ಗ್ರಹಣ ಕಾಲೇ ಪಾಣಿಗ್ರಹಣ…!


Team Udayavani, Jul 28, 2018, 12:25 PM IST

cta-2.jpg

ಚಿತ್ರದುರ್ಗ: ಆಷಾಢ ಮಾಸದಲ್ಲಿ ಯಾವುದೇ ಶುಭಕಾರ್ಯಗಳನ್ನು ಮಾಡಲ್ಲ. ಅದರಲ್ಲೂ ಮದುವೆಯನ್ನಂತೂ ಮಾಡೊದೇ ಇಲ್ಲ. ಹೊಸದಾಗಿ ಮದುವೆಯಾದ ದಂಪತಿಗಳೂ ಸಹ ಇದೊಂದು ಮಾಸ ಬೇರೆ ಬೇರೆ ಇರುತ್ತಾರೆ. ಇಂತಹ ಆಷಾಢ ಮಾಸದ ಚಂದ್ರಗ್ರಹಣದ ದಿನ ಮುರುಘಾಮಠದಲ್ಲಿ ಮದುವೆಯೊಂದು ನಡೆದಿದೆ.!

ಹೌದು. ಹಲವು ಹೊಸತನಕ್ಕೆ ನಾಂದಿ ಹಾಡಿದ ಮುರುಘಾ ಮಠ ಶುಕ್ರವಾರ ಮತ್ತೂಂದು ವಿಶೇಷಕ್ಕೆ ಸಾಕ್ಷಿಯಾಗಿದೆ. ಮುರುಘಾ ಶರಣರ ಸಮ್ಮುಖದಲ್ಲಿ ಯುವಪ್ರೇಮಿಗಳು ಪಾಣಿಗ್ರಹಣ ಮಾಡಿದ್ದಾರೆ.

ಗ್ರಹಣ ಸಮಯದಲ್ಲಿ ಮನೆಯಲ್ಲಿ ಮಾಡಿಟ್ಟ ಅಡುಗೆ, ಕೂಡಿಟ್ಟಿದ್ದ ನೀರು ಎಲ್ಲವನ್ನು ಹೊರ ಚೆಲ್ಲಿ ಬರೀ ಹೊಟ್ಟೆಯಲ್ಲಿ ಮಲಗುವುದು, ಜನ ಜಾನುವಾರುಗಳಿಗೆ ಗ್ರಹಣದ ದಿನದಂದು ತೊಂದರೆ ಆಗದಂತೆ ಜಾನುವಾರುಗಳ ಮೈ ಮೇಲೆ ಚಂದ್ರ ಸೂರ್ಯರನ್ನು ಸುಣ್ಣದಲ್ಲಿ ಬರೆದು ರಕ್ಷಣೆ ಮಾಡುವುದನ್ನು ನೋಡಿದ್ದೇವೆ. ಆದರೆ ಇದೆಲ್ಲವನ್ನು ಮೀರಿ ವೈಚಾರಿಕ ಚಿಂತಕ ಡಾ| ಶಿವಮೂರ್ತಿ ಮುರುಘಾ ಶರಣರು ರಕ್ತ ಚಂದ್ರ ಗ್ರಹಣದಲ್ಲಿ ಮದುವೆ ಮಾಡಿಸುವ ಮೂಲಕ ಮೌಢಾಚರಣೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ಗ್ರಹಣದ ದಿನ ಮದುವೆಯಾದ ವಧು-ವರರು ಒಂದೇ ಕೋಮಿ(ಜಾತಿ)ಗೆ ಸೇರಿದ್ದು, ಪರಸ್ಪರ ಪ್ರೀತಿಸುತ್ತಿದ್ದರು. ವರನ ಕಡೆಯವರಿಗೆ ಸಂಪೂರ್ಣ ಒಪ್ಪಿಗೆ ಇದ್ದು ವಧುವಿನ ಕಡೆಯವರಿಗೆ ಈ ರೀತಿಯ ಮದುವೆ ಇಷ್ಟವಿರಲಿಲ್ಲ ಎನ್ನಲಾಗುತ್ತಿದೆ. ಆದರೆ, ಮುರುಘಾ ಮಠದ ಸ್ವಾಮೀಜಿಗಳು ನೇತೃತ್ವ ವಹಿಸಿ ಮುಂದೆ ನಿಂತು ಗ್ರಹಣದ ದಿನ ಮದುವೆ ಮಾಡಿಸಿದ್ದು ಮಾತ್ರ ಇತಿಹಾಸದಲ್ಲೊಂದು ಮೈಲುಗಲ್ಲು. 

ಹಿರಿಯೂರು ತಾಲೂಕಿನ ಹೂವಿನಹೊಳೆ ಗ್ರಾಮದ ಶೋಷಿತ ಬುಡಕಟ್ಟು ಸಮುದಾಯದ ಮರಡಿ ರಂಗ ನಾಯಕ(28) ಮತ್ತು ಅದೇ ಗ್ರಾಮದ ವಧು, ಬಿಕಾಂ ಪದವೀಧರೆ ವಸಂತಾ(22) ಗ್ರಹಣದ ದಿನ ಸಪ್ತಪದಿ ತುಳಿದಿದ್ದಾರೆ.

ಈ ಇಬ್ಬರು ಯುವ ಪ್ರೇಮಿಗಳು ಕಳೆದ ಏಳು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆ ಆದರೆ ಇವರೊಟ್ಟಿಗೆ ಆಗಬೇಕೆಂದು
ಇಬ್ಬರೂ ನಿರ್ಧರಿಸಿದರು. ಒಂದೇ ಜಾತಿ ಮತ್ತು ಸಂಬಂಧಿಗಳೇ ಆಗಿದ್ದರಿಂದ ಎರಡೂ ಕುಟುಂಬಗಳ ಸಂಪೂರ್ಣ ಆಶೀರ್ವಾದ ಸಿಗುವ ಬಲವಾದ ನಂಬಿಕೆ ಇಬ್ಬರಲ್ಲೂ ಇತ್ತು. ಆದರೆ ವರನ ಕಡೆಯವರು ಮಾತ್ರ ಸಂಭ್ರಮದಿಂದ ಮದುವೆಯಲ್ಲಿ ಪಾಲ್ಗೊಂಡಿದ್ದರೆ ವಧುವಿನ
ಕಡೆಯವರ ಸುಳಿವು ಇರಲಿಲ್ಲ.

ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಜಿಲ್ಲಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಕಾರ್ಯದರ್ಶಿ ಎಚ್‌.ಎಸ್‌.ಟಿ.ಸ್ವಾಮಿ ಮತ್ತಿತರರಿದ್ದರು. ಮುರುಘಾಮಠದಲ್ಲಿ ಸಂಪೂರ್ಣ ಚಂದ್ರ ಗ್ರಹಣದ ಪ್ರಯುಕ್ತ ಶುಕ್ರವಾರ ಹಮ್ಮಿಕೊಂಡಿದ್ದ ಲಿಂಗದೀಕ್ಷೆ ಮತ್ತು ಕಲ್ಯಾಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದ ಡಾ|ಶಿವಮೂರ್ತಿ ಮುರುಘಾ ಶರಣರು, ಮಾನವ ಜನಾಂಗಕ್ಕೆ ಒಕ್ಕರಿಸಿರುವ ಪಂಚಾಂಗ, ಶುಭ ದಿನ ಎನ್ನುವ ಮೌಡ್ಯದ ಗ್ರಹಣ ಬಿಡುಗಡೆ ಆಗಬೇಕಿದೆ
ಎಂದರು. ಸೂರ್ಯಗ್ರಹಣ, ಚಂದ್ರಗ್ರಹಣವು ಈ ಜಗತ್ತಿನ ಅಪೂರ್ವ ಸಂಗತಿ. ಗ್ರಹಣ ಸಂಭವಿಸುವುದು ಎಂದರೆ ನಿಸರ್ಗದ ವಿಸ್ಮಯ ಹಾಗೂ ಅದ್ಭುತಗಳು. ಅಂತಹ ಅಪರೂಪದ ಸನ್ನಿವೇಶ ನೋಡಿ ಖುಷಿ ಪಡಬೇಕು. ಆಷಾಢ ಮಾಸ, ಹುಣ್ಣಿಮೆ, ಅಮಾವಾಸ್ಯೆ, ಶುಭ ಅಶುಭ, ಮಂಗಳ ಅಮಂಗಳ ಅನ್ನುವ ಮೌಡ್ಯ ಬಿಡಬೇಕು.

ಉತ್ತಮ ಕಾರ್ಯಗಳಿಗೆ ಪ್ರತಿ ಕ್ಷಣ, ಪ್ರತಿ ದಿನ ಎಲ್ಲವೂ ಮಂಗಳವೇ. ಸರ್ವವೂ ಶುಭ ಕಾರ್ಯವೇ ಎಂದು ತಿಳಿಸಿದರು. ದೇಶದ ಜನತೆ ಬ್ರಿಟಿಷರ ದಾಸ್ಯದಿಂದ ಹೊರಬಂದರೂ ಪಂಚಾಂಗ, ಶುಭಗಳಿಗೆ ಎಂಬ ಮೌಡ್ಯ ದಾಸ್ಯದಿಂದ ಹೊರಬಂದಿಲ್ಲ ಇದು ವಿಪರ್ಯಾಸದ ಸಂಗತಿ. ಪಂಚಾಂಗ ಹಿಡಿದು ಕೆಲ ಜ್ಯೋತಿಷಿಗಳು ಸಮಾಜದಲ್ಲಿ ಭೀತಿಯ ಬೀಜ ಬಿತ್ತಿ ಮುಗ ಜನತೆಯನ್ನು ಪಾಪದ ಕೂಪಕ್ಕೆ ತಳ್ಳಿ ಹಾಳು ಮಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು. ಸೂರ್ಯ, ಚಂದ್ರ ಗ್ರಹಣಗಳು ನೂರಾರು ವರ್ಷಗಳಿಂದ ನಡೆಯುತ್ತ ಬಂದಿದೆ. 

ನಾವು ನೋಡುತ್ತಲೇ ಪ್ರಸಾದ ಮಾಡಿದೆವು. ಆದರೆ ಏನೂ ಆಗಲಿಲ್ಲ. ಅದೊಂದು ಸಹಜ ಕ್ರಿಯೆ. ಆದರೆ ಮಾಧ್ಯಮಗಳು ಹುಟ್ಟಿಸುತ್ತಿರುವ ಭಯದ ಪ್ರಸಾರದಿಂದ ಜನರಲ್ಲಿ ಭೀತಿ ಉಂಟಾಗಿದೆ ಎಂದರು

ದೇವರನ್ನು ಭಕ್ತಿಯಿಂದ ಪೂಜಿಸುತ್ತೇನೆ. ಅಷ್ಟೇ ನಂಬಿಕೆಯೂ ಇದೆ. ಆದರೆ ಶಾಸ್ತ್ರ, ಸಂಬಂಧ, ಕಂಕಣ ದಿನ ಎನ್ನುವ ಮೌಡ್ಯ, ಕಂದಚಾರಗಳನ್ನು ಒಪ್ಪುವುದಿಲ್ಲ. ಹಾಗಾಗಿ ಚಂದ್ರ ಗ್ರಹಣದ ದಿನ ಇಬ್ಬರು ಒಪ್ಪಿ ಮದುವೆ ಮಾಡಿಕೊಂಡಿದ್ದೇವೆ.
●ಮರಡಿ ರಂಗ ನಾಯಕ, ವರ

ಟಾಪ್ ನ್ಯೂಸ್

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Tragedy: ಗೋಕರ್ಣಕ್ಕೆ ಹೊರಟಿದ್ದ ಬಸ್ ಪಲ್ಟಿ: ಮೂವರು ಸ್ಥಳದಲ್ಲೇ ಮೃತ್ಯು, 38 ಮಂದಿಗೆ ಗಾಯ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

19-kushtagi

Kushtagi:ವಿದ್ಯುತ್‌ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ

18=

Festivals: ಹಬ್ಬಗಳು ಮರೆಯಾಗುತ್ತಿವೆಯೇ?

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.