ಲಾಕ್ಡೌನ್ಗೆ ಜನರ ಡೋಂಟ್ ಕೇರ್
Team Udayavani, Jul 20, 2020, 1:25 PM IST
ಚಿತ್ರದುರ್ಗ: ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ನಿಗದಿ ಮಾಡಿರುವ ಸಂಡೇ ಲಾಕ್ಡೌನ್ಗೆ ಆಷಾಢದ ಕೊನೆಯ ಭಾನುವಾರ ತುಸು ಅಡ್ಡಿಯಾಯಿತು.
ಸತತ 3ನೇ ವಾರದ ಲಾಕ್ಡೌನ್ಗೆ ಕೋಟೆನಾಡು ಚಿತ್ರದುರ್ಗದ ಜನತೆ ಕಳೆದ 2 ವಾರಗಳಿಗೆ ಸ್ಪಂದಿಸಿದಂತೆ ಈ ವಾರ ಸ್ಪಂದಿಸಲಿಲ್ಲ. ರಸ್ತೆಯಲ್ಲಿ ಜನರ ಸಂಚಾರ ಕಾಣಿಸುತ್ತಿತ್ತು. ವಾಹನಗಳಂತೂ ವಿಪರೀತ ಎನ್ನಿಸುವಷ್ಟರ ಮಟ್ಟಿಗೆ ಸಂಚರಿಸಿದವು. ಪೊಲೀಸರು ವಿವಿಧೆಡೆ ಚೆಕ್ಪೋಸ್ಟ್ ಮಾಡಿ ಕೊಂಡು ವಾಹನ ಸವಾರರನ್ನು ತಡೆದು ಬೈದು ಬುದ್ದಿ ಹೇಳುವ ದೃಶ್ಯ ಸಾಮಾನ್ಯವಾಗಿತ್ತು. ಮಾಸ್ಕ್ ಇಲ್ಲದೆ ಅನಗತ್ಯವಾಗಿ ಬೀದಿಗೆ ಬಂದವರಿಗೆ ದಂಡ ಹಾಕುವ ಪ್ರಕ್ರಿಯೆಯೂ ನಡೆಯಿತು.
ಮಾರುಕಟ್ಟೆ, ಬಸ್ ನಿಲ್ದಾಣ, ಅಂಗಡಿ, ಮಾರುಕಟ್ಟೆ ಮಳಿಗೆಗಳು ಬಂದ್ ಆಗಿದ್ದವು. ಮಾಂಸದ ಅಂಗಡಿ ಮುಂದೆ ಕ್ಯೂ: ಇನ್ನೊಂದು ದಿನದಲ್ಲಿ ಶ್ರಾವಣ ಮಾಸ ಬರುವುದರಿಂದ ಮಾಂಸ ಪ್ರಿಯರು ಭಾನುವಾರವೇ ಮಾಂಸದೂಟ ಮಾಡಲು ನಗರದ ವಿವಿಧಡೆ ಇರುವ ಮಾಂಸದ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದರು. ಚಿಕನ್, ಮಟನ್, ಮೀನು ಖರೀದಿ ಭರಾಟೆ ಜೋರಾಗಿತ್ತು. ಕೆಲವು ಮಾಂಸದ ಅಂಗಡಿಗಳಲ್ಲಿ ಮಧ್ಯಾಹ್ನದ ವೇಳೆಗೆ ಮಾಂಸವೇ ಖಾಲಿಯಾಗಿತ್ತು. ಸೋಮವಾರ ಅಮವಾಸ್ಯೆ ಇದ್ದು, ಮಂಗಳವಾರದಿಂದ ಶ್ರಾವಣ ಮಾಸ ಆರಂಭವಾಗಲಿದೆ. ಸಂಪ್ರದಾಯ ಪಾಲಿಸುವ ಬಹುತೇಕ ಮಾಂಸಪ್ರಿಯರು ಈ ಮಾಸದಲ್ಲಿ ಮಾಂಸಾಹಾರ ಸೇವಿಸದ ಕಾರಣ ಒಂದು ತಿಂಗಳ ಕಾಲದ ಮಾಂಸದ ಉಪವಾಸಕ್ಕಾಗಿ ಭಾನುವಾರವೇ ಭರ್ಜರಿ ಬಾಡೂಟ ಮಾಡಿ ತಯಾರಾಗುತ್ತಿದ್ದ ದೃಶ್ಯಗಳು ಕಂಡು ಬಂದವು. ಈ ಕಾರಣಕ್ಕಾಗಿ ಭಾನುವಾರದ ಲಾಕ್ಡೌನ್ ಕೂಡ ಕಟ್ಟುನಿಟ್ಟಾಗಿ ಜಾರಿಯಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ
Chitradurga; ಆರೋಗ್ಯದಲ್ಲಿ ಏರುಪೇರು: ಸಚಿವ ಜಮೀರ್ ಅಹಮದ್ ಖಾನ್ ಆಸ್ಪತ್ರೆಗೆ ದಾಖಲು
Chitradurga: ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ: ಯಡಿಯೂರಪ್ಪ
MUST WATCH
ಹೊಸ ಸೇರ್ಪಡೆ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ