ಕೆರೆ ನಿರ್ಮಾಣಕ್ಕೆ ಒತ್ತು : ಚಂದ್ರಪ್ಪ
Team Udayavani, Mar 3, 2021, 6:29 PM IST
ಹೊಳಲ್ಕೆರೆ: ಜೀವಜಲ ಉಳಿಸುವ ನಿಟ್ಟಿನಲ್ಲಿ ತಾಲೂಕಿನಲ್ಲಿ ಕೆರೆ ನಿರ್ಮಾಣಕ್ಕೆ ಒತ್ತು ನೀಡಿಲಾಗಿದ್ದು, ತಾಲೂಕಿನ ಕಡೂರು ಅಂತಾಪುರದ ಕಾವಲ್ ಭಾಗದಲ್ಲಿ 1 ಕೋಟಿ ಅನುದಾನದ ಕೆರೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ತಾಲೂಕಿನ ಕಡೂರು ಹಾಗೂ ಅಂತಾಪುರ ಕಾವಲ್ನಲ್ಲಿ ನಿರ್ಮಾಣ ಹಂತದಲ್ಲಿರುವ ಕೆರೆ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಎಲ್ಲಾ ಜೀವಿಗಳಿಗೆ ಅಗತ್ಯವಾದ ರುಚಿ ಸಹಿತವಾದ ಶುದ್ಧ ಕುಡಿಯುವ ನೈಸರ್ಗಿಕವಾಗಿ ನೀರು ಕಲ್ಪಿಸಲು ಸರಕಾರ ಸಾಕಷ್ಟು ಯೋಜನೆ ರೂಪಿಸುವ ಮೂಲಕ ನಾಗಕರಿಕ ಸಮಾಜಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಿದೆ ಎಂದರು.
ಬರದ ನಾಡು ಎನ್ನುವ ಖ್ಯಾತಿಯಿಂದ ಹತ್ತಾರು ವರ್ಷಗಳಿಂದ ಕಡೂರು ಅಂತಾಪುರ ಗ್ರಾಮಗಳಿಲ್ಲಿ ಕುಡಿಯುವ ನೀರು ಎನ್ನುವುದು ಇಲ್ಲಿನ ಜನರಿಗೆ ಮರೀಚಿಕೆ ಎನ್ನುವಂತ ಸ್ಥಿತಿ ಇತ್ತು. ಇತ್ತೀಚೆಗೆ ಸರಕಾರಿ ಸೌಲಭ್ಯಗಳನ್ನು ಭರಪೂರವಾಗಿ ಕಲ್ಪಿಸಿಕೊಟ್ಟಿರುವ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ನೀರು ಹರಿದು ಬರುತ್ತಿದೆ. ಅದರೂ ಅಂತರ್ಜಲ ಕುಸಿದಾಗ ಕೊಳವೆ ಬಾವಿಗಳು ಬತ್ತಿ ನೀರಿಲ್ಲದೆ ಪರಿತಪಿಸುವಂತಹ ಸ್ಥಿತಿ ಸಾಮಾನ್ಯವಾಗಲಿದೆ. ಕೆರೆಗಳ ಕಟ್ಟುವುದು, ಅಭಿವೃದ್ಧಿಗೆ ಒತ್ತು ನೀಡುವುದು. ಹರಿಯುವ ನೀರು ತಡೆಯುವುದು ಸೇರಿದಂತೆ ನೀರು ನಿಲ್ಲಿಸುವ ಕೆಲಸಗಳನ್ನು ಹೆಚ್ಚಾಗಿ ಮಾಡುವ ಮೂಲಕ ಮುಂದಿನ ಪೀಳಿಗೆಗೆ ನೀರು ಉಳಿಸಲು ಸಂರಕ್ಷಣೆ ಮಾಡಬೇಕಿದೆ ಎಂದರು. ಜಿ.ಪಂ ಸದಸ್ಯ ಎಂ.ಬಿ.ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್ಪೋಸ್ಟ್ಗಳಲ್ಲಿ ತಪಾಸಣೆ
Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ