗಡೆವಾರ್ ಶ್ರಮಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಇಡೀ ಜಗತ್ತಿಗೆ ಪರಿಚಿತ ಸಂಘಟನೆಯಾಗಿದೆ. ಶಿಕ್ಷಣ ಹಾಗೂ ಶಿಸ್ತಿನ ಕಾರಣದಿಂದ ವಿಶ್ವ ವ್ಯಾಪಿಯಾಗಿ ಬೆಳೆದಿದೆ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಜಿಲ್ಲಾ ಕಾರ್ಯವಾಹ ನಾಗರಾಜ್, ಸ್ವಯಂಸೇವಕರಾದ ಡಿ.ಎಂ. ಈಶ್ವರಪ್ಪ, ಜಯಪಾಲ್, ಡಾ| ಪಿ.ಎಂ. ಮಂಜುನಾಥ, ಪಪಂ ಅಧ್ಯಕ್ಷ ಪಿ. ಲಕ್ಷ್ಮಣ, ಟಿ.ಟಿ. ರವಿಕುಮಾರ್, ಕೆ. ತಿಪ್ಪೇಸ್ವಾಮಿ, ಬಿ.ಎನ್. ಮಂಜಣ್ಣ, ಶಾಂತಾರಾಂ ಬಸಾಪತಿ, ಕಿರಣ್ ಗಾಯಕವಾಡ್, ರಾಘವೇಂದ್ರ, ಕರಿಬಸಪ್ಪ, ನರೇಂದ್ರಬಾಬು, ಶ್ರೀರಾಮ ರೆಡ್ಡಿ, ಸಿದ್ಧಾರ್ಥ, ಅರ್ಜುನ್, ಭೀಮಣ್ಣ, ಪಿ.ಆರ್. ಸಿದ್ದಣ್ಣ, ಟೈಲರ್ ತಿಪ್ಪೇಸ್ವಾಮಿ, ಉಮೇಶ್ ಆಚಾರ್, ಕೆ.ಪಿ. ಗೋಪಾಲ್, ನವೀನ್ಕುಮಾರ್, ರಾಮಾಂಜನೇಯ, ಅಂಜಿನಪ್ಪ, ಹೊನ್ನಪ್ಪ, ಅಶ್ವಿನಿ ಮೊದಲಾದವರು ಭಾಗಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ