ಹೈವೋಲ್ಟೇಜ್ ವಿದ್ಯುತ್ ಮಾರ್ಗ ಬದಲಿಸಲು ಮನವಿ
Team Udayavani, May 25, 2022, 5:42 PM IST
ಚಿತ್ರದುರ್ಗ: ಇಂಗಳದಾಳ್ ಗ್ರಾಮದ ಮನೆಗಳ ಪಕ್ಕದಲ್ಲೇ ತೆಗೆದುಕೊಂಡು ಹೋಗುತ್ತಿರುವ ಹೈವೋಲ್ಟೇಜ್ ವಿದ್ಯುತ್ ಮಾರ್ಗವನ್ನು ಬದಲಿ ಮಾರ್ಗದಲ್ಲಿ ತೆಗೆದುಕೊಂಡು ಹೋಗುವಂತೆ ಸೂಚಿಸಲು ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ತಾಲೂಕಿನ ಇಂಗಳದಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುರುಮರಡಿಕೆರೆ ಬಳಿ ಗಾಳಿ ವಿದ್ಯುತ್ ಯಂತ್ರಗಳನ್ನು ಅಳವಡಿಸಲಾಗಿದೆ. ಅಲ್ಲಿಂದ ಸುಮಾರು 66 ಸಾವಿರ ಕೆ.ವಿ ವಿದ್ಯುತ್ ಮಾರ್ಗವನ್ನು ರೈತರ ಜಮೀನು ಹಾಗೂ ಇಂಗಳದಾಳ್ ಗ್ರಾಮದ 15-20 ಮನೆಗಳ ಮುಂಭಾಗದಲ್ಲೇ ತೆಗೆದುಕೊಂಡು ಹೋಗಲಾಗುತ್ತಿದೆ. ಒಂದು ವೇಳೆ ತಂತಿ ಹರಿದು ಬೀಳುವುದು ಇನ್ನಿತರ ಅವಘಡ ಸಂಭವಿಸಿದಾಗ ಭಾರೀ ಅನಾಹುತವಾಗುತ್ತದೆ. ಎಷ್ಟು ಕೋಟಿ ಪರಿಹಾರ ಕೊಟ್ಟರೂ ಜೀವ ವಾಪಸ್ ಬರುವುದಿಲ್ಲ. ಆದ್ದರಿಂದ ಹಳ್ಳಿಯಿಂದ ದೂರದಲ್ಲಿ ನಿಯಮಾನುಸಾರ ವಿದ್ಯುತ್ ಲೈನ್ ಎಳೆಯಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಪಿಡಿಒ, ತಹಶೀಲ್ದಾರ್ ಅವರಿಗೂ ಮನವಿ ಸಲ್ಲಿಸಿದ್ದೇವೆ ಎಂದು ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಅವರಿಗೆ ಇಂಗಳದಾಳ್ ಗ್ರಾಮಸ್ಥರು ತಿಳಿಸಿದರು.
ಈ ವೇಳೆ ಗ್ರಾಪಂ ಸದಸ್ಯ ಪ್ರಕಾಶ್, ಮುಖಂಡರಾದ ಪಿ.ಹನುಮಣ್ಣ, ಬಸವರಾಜ್, ಸತೀಶ್, ಭೀಮಣ್ಣ, ಹನುಮಕ್ಕ, ಕಮಲಮ್ಮ, ತಾಯಮ್ಮ, ಶ್ರೀಧರ್, ಮಹಂತೇಶ್, ಧರ್ಮೇಂದ್ರ, ಉಮೇಶ್, ವಸಂತ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!