ಪಡಿತರ ಕಾರ್ಡ್ ನೀಡಲು ಮಹಿಳೆಯರ ಮನವಿ
Team Udayavani, Apr 23, 2020, 5:39 PM IST
ಮೊಳಕಾಲ್ಮೂರು: ಪಟ್ಟಣದ ಕನಕಯ್ಯನಹಟ್ಟಿಯ ಮಹಿಳೆಯರು ವಿಪತ್ತು ನಿರ್ವಹಣಾ ಸಿಬ್ಬಂದಿ ಟಿ.ಎಂ.ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.
ಮೊಳಕಾಲ್ಮೂರು: ಪಟ್ಟಣದ ಕನಕಯ್ಯನಹಟ್ಟಿಯಲ್ಲಿ ಪಡಿತರ ಆಹಾರ ಧಾನ್ಯಗಳಿಗಾಗಿ ಪಡಿತರ ಕಾರ್ಡ್ ಸೌಲಭ್ಯ ಕಲ್ಪಿಸಬೇಕೆಂದು ಪಡಿತರ ಕಾರ್ಡ್ ಇಲ್ಲದ ಮಹಿಳೆಯರು ವಿಪತ್ತು ನಿರ್ವಹಣಾ ಸಿಬ್ಬಂದಿಯಲ್ಲಿ ಮನವಿ ಮಾಡಿಕೊಂಡರು.
ಕನಕಯ್ಯನಹಟ್ಟಿಯ ಪಡಿತರ ಕಾರ್ಡ್ ವಂಚಿತ ಮಹಿಳೆ ಶಕುಂತಲಮ್ಮ ಮತ್ತು ಕವಿತಾ ಮಾತನಾಡಿ, ಈ ಬಡಾವಣೆಯಲ್ಲಿ ನೆಲೆಸಿ ಸುಮಾರು 2 ವರ್ಷಗಳಾಗಿವೆ. ಇದುವರೆಗೂ ಪಡಿತರ ಕಾರ್ಡ್ ಸೌಲಭ್ಯವಿಲ್ಲದೆ ನಮ್ಮ ಕುಟುಂಬ ಜೀವನ ಸಾಗಿಸುತ್ತಿದೆ. ಪಡಿತರ ಕಾರ್ಡ್ ಗಾಗಿ ಕಚೇರಿಗೆ ಅಲೆದಾಡಿದರೂ ಪಡಿತರ ಕಾರ್ಡ್ ಸೌಲಭ್ಯ ಸಿಗದೆ ಪಡಿತರ ಆಹಾರ ಧಾನ್ಯಗಳ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಕೂಲಿ ಕೆಲಸದಿಂದ ಜೀವನ ಸಾಗಿಸಲಾಗುತ್ತಿದ್ದು, ಕೋವಿಡ್ ವೈರಸ್ ಭೀತಿಯಿಂದ ಕೂಲಿ ಕೆಲಸವಿಲ್ಲದೆ ಕುಟುಂಬದ ನಿರ್ವಹಣೆಯೂ ಕಷ್ಟವಾಗಿದೆ. ಹಾಗಾಗಿ ನಮ್ಮ ಕುಟುಂಬಗಳ ಜೀವನ ನಿರ್ವಹಣೆಗಾಗಿ ಪಡಿತರ ಕಾರ್ಡ್ ಸೌಲಭ್ಯ ಕಲ್ಪಿಸಬೇಕೆಂದು ಮನವಿ ಮಡಿಕೊಂಡರು. ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಸಿಬ್ಬಂದಿ ಟಿ.ಎಂ.ಅಶೋಕ್ ಅವರಿಗೆ ಮನವಿ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!
SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು
Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ
Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ
Bengaluru: ಪೇಂಟರ್ ಕೊಂದು ಪೊಲೀಸ್ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು