ಮರಳು ಸಾಗಣೆಗೆ ತೊರೆಬೀರನಹಳ್ಳಿ ಗ್ರಾಮಸ್ಥರ ವಿರೋಧ


Team Udayavani, Jun 5, 2018, 4:56 PM IST

cta-1.jpg

ಚಳ್ಳಕೆರೆ: ತಾಲೂಕಿನ ತೊರೆಬೀರನಹಳ್ಳಿ ಗ್ರಾಮದಲ್ಲಿ ಅಕ್ರಮ ಮರಳು ತುಂಬುವುದನ್ನು ವಿರೋಧಿಸಿ ಗ್ರಾಮಸ್ಥರು ಮರಳು ತುಂಬುವ ಜಾಗದ ಸ್ಥಳದಲ್ಲೇ ಟೆಂಟ್‌ಹಾಕಿ ಅಡುಗೆ ಮಾಡಿ ಸೋಮವಾರ ಪ್ರತಿಭಟಿಸಿದರು.

ತಾಲೂಕಿನ ಗಡಿಭಾಗದಲ್ಲಿರುವ ವೇದಾವತಿ ನದಿಪಾತ್ರದ ಗ್ರಾಮಗಳ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನಾವು ವೇದಾವತಿ ನದಿಯ ಮರಳನ್ನು ಬೇರೆಡೆಗೆ ಅಕ್ರಮವಾಗಿ ಸಾಗಿಸಲು ಬಿಡುವುದಿಲ್ಲ. ಸುತ್ತಮುತ್ತಲ 10 ಹಳ್ಳಿಗಳಲ್ಲಿ
300ಕ್ಕೂ ಹೆಚ್ಚು ಕೊಳವೆಬಾವಿಗಳಿದ್ದು, ಮರಳು ತೆಗೆದರೆ ಅಂತರ್ಜಲ ಕುಸಿದು ಸಾವಿರಾರು ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಈ ಭಾಗದ ರೈತರ ವಿರೋಧ ಲೆಕ್ಕಿಸದೆ ಸರ್ಕಾರ ಐದು ವರ್ಷಗಳ ಅವಧಿಗೆ ಮರಳು
ಟೆಂಡರ್‌ ನೀಡಿರುವುದು ಈ ಭಾಗದ ಜನರಿಗೆ ಸರ್ಕಾರವೆಸಗಿದ ದ್ರೋಹವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಈ ವೇಳೆ ಮಾತನಾಡಿದ ಗ್ರಾಪಂ ಸದಸ್ಯ ಹನುಮಂತರಾಯ, ಕಳೆದ 20 ವರ್ಷಗಳಿಂದ ವೇದಾವತಿ ನದಿಪಾತ್ರದ ಮರಳನ್ನು ಸರ್ಕಾರ ಹರಾಜು ಮೂಲಕ ಕೆಲವು ಖಾಸಗಿಯವರಿಗೆ ನೀಡುತ್ತಾ ಬಂದಿದೆ. ಆದರೆ, ತೊರೆಬೀರನಹಳ್ಳಿ ಗ್ರಾಮದಲ್ಲಿ ಮಾತ್ರ ಯಾವುದೇ ಕಾರಣಕ್ಕೂ ಮರಳು ತುಂಬದಂತೆ ಕಳೆದ 20 ವರ್ಷಗಳಿಂದ ಜಾಗೃತಿ ವಹಿಸಲಾಗಿದೆ. ಗ್ರಾಮಸ್ಥರು ನಿರಂತರವಾಗಿ ವೇದಾವತಿ ನದಿಯಲ್ಲಿಯೇ ಮೊಕ್ಕಾಂ ಮಾಡಿ, ಮರಳು ಸಂರಕ್ಷಣೆ ಮಾಡಿದ್ದಾರೆ ಎಂದರು.

ಕೋನಿಗರಹಳ್ಳಿ, ಕಲಮರಹಳ್ಳಿ, ದೊಡ್ಡ ಬೀರನಹಳ್ಳಿ, ಟಿ.ಎನ್‌.ಕೋಟೆ, ಯಲಗಟ್ಟೆ, ಯಲಗಟ್ಟೆ ಗೊಲ್ಲರಹಟ್ಟಿ, ಗೊರ್ಲತ್ತು, ನಾರಾಯಣಪುರ ಮುಂತಾದ ಗ್ರಾಮಗಳ ರೈರು ಮರಳು ಸಾಗಾಣಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಸರ್ಕಾರ ಇಬ್ಬರು ವ್ಯಕ್ತಿಗಳ ಹೆಸರಿನಲ್ಲಿ ಮುಂದಿನ ಐದು ವರ್ಷಗಳ ವರೆಗೆ ಟೆಂಡರ್‌ ನೀಡಿದೆ. ಈ ಭಾಗದ ರೈತರನ್ನು, ಸಾರ್ವಜನಿಕರನ್ನು ಲೆಕ್ಕಿಸದೆ ಟೆಂಡರ್‌ ಪ್ರಕ್ರಿಯೆ ನಡೆಸಲಾಗಿದೆ. ಟೆಂಡರ್‌ ಪಡೆದವರು ಮರಳು ತುಂಬಲು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಸಹ ಗ್ರಾಮಸ್ಥರ ಮುಷ್ಕರದಿಂದ ಸಾಧ್ಯವಾಗಿಲ್ಲ. ಸರ್ಕಾರ ಈ ಟೆಂಡರನ್ನು ರದ್ದು ಪಡಿಸಬೇಕು. ನೀರಿನ ಅಂತರ್ಜಲ ಹೆಚ್ಚಿಸುವ ದೃಷ್ಠಿಯಿಂದ ಮರಳು ಟೆಂಡರ್‌ ಮರು ಪರಿಶೀಲಸಬೇಕು ಎಂದು ಆಗ್ರಹಿಸಿದರು.

ಟೆಂಟ್‌ ಹಾಕಿ ಮೊಕ್ಕಾಂ ಹೂಡಿದ ಗ್ರಾಮಸ್ಥರು: ಕಳೆದ ಐದು ದಿನಗಳಿಂದ ಗ್ರಾಮಸ್ಥರು ಕೆರೆಯಲ್ಲಿಯೇ ಅಡುಗೆ ತಯಾರಿಸಿಕೊಂಡು ಮೊಕ್ಕಾಂ ಮಾಡಿ ಪ್ರತಿಭಟನೆ ನಡೆಸುತ್ತಿದ್ದರೂ ಯಾವ ಜನಪ್ರತಿನಿಧಿಗಳು ಸಹ ಭೇಟಿ ನೀಡಿಲ್ಲ. ರೈತರ ಆಹವಾಲನ್ನು ಕೇಳಿಯೇ ಇಲ್ಲ. ಕೇವಲ ಮರಳು ಸಾಗಣೆಗೆ ಪಾತ್ರ ಶಕ್ತಿ ಮೀರಿ ಪ್ರಯತ್ನ ನಡೆಯುತ್ತಿದೆ.

ಯಾವುದೇ ಕಾರಣಕ್ಕೂ ಈ ಗ್ರಾಮದ ಮರಳು ಹೊರ ಹೋಗಲು ಬಿಡುವುದಿಲ್ಲವೆಂದು ಗ್ರಾಮಸ್ಥರಾದ ಡಾ| ಶ್ರೀನಿವಾಸ್‌, ಎಚ್‌. ರಂಗಯ್ಯ, ಗೋಪಾಲಕೃಷ್ಣ, ಬಾಲು, ಪ್ರಹ್ಲಾದ್‌, ರಾಧಮ್ಮ, ಮಂಜಮ್ಮ, ರತ್ನಮ್ಮ, ದುರುಗಮ್ಮ,
ಕರಿಯಮ್ಮ, ಲಕ್ಷ್ಮೀದೇವಿ, ಸಾಕಮ್ಮ ಇತರರು ಎಚ್ಚರಿಸಿದರು.

ಯುವ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಎಚ್‌.ಎನ್‌. ಆದರ್ಶ ಮಾತನಾಡಿ, ತೊರೆಬೀರನಹಳ್ಳಿ ಗ್ರಾಮಸ್ಥರ ಹೋರಾಟ ಅತ್ಯಂತ ನೈಜ್ಯವಾಗಿದ್ದು, ನಮ್ಮ ಸಂಘಟನೆಯೂ ಸಹ ಇವರಿಗೆ ಬೆಂಬಲ ನೀಡಲಿದೆ. ಅಕ್ರಮದ ಬಗ್ಗೆ ಈಗಾಗಲೇ ನಮ್ಮ ಸಂಘಟನೆ ಸಂಬಂಧಪಟ್ಟ ಇಲಾಖೆಗೆ ಮನವಿಯೂ ನೀಡಿದ್ದು, ಅಧಿಕಾರಿಗಳು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ರಾಜ್ಯ ಸರ್ಕಾರ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಲೋಕೋಪಯೋಗಿ ಇಲಾಖೆ ನಿಯಮದಡಿ ಹರಾಜು ಪ್ರಕ್ರಿಯೆ
ನಡೆದಿದೆ. ಜಿಲ್ಲಾಧಿ ಕಾರಿಗಳೇ ಈ ಬಗ್ಗೆ ಟೆಂಡರ್‌ ಪರಿಶೀಲನೆ ನಡೆಸಿದ್ದು, ಕಾನೂನಿನ ರೀತಿ ಮುಂದಿನ ಐದು ವರ್ಷಗಳ ಅವಧಿಗೆ ಮರಳು ಸಾಗಾಟ ಮಾಡಲು ಟೆಂಡರ್‌ ನೀಡಲಾಗಿದೆ. ಸರ್ಕಾರದ ನಿಯಮ ಪಾಲನೆಗೆ ಪೊಲೀಸ್‌ ಇಲಾಖೆ ಸಹ ಸನ್ನದ್ಧವಾಗಿದೆ. ಧರಣಿ ನಿರತ ಗ್ರಾಮಸ್ಥರ ಮನವೊಲಿಸಲಾಗುವುದು. ಸರ್ಕಾರದ ನಿಯಮದಡಿ ಮಾತ್ರ ಮರಳು ಮಾರಾಟವಾಗುತ್ತಿದೆ. ಗ್ರಾಮಸ್ಥರು ಆರೋಪದಲ್ಲಿ ಯಾವುದೇ ಉರಳಿಲ್ಲ. ನಿಯಮ ಬಿಟ್ಟು ಯಾವುದೇ ಅಕ್ರಮ ನಡೆದಿಲ್ಲ. ಅಕ್ರಮ ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. 
ಎನ್‌. ತಿಮ್ಮಣ್ಣ, ವೃತ್ತ ನಿರೀಕ್ಷಕ.

ಟಾಪ್ ನ್ಯೂಸ್

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್

I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

Minister zameer ahmed khan hospitalized at chitradurga

Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು

ಯಡಿಯೂರಪ್ಪ

Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್‌ಗೆ ಸೂಚನೆ

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

siddaramaiah

Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ‌ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ‌

10-screenshot

Students Notes: ಸ್ಕ್ರೀನ್‌ ಶಾರ್ಟ್‌ಗಳೆಂದು ಪುಸ್ತಕವಾಗದಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.