ದೊಡ್ಲ ಮಾರಮ್ಮ ದೇವಿ ಅದ್ಧೂರಿ ಉತ್ಸವ


Team Udayavani, Jan 9, 2020, 5:50 PM IST

9-January-33

ನಾಯಕನಹಟ್ಟಿ: ದೊಡ್ಲ ಮಾರಮ್ಮ ದೇವಿ ಉತ್ಸವ ಬುಧವಾರ ಸಂಭ್ರಮದಿಂದ ನೆರವೇರಿತು. 13 ವರ್ಷಗಳ ನಂತರ ಜರುಗಿದ ಉತ್ಸವಕ್ಕೆ ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳ ಸಾವಿರಾರು ಜನರು ಆಗಮಿಸಿದ್ದರು.

ಮಂಗಳವಾರ ರಾತ್ರಿ ಎನ್‌. ದೇವರಹಳ್ಳಿ ಗ್ರಾಮದಿಂದ ಆಗಮಿಸಿದ ದೊಡ್ಲ ಮಾರಮ್ಮ ದೇವಿಯನ್ನು ಗ್ರಾಮದ ಜನರು ಬರಮಾಡಿಕೊಂಡರು. ದೀರ್ಘ‌ ಕಾಲದ ನಂತರ ಆಗಮಿಸಿದ ದೇವತೆಯ ಆಗಮನಕ್ಕೆ ಸಾವಿರಾರು ಭಕ್ತರು ಕಾದು ಕುಳಿತಿದ್ದರು. ಬೆಸ್ಕಾಂ ಬಡಾವಣೆಯ ಸಮೀಪ ಕಾವಲಪ್ಪನವರ ನಿಂಗಣ್ಣನವರ ಹೊಲದ ಸಮೀಪ ದೇವಿಯನ್ನು ಬರಮಾಡಿಕೊಂಡು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನಂತರ ಪಟ್ಟಣಕ್ಕೆ ಕರೆ ತರಲಾಯಿತು. ಡೊಳ್ಳು, ತಮಟೆ ಹಾಗೂ ತ್ರಾಷ್‌ಗಳ ಸೇರಿದಂತೆ ವಿವಿಧ ವಾದ್ಯಗಳನ್ನು ಮೆರವಣಿಯಲ್ಲಿ ಬಳಸಲಾಯಿತು.

ಬುಧವಾರ ನಸುಕಿನಿಂದಲೇ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ ಅಕ್ಕಿ, ಬೇಳೆ, ಕುಂಕುಮ, ಬಳೆ ಸೇರಿದಂತೆ ಕಾಣಿಕೆ ಅರ್ಪಿಸಿದರು. ಮ್ಯಾಸ ಬೇಡರ ಹಾಗೂ ಪಶುಪಾಲಕರ ನಾನಾ ಸಂಪ್ರದಾಯಗಳಂತೆ ಪೂಜಾ ವಿಧಾನಗಳ ಜರುಗಿದವು. 13 ವರ್ಷಗಳ ನಂತರ ಜರುಗಿದ ಉತ್ಸವವಾಗಿದ್ದರಿಂದ ಪಟ್ಟಣದ ಜನರು ತಮ್ಮ ನೆಂಟರು, ಇಷ್ಟರನ್ನು ಕರೆಸಿದ್ದರು.

ಪಟ್ಟಣದಲ್ಲಿ ಪ್ರತಿ ಮನೆಗೆ ಒಂದು, ಎರಡು ಕುರಿಗಳಂತೆ ಭರ್ಜರಿ ಬಾಡೂಟ ಜರುಗಿತು. ಗ್ರಾಮ ದೇವತೆಯನ್ನು ಗುಡಿಯಿಂದ ಹೊರ ಹಾಕಿದ ನಂತರ ತಿಪ್ಪೇರುದ್ರಸ್ವಾಮಿಗಳು ದೇವಾಲಯದಲ್ಲಿ ನೆಲೆಸಿದ್ದರು. ತಾಮಸ ಶಕ್ತಿಗಳನ್ನು ಗ್ರಾಮದಿಂದ ಹೊರಹಾಕಿ, ಸಾತ್ವಿಕ ಶಕ್ತಿಗಳು ಬೆಳೆಯಬೇಕು ಎನ್ನುವ ಉದ್ದೇಶವನ್ನು ಶ್ರೀಗಳು ಹೊಂದಿದ್ದರು. ಮಾರಮ್ಮ ದೇವಿ ಮತ್ತೂಮ್ಮೆ ದೇವಾಲಯದ ಒಳಗೆ ಬರಲು ಹವಣಿಸುತ್ತಾಳೆ ಎನ್ನುವ ನಂಬಿಕೆ ಜನರಲ್ಲಿದೆ. ಹೀಗಾಗಿ ದೊಡ್ಲ ಮಾರಮ್ಮ ದೇವಿ ಉತ್ಸವದ ಮೆರವಣಿಗೆ ದೇವಾಲಯದ ಸಮೀಪ ಆಗಮಿಸುವ ಕೆಲವು ಸಮಯಕ್ಕೆ ಮುಂಚೆ ತಿಪ್ಪೇರುದ್ರಸ್ವಾಮಿ ದೇವಾಲಯದ ಗೇಟ್‌ಗಳನ್ನು ಮುಚ್ಚಲಾಯಿತು.

ನಂತರ ಮೆರವಣಿಗೆ ದೊಡ್ಲ ಮಾರಮ್ಮ ದೇವಾಲಯಕ್ಕೆ ಹೋದ ನಂತರ ದೇವಾಲಯದ ಗೇಟ್‌ನ್ನು ಪುನಃ ತೆರೆಯಲಾಯಿತು. ಕೆಲವು ಸಮಯದವರೆಗೆ ಭಕ್ತರಿಗೆ ಪ್ರಮುಖ ಗೇಟ್‌ ಮೂಲಕ ಪ್ರವೇಶ ನಿರಾಕರಿಸಲಾಗಿತ್ತು. ತಿಪ್ಪೇರುದ್ರಸ್ವಾಮಿ ದೇವಾಲಯದ ಮುಂದೆ ಬಂದಾಗ ದೇವಿ ತಮ್ಮ ಮೂಲ ದೇವಾಲಯಕ್ಕೆ ಹೋಗಲು ಪ್ರಯತ್ನ ನಡೆಸುತ್ತಾಳೆ. ಅರ್ಚಕರ ಮೂಲಕ ದೇವಿ ಪ್ರೇರೇಪಣೆ ನೀಡುತ್ತಾಳೆ ಎನ್ನುವು ನಂಬಿಕೆಯನ್ನು ಭಕ್ತರು ಹೊಂದಿದ್ದಾರೆ. ಗುರುವಾರ ದೊಡ್ಲ ಮಾರಮ್ಮ ದೇವಿ ಪುನಃ ಎನ್‌. ದೇವರಹಳ್ಳಿ ಗ್ರಾಮಕ್ಕೆ ತೆರಳಲಿದೆ.

ಟಾಪ್ ನ್ಯೂಸ್

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.