ಚಿತ್ರದುರ್ಗ: ಸೋನು ಸೂದ್ ಭರವಸೆ ನೀಡಿ ವಾರವಾದರೂ ಇನ್ನೂ ತಲುಪಿಲ್ಲ ಚುಚ್ಚುಮದ್ದು!
Team Udayavani, May 18, 2021, 8:56 AM IST
ಚಿತ್ರದುರ್ಗ: ಇಲ್ಲಿನ ಕೋವಿಡ್ ಸೋಂಕಿತ ವಿನಯ್ ಎಂಬುವವರಿಗೆ ರೆಮ್ಡೆಸಿವಿಯರ್ ಚುಚ್ಚುಮದ್ದು ತಲುಪಿಸುವುದಾಗಿ ಬಾಲಿವುಡ್ ನಟ ಸೋನು ಸೂದ್ ಟ್ವಿಟರ್ನಲ್ಲಿ ಭರವಸೆ ನೀಡಿ ವಾರವಾದರೂ ತಲುಪದ ಕಾರಣ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
“ರೆಮ್ಡೆಸಿವಿಯರ್ ಪೂರೈಕೆ ಬಗ್ಗೆ ಕಾಳಜಿ ತೋರಿಸಿದ ಹರ್ಭಜನ್ ಸಿಂಗ್ ಹಾಗೂ ಸೋನು ಸೂದ್ ಅವರಿಗೆ ಧನ್ಯವಾದ ಹೇಳುತ್ತೇನೆ. ಆದರೆ ಈವರೆಗೆ ಸೋನು ಸೂದ್ ಕಡೆಯವರಿಂದ ಫೋನ್ ಕಾಲ್ ಬಂದಿಲ್ಲ. ಚುಚ್ಚುಮದ್ದೂ ತಲುಪಿಲ್ಲ. ನಮಗೆ ಸಮಸ್ಯೆ ಆಗಿತ್ತು. ಈಗ ಆಸ್ಪತ್ರೆಯವರು ಹಾಗೂ ಸಂಬಂಧಿಕರು ಸೇರಿ ವ್ಯವಸ್ಥೆ ಮಾಡಿದ್ದಾರೆ’ ಎಂದು ವಿನಯ್ ಪತ್ನಿ ಪೂಜಾ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನಾವು ಯಶಸ್ಸು ಕಾಣಬೇಕಾದರೆ ಬಿಜೆಪಿಯಂತೆ ದೊಡ್ಡದಾಗಿ ಯೋಚಿಸಬೇಕು: ಹಿರಿಯ ಕಾಂಗ್ರೆಸ್ ನಾಯಕ
ಕಳೆದ ವಾರ ವಿನಯ್ಗೆ ಚುಚ್ಚುಮದ್ದು ಅಗತ್ಯವಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಲಾಗಿತ್ತು. ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನಟ ಸೋನು ಸೂದ್ ಚುಚ್ಚುಮದ್ದು ತಲುಪಲಿದೆ ಭಜಿ ಎಂದಿದ್ದರು. ಇದರಿಂದ ವಿನಯ್ ಹಾಗೂ ಅವರ ಪತ್ನಿ ಸಂತಸಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್
Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್
Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್’ ಎಂದ ಬಿಜೆಪಿಗರು!
Narayan Gowda: ಹೆಚ್ಚಿನ ಮತಗಳಿಂದ ಎಚ್ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ
MUST WATCH
ಹೊಸ ಸೇರ್ಪಡೆ
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ